<p><strong>ಹಾಸನ: </strong>ರಾಜ್ಯ ಸರ್ಕಾರ ಸಿದ್ದಪಡಿಸಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ಪಟ್ಟಿಯಲ್ಲಿ ಜಿಲ್ಲೆಯ ನಾಲ್ಕುದೇವಾಲಯಗಳು ಸೇರಿವೆ. ಸರ್ಕಾರದಿಂದ ಸ್ಪಷ್ಟ ಮಾರ್ಗಸೂಚಿ ಬರುವವರೆಗೂ ಕಾದು ನೋಡಲುಜಿಲ್ಲಾಡಳಿತ ಮುಂದಾಗಿದೆ.</p>.<p>ಅರಸೀಕೆರೆ ತಾಲ್ಲೂಕಿನ ಬೊಮ್ಮೇನಹಳ್ಳಿಯ ಪ್ಲೇಗಿನಮ್ಮ ಮತ್ತು ಕಾರೇಹಳ್ಳಿಯ ಮಾರ್ಗದಮ್ಮ ದೇವಸ್ಥಾನ,ಚನ್ನರಾಯಪಟ್ಟಣ–ಶ್ರವಣಬೆಳಗೊಳ ನಡುವಿನ ಜನಿವಾರ ಕೆರೆ ಏರಿ ಮೇಲಿರುವ ಏರಿ ಮಾರಮ್ಮ ಮತ್ತುಹಾಸನ ತಾಲ್ಲೂಕಿನ ಶಾಂತಿಗ್ರಾಮ–ಹೊಂಗೆರೆ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಾಲಯಗಳುಜಿಲ್ಲೆಯ ಅನಧಿಕೃತ ಧಾರ್ಮಿಕ ಕಟ್ಟಡಗಳ ಪಟ್ಟಿಯಲ್ಲಿವೆ.</p>.<p>ಸಾರ್ವಜನಿಕ ರಸ್ತೆಯ 100 ಮೀಟರ್ ವ್ಯಾಪ್ತಿಯಲ್ಲಿರುವ ಹಾಗೂ ರಸ್ತೆ ಮಧ್ಯದಲ್ಲಿರುವ ಧಾರ್ಮಿಕಕಟ್ಟಡಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ 2006ರಲ್ಲಿಯೇ ಆದೇಶಿಸಿತ್ತು. ಈ ಕಾರ್ಯಪೂರ್ಣಗೊಳಿಸಲು 2009ರ ಸೆ.9ರ ವರೆಗೂ ಗಡುವು ನೀಡಲಾಗಿತ್ತು. ಆ ಸಂಬಂಧ ಮೊದಲು ಸಿದ್ದಗೊಂಡಪಟ್ಟಿಯಲ್ಲಿ ಜಿಲ್ಲೆಯಲ್ಲಿ ತೆರವುಗೊಳಿಸಬೇಕಾದ 97 ಧಾರ್ಮಿಕ ಕಟ್ಟಡಗಳನ್ನು ಗುರುತಿಸಲಾಗಿತ್ತು. ಕೋರ್ಟ್ಗಡುವಿನ ಒಳಗೆ 75 ಕಟ್ಟಡಗಳನ್ನು ಜಿಲ್ಲಾಡಳಿತ ತೆರವುಗೊಳಿಸಿತ್ತು.</p>.<p>2009ರ ಗಡುವು ಮುಗಿದ ನಂತರವೂ ಬಾಕಿ ಉಳಿದಿದ್ದ 22 ಧಾರ್ಮಿಕ ಕಟ್ಟಡಗಳ ಪೈಕಿ ಇಪ್ಪತ್ತನ್ನುನಂತರ ದಿನಗಳಲ್ಲಿ ತೆರವುಗೊಳಿಸಲಾಗಿತ್ತು. ಈ ನಡುವೆ ಕೋರ್ಟ್ ಆದೇಶ ಪಾಲನೆ ಹಾಗೂ ಅಕ್ರಮನಿರ್ಮಾಣಗಳ ತೆರವು ಸಂಬಂಧ ಕ್ರಮ ಕೈಗೊಂಡಿರುವ ಬಗ್ಗೆ 2019 ಹಾಗೂ 2020ರಲ್ಲಿ ಹೈಕೋರ್ಟ್ರಾಜ್ಯ ಸರ್ಕಾರದಿಂದ ವರದಿ ಕೇಳಿತ್ತು.</p>.