<p><strong>ಆಲೂರು:</strong> ತಾಲ್ಲೂಕಿನ ಕಿತ್ತಗೆರೆ ವ್ಯಾಪ್ತಿ ಹೇಮಾವತಿ ನದಿಯಲ್ಲಿ ಅಕ್ರಮವಾಗಿ ತೆಗೆದಿದ್ದ ಮರಳು ಮತ್ತು ತೆಪ್ಪಗಳನ್ನು ಗ್ರೇಡ್-2 ತಹಸೀಲ್ದಾರ್ ಕೆ.ಆರ್.ಪೂರ್ಣಿಮಾ ನೇತೃತ್ವದಲ್ಲಿ ವಶಪಡಿಸಿಕೊಂಡು ನಿಯಮಾನುಸಾರ ಕ್ರಮ ವಹಿಸಲಾಗಿದೆ.</p>.<p>ಅಲೂರು, ಸಕಲೇಶಪುರ ಮತ್ತು ಬೇಲೂರು ತಾಲ್ಲೂಕು ವ್ಯಾಪ್ತಿ ಯಲ್ಲಿ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬ ಸುದ್ದಿ ತಿಳಿದು ಗಣಿಗಾರಿಕೆ ಅಧಿಕಾರಿಗಳು, ಪೊಲೀಸರು ಮತ್ತು ತಾಲ್ಲೂಕಿನ ಮರಳು ಸಮಿತಿ ಸದಸ್ಯರೊಂದಿಗೆ ತಡರಾತ್ರಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.</p>.<p>ಮರಳನ್ನು ವಶಕ್ಕೆ ಪಡೆದ ನಂತರ ಸ್ಥಳಕ್ಕೆ ಟ್ರ್ಯಾಕ್ಟರ್, ಜೆಸಿಬಿ ತರಿಸಿಕೊಂಡು ಕೆ.ಎಂ.ಎಂ.ಸಿ.ಆರ್ -1994 ನಿಯಮದಲ್ಲಿಲ ಅವಕಾಶದಂತೆ, ಸ್ಥಳದಲ್ಲೇ ಸದರಿ ಮರಳನ್ನು ಸರ್ಕಾರಿ ಕಾಮಗಾರಿಗೆ ಲೋಕೋಪಯೋಗಿ ಎಸ್.ಆರ್ ದರದಂತೆ ಸಂಬಂಧಿಸಿದ ಶುಲ್ಕ ₹63,300 ಸರ್ಕಾರಕ್ಕೆ ಪಾವತಿಸಿ ಮರಳನ್ನು ತಡರಾತ್ರಿ 3 ಗಂಟೆಗೆ ವಿಲೇವಾರಿ ಮಾಡಲಾಯಿತು ಎಂದರು.</p>.<p>ವಶಕ್ಕೆ ಪಡೆದ ಎರಡು ತೆಪ್ಪಗಳು, ಆರು ಲಾರಿ ಲೋಡ್ ಮರಳನ್ನು ಆಲೂರು ಪೊಲೀಸ್ ಠಾಣೆಗೆ ನೀಡಲಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲೂರು:</strong> ತಾಲ್ಲೂಕಿನ ಕಿತ್ತಗೆರೆ ವ್ಯಾಪ್ತಿ ಹೇಮಾವತಿ ನದಿಯಲ್ಲಿ ಅಕ್ರಮವಾಗಿ ತೆಗೆದಿದ್ದ ಮರಳು ಮತ್ತು ತೆಪ್ಪಗಳನ್ನು ಗ್ರೇಡ್-2 ತಹಸೀಲ್ದಾರ್ ಕೆ.ಆರ್.ಪೂರ್ಣಿಮಾ ನೇತೃತ್ವದಲ್ಲಿ ವಶಪಡಿಸಿಕೊಂಡು ನಿಯಮಾನುಸಾರ ಕ್ರಮ ವಹಿಸಲಾಗಿದೆ.</p>.<p>ಅಲೂರು, ಸಕಲೇಶಪುರ ಮತ್ತು ಬೇಲೂರು ತಾಲ್ಲೂಕು ವ್ಯಾಪ್ತಿ ಯಲ್ಲಿ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬ ಸುದ್ದಿ ತಿಳಿದು ಗಣಿಗಾರಿಕೆ ಅಧಿಕಾರಿಗಳು, ಪೊಲೀಸರು ಮತ್ತು ತಾಲ್ಲೂಕಿನ ಮರಳು ಸಮಿತಿ ಸದಸ್ಯರೊಂದಿಗೆ ತಡರಾತ್ರಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.</p>.<p>ಮರಳನ್ನು ವಶಕ್ಕೆ ಪಡೆದ ನಂತರ ಸ್ಥಳಕ್ಕೆ ಟ್ರ್ಯಾಕ್ಟರ್, ಜೆಸಿಬಿ ತರಿಸಿಕೊಂಡು ಕೆ.ಎಂ.ಎಂ.ಸಿ.ಆರ್ -1994 ನಿಯಮದಲ್ಲಿಲ ಅವಕಾಶದಂತೆ, ಸ್ಥಳದಲ್ಲೇ ಸದರಿ ಮರಳನ್ನು ಸರ್ಕಾರಿ ಕಾಮಗಾರಿಗೆ ಲೋಕೋಪಯೋಗಿ ಎಸ್.ಆರ್ ದರದಂತೆ ಸಂಬಂಧಿಸಿದ ಶುಲ್ಕ ₹63,300 ಸರ್ಕಾರಕ್ಕೆ ಪಾವತಿಸಿ ಮರಳನ್ನು ತಡರಾತ್ರಿ 3 ಗಂಟೆಗೆ ವಿಲೇವಾರಿ ಮಾಡಲಾಯಿತು ಎಂದರು.</p>.<p>ವಶಕ್ಕೆ ಪಡೆದ ಎರಡು ತೆಪ್ಪಗಳು, ಆರು ಲಾರಿ ಲೋಡ್ ಮರಳನ್ನು ಆಲೂರು ಪೊಲೀಸ್ ಠಾಣೆಗೆ ನೀಡಲಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>