ಭೀಮ್ ಆರ್ಮಿ ಜಿಲ್ಲಾ ಅಧ್ಯಕ್ಷ ಎಚ್.ಎಸ್. ಪ್ರದೀಪ್ ಮಾತನಾಡಿ, ‘ಮಹಿಷಾಸುರನನ್ನು ಕೆಟ್ಟವನಾಗಿ
ಬಿಂಬಿಸಲಾಗಿದೆ. ಆದರೆ, ಆತ ಕೆಟ್ಟವನಲ್ಲ, ಉತ್ತಮ ಆಡಳಿತಗಾರ ನಾಗಿದ್ದ. ಮೂಲ ನಿವಾಸಿಗಳ ದೊರೆ ಮಹಿಷಾಸುರ. ಮಹಿಷ ಮಂಡಲ ವಾಗಿದ್ದ ಮೈಸೂರಿಗೆ ಮಹಿಷಾ ಸುರನಿಂದಾಗಿ ಮೈಸೂರು ಎಂಬ ಹೆಸರು ಬಂದಿದೆ. ಹಾಗಾಗಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಮಹಿಷಾಸುರ ದಸರೆ ಆಚರಣೆ ಮಾಡಲಾಗುತ್ತಿದೆ’ ಎಂದರು.