<p>ತೆರವಾಗದೆ ಉಳಿದಿರುವ ಎರಡು ದೇವಾಲಯಗಳ ಜತೆಗೆ ಇತ್ತೀಚೆಗೆ ನಿರ್ಮಾಣಗೊಂಡಿರುವ ಇನ್ನೇರಡುದೇವಾಲಯಗಳು ಸೇರ್ಪಡೆಯಾಗಿವೆ. ಅವುಗಳನ್ನು ತೆರವು ಮಾಡುವಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಜಿಲ್ಲಾಧಿಕಾರಿಗೆ ಜುಲೈ 1ರಂದು ನಿರ್ದೇಶನ ನೀಡಿದ್ದರು. ಅಲ್ಲದೆ, ಅನಧಿಕೃತ ಕಟ್ಟಡ ತೆರವಿಗೆಕೈಗೊಂಡಿರುವ ಕ್ರಮದ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು.</p>.<p>ಜಿಲ್ಲೆಯಲ್ಲಿ ನಾಲ್ಕು ದೇಗುಲಗಳ ತೆರವಿಗೆ ಸರ್ಕಾರ ನೀಡಿರುವ ನಿರ್ದೇಶನದ ಬಗ್ಗೆ ಜಿಲ್ಲಾಡಳಿತ ಶಾಸಕರಿಗೆಮನವರಿಕೆ ಮಾಡಿಕೊಟ್ಟಿದೆ. ಆದರೆ ಶಾಂತಿಗ್ರಾಮ ಬಳಿ ಇರುವ ಆಂಜನೇಯ ಸ್ವಾಮಿ ದೇವಾಲಯ ತೆರವಿಗೆಕೋರ್ಟ್ ತಡೆ ನೀಡಿದೆ.</p>.<p>ನೂರಾರು ವರ್ಷ ಇತಿಹಾಸ ಹೊಂದಿರುವ ಆಂಜನೇಯ ಸ್ವಾಮಿ ದೇವಾಲಯ ಉಳಿವಿಗೆ ಗ್ರಾಮಸ್ಥರುಹೋರಾಟ ನಡೆಸುತ್ತಿದ್ದಾರೆ. ಹೈಕೋರ್ಟ್ ನಿಂದ ಎರಡು ಬಾರಿ ತಡೆಯಾಜ್ಞೆ ತಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>ರಾಜ್ಯ ಸರ್ಕಾರ ಸಿದ್ದಪಡಿಸಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ಪಟ್ಟಿಯಲ್ಲಿ ಜಿಲ್ಲೆಯ ನಾಲ್ಕುದೇವಾಲಯಗಳು ಸೇರಿವೆ. ಸರ್ಕಾರದಿಂದ ಸ್ಪಷ್ಟ ಮಾರ್ಗಸೂಚಿ ಬರುವವರೆಗೂ ಕಾದು ನೋಡಲುಜಿಲ್ಲಾಡಳಿತ ಮುಂದಾಗಿದೆ.</p>.<p>ಅರಸೀಕೆರೆ ತಾಲ್ಲೂಕಿನ ಬೊಮ್ಮೇನಹಳ್ಳಿಯ ಪ್ಲೇಗಿನಮ್ಮ ಮತ್ತು ಕಾರೇಹಳ್ಳಿಯ ಮಾರ್ಗದಮ್ಮ ದೇವಸ್ಥಾನ,ಚನ್ನರಾಯಪಟ್ಟಣ–ಶ್ರವಣಬೆಳಗೊಳ ನಡುವಿನ ಜನಿವಾರ ಕೆರೆ ಏರಿ ಮೇಲಿರುವ ಏರಿ ಮಾರಮ್ಮ ಮತ್ತುಹಾಸನ ತಾಲ್ಲೂಕಿನ ಶಾಂತಿಗ್ರಾಮ–ಹೊಂಗೆರೆ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಾಲಯಗಳುಜಿಲ್ಲೆಯ ಅನಧಿಕೃತ ಧಾರ್ಮಿಕ ಕಟ್ಟಡಗಳ ಪಟ್ಟಿಯಲ್ಲಿವೆ.</p>.