<p><strong>ಹೆತ್ತೂರು: </strong>ಸಮೀಪದ ಮೂಕನಮನೆ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.</p>.<p>ತಾಲ್ಲೂಕು ಕೇಂದ್ರ ಸಕಲೇಶಪುರದಿಂದ 48 ಕಿ.ಮೀ ಹಾಗೂ ಹೆತ್ತೂರಿನಿಂದ 12 ಕಿ.ಮೀ ದೂರದಲ್ಲಿರುವ ಮೂಕನಮನೆ ಜಲಪಾತ ಭೋರ್ಗರೆದು ಹರಿಯುತ್ತಿದೆ.</p>.<p>ಮಳೆಗಾಲ ಹಾಗೂ ಬೇಸಿಗೆ ವೇಳೆಯಲ್ಲಿಯೂ ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಿ ದ್ದರು. ಜಿಲ್ಲೆಯಲ್ಲಿ ಲಾಕ್ಡೌನ್ ವಿಸ್ತರಣೆ ಆದ್ದರಿಂದ ಜಲಪಾತದ ಸೌಂದರ್ಯ ಸವಿಯಲು ಪ್ರವಾಸಿಗರು<br />ಬರುತ್ತಿಲ್ಲ.</p>.<p>ವಾಹನ ನಿಲುಗಡೆ ಸ್ಥಳದಿಂದ ಜಲಪಾತದ ಸನಿಹದವರೆಗೂ ಕಿರಿದಾದ ರಸ್ತೆಯಲ್ಲಿ ಪ್ರವಾಸಿಗರು ಸಾಗಬೇಕು. ಮೋಜು, ಮಸ್ತಿ ಮಾಡಲು ಜಲಪಾತದ ನೀರಿಗಿಳಿದು ಸುಳಿಯಲ್ಲಿ ಸಿಲುಕಿ ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಟು ಗ್ರಾಮಗಳ ಪೈಕಿ ಮೂಕನಮನೆ ಗ್ರಾಮವೂ ಒಂದು. ಜಲಪಾತದಿಂದಾಗಿ ಈ ಹಳ್ಳಿ ಹೆಚ್ಚು ಪ್ರಸಿದ್ಧಿ<br />ಪಡೆದಿದೆ.</p>.<p>ಮಳೆಗಾಲದಲ್ಲಿ ಧುಮ್ಮಿಕ್ಕುವ ಜಲಪಾತವನ್ನು ಕಣ್ತುಂಬಿಕೊಳ್ಳುವುದೇ ಒಂದು ಆನಂದ. ಮೂಕನಮನೆ ಹಳ್ಳವು ಮುಂದೆ ಕೆಂಪು ಹೊಳೆ ಸೇರುತ್ತದೆ. ಪ್ರವಾಸಿಗರಿಲ್ಲದೇ ಈ ಭಾಗದ ಹೋಂಸ್ಟೇ, ರೇಸಾರ್ಟ್ಗಳೂ ಖಾಲಿ ಖಾಲಿಯಾಗಿವೆ.</p>.<p>‘ಜಲಪಾತದ ಸನಿಹಕ್ಕೆ ತೆರಳುವುದನ್ನು ತಪ್ಪಿಸಲು ಹಾಗೂ ಮೋಜು ಮಸ್ತಿಗೆ ಕಡಿವಾಣ ಹಾಕಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರಾದ ರಾಜು<br />ಆಗ್ರಹಿಸಿದ್ದಾರೆ</p>.<p>‘ಪ್ರವಾಸಿಗರಿಗೆ ಸರಿಯಾದ ಮೂಲ ಸೌಕರ್ಯಗಳಿಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಸಂಬಂಧಪಟ್ಟ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಿದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುತ್ತದೆ’ ಎಂದು ಕಾಗಿನಹರೆ ಗ್ರಾಮಸ್ಥ ಚಂದ್ರು ಒತ್ತಾಯಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆತ್ತೂರು: </strong>ಸಮೀಪದ ಮೂಕನಮನೆ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.