ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ, ಭಾರತೀಯ ಮಜ್ದೂರ್ ಸಂಘ ಸೇರಿ ಫೆ.6 ರಿಂದ 10 ರವರೆಗೆ ಐದು ದಿನ ಮುಷ್ಕರ ಕರೆ ನೀಡಿತ್ತು. ಹೋರಾಟ ಯಶಸ್ವಿಯಾಗಿದ್ದು, ಸರ್ಕಾರದಿಂದ ಬಿಎಂಎಸ್ (ಭಾರತೀಯ ಮುಜದೂರ್ ಸಂಘದ ಸಂಯೋಜಿತ) ಹಿರಿಯರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಫೆ.9ರಂದು ಸಭೆ ಕರೆದು, ಶೇ 15ರಷ್ಟು ವೇತನ ಹೆಚ್ಚಳ ಹಾಗೂ 60 ವರ್ಷದವರೆಗಿನ ಸೇವಾ ಭದ್ರತೆ ನೀಡಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.