<p>ಸಾರ್ವಜನಿಕ ರಸ್ತೆಯ 100 ಮೀಟರ್ ವ್ಯಾಪ್ತಿಯಲ್ಲಿರುವ ಹಾಗೂ ರಸ್ತೆ ಮಧ್ಯದಲ್ಲಿರುವ ಧಾರ್ಮಿಕಕಟ್ಟಡಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ 2006ರಲ್ಲಿಯೇ ಆದೇಶಿಸಿತ್ತು. ಈ ಕಾರ್ಯಪೂರ್ಣಗೊಳಿಸಲು 2009ರ ಸೆ.9ರ ವರೆಗೂ ಗಡುವು ನೀಡಲಾಗಿತ್ತು. ಆ ಸಂಬಂಧ ಮೊದಲು ಸಿದ್ದಗೊಂಡಪಟ್ಟಿಯಲ್ಲಿ ಜಿಲ್ಲೆಯಲ್ಲಿ ತೆರವುಗೊಳಿಸಬೇಕಾದ 97 ಧಾರ್ಮಿಕ ಕಟ್ಟಡಗಳನ್ನು ಗುರುತಿಸಲಾಗಿತ್ತು. ಕೋರ್ಟ್ಗಡುವಿನ ಒಳಗೆ 75 ಕಟ್ಟಡಗಳನ್ನು ಜಿಲ್ಲಾಡಳಿತ ತೆರವುಗೊಳಿಸಿತ್ತು.</p>.<p>2009ರ ಗಡುವು ಮುಗಿದ ನಂತರವೂ ಬಾಕಿ ಉಳಿದಿದ್ದ 22 ಧಾರ್ಮಿಕ ಕಟ್ಟಡಗಳ ಪೈಕಿ ಇಪ್ಪತ್ತನ್ನುನಂತರ ದಿನಗಳಲ್ಲಿ ತೆರವುಗೊಳಿಸಲಾಗಿತ್ತು. ಈ ನಡುವೆ ಕೋರ್ಟ್ ಆದೇಶ ಪಾಲನೆ ಹಾಗೂ ಅಕ್ರಮನಿರ್ಮಾಣಗಳ ತೆರವು ಸಂಬಂಧ ಕ್ರಮ ಕೈಗೊಂಡಿರುವ ಬಗ್ಗೆ 2019 ಹಾಗೂ 2020ರಲ್ಲಿ ಹೈಕೋರ್ಟ್ರಾಜ್ಯ ಸರ್ಕಾರದಿಂದ ವರದಿ ಕೇಳಿತ್ತು.</p>.<p>ತೆರವಾಗದೆ ಉಳಿದಿರುವ ಎರಡು ದೇವಾಲಯಗಳ ಜತೆಗೆ ಇತ್ತೀಚೆಗೆ ನಿರ್ಮಾಣಗೊಂಡಿರುವ ಇನ್ನೇರಡುದೇವಾಲಯಗಳು ಸೇರ್ಪಡೆಯಾಗಿವೆ. ಅವುಗಳನ್ನು ತೆರವು ಮಾಡುವಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಜಿಲ್ಲಾಧಿಕಾರಿಗೆ ಜುಲೈ 1ರಂದು ನಿರ್ದೇಶನ ನೀಡಿದ್ದರು. ಅಲ್ಲದೆ, ಅನಧಿಕೃತ ಕಟ್ಟಡ ತೆರವಿಗೆಕೈಗೊಂಡಿರುವ ಕ್ರಮದ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು.</p>.<p>ಜಿಲ್ಲೆಯಲ್ಲಿ ನಾಲ್ಕು ದೇಗುಲಗಳ ತೆರವಿಗೆ ಸರ್ಕಾರ ನೀಡಿರುವ ನಿರ್ದೇಶನದ ಬಗ್ಗೆ ಜಿಲ್ಲಾಡಳಿತ ಶಾಸಕರಿಗೆಮನವರಿಕೆ ಮಾಡಿಕೊಟ್ಟಿದೆ. ಆದರೆ ಶಾಂತಿಗ್ರಾಮ ಬಳಿ ಇರುವ ಆಂಜನೇಯ ಸ್ವಾಮಿ ದೇವಾಲಯ ತೆರವಿಗೆಕೋರ್ಟ್ ತಡೆ ನೀಡಿದೆ.</p>.<p>ನೂರಾರು ವರ್ಷ ಇತಿಹಾಸ ಹೊಂದಿರುವ ಆಂಜನೇಯ ಸ್ವಾಮಿ ದೇವಾಲಯ ಉಳಿವಿಗೆ ಗ್ರಾಮಸ್ಥರುಹೋರಾಟ ನಡೆಸುತ್ತಿದ್ದಾರೆ. ಹೈಕೋರ್ಟ್ ನಿಂದ ಎರಡು ಬಾರಿ ತಡೆಯಾಜ್ಞೆ ತಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>