</p>.<p>ತಾಲ್ಲೂಕು ಕೇಂದ್ರ ಸಕಲೇಶಪುರದಿಂದ 48 ಕಿ.ಮೀ ಹಾಗೂ ಹೆತ್ತೂರಿನಿಂದ 12 ಕಿ.ಮೀ ದೂರದಲ್ಲಿರುವ ಮೂಕನಮನೆ ಜಲಪಾತ ಭೋರ್ಗರೆದು ಹರಿಯುತ್ತಿದೆ.</p>.<p>ಮಳೆಗಾಲ ಹಾಗೂ ಬೇಸಿಗೆ ವೇಳೆಯಲ್ಲಿಯೂ ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಿ ದ್ದರು. ಜಿಲ್ಲೆಯಲ್ಲಿ ಲಾಕ್ಡೌನ್ ವಿಸ್ತರಣೆ ಆದ್ದರಿಂದ ಜಲಪಾತದ ಸೌಂದರ್ಯ ಸವಿಯಲು ಪ್ರವಾಸಿಗರು<br />ಬರುತ್ತಿಲ್ಲ.</p>.<p>ವಾಹನ ನಿಲುಗಡೆ ಸ್ಥಳದಿಂದ ಜಲಪಾತದ ಸನಿಹದವರೆಗೂ ಕಿರಿದಾದ ರಸ್ತೆಯಲ್ಲಿ ಪ್ರವಾಸಿಗರು ಸಾಗಬೇಕು. ಮೋಜು, ಮಸ್ತಿ ಮಾಡಲು ಜಲಪಾತದ ನೀರಿಗಿಳಿದು ಸುಳಿಯಲ್ಲಿ ಸಿಲುಕಿ ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಟು ಗ್ರಾಮಗಳ ಪೈಕಿ ಮೂಕನಮನೆ ಗ್ರಾಮವೂ ಒಂದು. ಜಲಪಾತದಿಂದಾಗಿ ಈ ಹಳ್ಳಿ ಹೆಚ್ಚು ಪ್ರಸಿದ್ಧಿ<br />ಪಡೆದಿದೆ.</p>.<p>ಮಳೆಗಾಲದಲ್ಲಿ ಧುಮ್ಮಿಕ್ಕುವ ಜಲಪಾತವನ್ನು ಕಣ್ತುಂಬಿಕೊಳ್ಳುವುದೇ ಒಂದು ಆನಂದ. ಮೂಕನಮನೆ ಹಳ್ಳವು ಮುಂದೆ ಕೆಂಪು ಹೊಳೆ ಸೇರುತ್ತದೆ. ಪ್ರವಾಸಿಗರಿಲ್ಲದೇ ಈ ಭಾಗದ ಹೋಂಸ್ಟೇ, ರೇಸಾರ್ಟ್ಗಳೂ ಖಾಲಿ ಖಾಲಿಯಾಗಿವೆ.</p>.<p>‘ಜಲಪಾತದ ಸನಿಹಕ್ಕೆ ತೆರಳುವುದನ್ನು ತಪ್ಪಿಸಲು ಹಾಗೂ ಮೋಜು ಮಸ್ತಿಗೆ ಕಡಿವಾಣ ಹಾಕಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರಾದ ರಾಜು<br />ಆಗ್ರಹಿಸಿದ್ದಾರೆ</p>.<p>‘ಪ್ರವಾಸಿಗರಿಗೆ ಸರಿಯಾದ ಮೂಲ ಸೌಕರ್ಯಗಳಿಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಸಂಬಂಧಪಟ್ಟ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಿದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುತ್ತದೆ’ ಎಂದು ಕಾಗಿನಹರೆ ಗ್ರಾಮಸ್ಥ ಚಂದ್ರು ಒತ್ತಾಯಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>