ಜಯಂತಿಗಳಿಗೆ ಜನರ ಸಂಖ್ಯೆ ಕ್ಷೀಣ
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಮಹನೀಯರ ಜಯಂತಿ ಹಾಗೂ ಸ್ಮರಣೆ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಕೊರತೆ ಎದ್ದು ಕಾಣುತ್ತಿದೆ. ನಗರದ ಹಾಸನಾಂಬ ಕಲಾಕ್ಷೇತ್ರ ಅಂಬೇಡ್ಕರ್ ಭವನ ಸೇರಿದಂತೆ ಇತರೆ ದೊಡ್ಡ ಸಭಾಂಗಣಗಳಲ್ಲಿ ಮಹನೀಯರ ಜಯಂತಿ ಆಚರಿಸಲಾಗುತ್ತದೆ. ಆದರೆ ಬೆರಳೆಣಿಕೆಯಷ್ಟು ಮಾತ್ರ ಜನರು ಭಾಗವಹಿಸುತ್ತಿದ್ದು ಕಾರ್ಯಕ್ರಮದ ಉದ್ದೇಶವೇ ಈಡೇರದಂತಾಗಿದೆ ಎಂದು ಸಂಘಟನೆಗಳ ಮುಖಂಡರು ಹೇಳುತ್ತಿದ್ದಾರೆ. ಒಂದೆರಡು ದಿನ ಮುಂಚಿತವಾಗಿ ಸಂಬಂಧಪಟ್ಟ ಶಾಲೆ– ಕಾಲೇಜುಗಳ ಮುಖ್ಯಸ್ಥರಿಗೆ ಮಾಹಿತಿ ಒದಗಿಸಿದರೆ ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಹೆಚ್ಚಲಿದ್ದು ಮುಂದಿನ ಪೀಳಿಗೆಗಾದರೂ ಮಹನೀಯರ ಸಂದೇಶಗಳು ತಲುಪಲಿವೆ ಎಂದು ಹಲವರು ಸಲಹೆ ನೀಡಿದರು.