<p><strong>ಅಹಮದಾಬಾದ್:</strong> ಕರುಣ್ ನಾಯರ್ ಮತ್ತು ಆರ್. ಸ್ಮರಣ್ ಅವರ ಉತ್ತಮ ಬ್ಯಾಟಿಂಗ್ ಹೊರತಾಗಿಯೂ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ ಎದುರು ಕೇವಲ 1 ರನ್ ಅಂತರದಿಂದ ಸೋತಿತು. </p><p>ಭಾನುವಾರ ನಡೆದ ಎಲೀಟ್ ಡಿ ಗುಂಪಿನ ಪಂದ್ಯದಲ್ಲಿ 202 ರನ್ಗಳ ಜಯದ ಗುರಿ ಬೆನ್ನಟ್ಟಿದ ಕರ್ನಾಟಕ ತಂಡವು ಆರಂಭಿಕ ಆಘಾತ ಅನುಭವಿಸಿತು. 19 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಮಯಂಕ್ ಅಗರವಾಲ್ ಮತ್ತು ಕೆ.ಎಲ್. ಶ್ರೀಜಿತ್ ಅವರು ನಿರ್ಗಮಿಸಿದರು. ಆಟಕ್ಕೆ ಕುದುರಿಕೊಂಡಿದ್ದ ದೇವದತ್ತ ಪಡಿಕ್ಕಲ್ (32; 23ಎ) ಅವರು ಔಟಾದಾಗ ತಂಡದ ಮೊತ್ತವು 51ಕ್ಕೆ3 ವಿಕೆಟ್ಗಳಾಗಿತ್ತು. </p><p>ಈ ಹಂತದಲ್ಲಿ ಕರುಣ್ (51; 32ಎ) ಮತ್ತು ಸ್ಮರಣ್ (ಔಟಾಗದೇ 48, 31ಎ) ಅವರಿಬ್ಬರೂ ಪ್ರತಿಹೋರಾಟ ಮಾಡಿದರು. ಇದರಿಂದಾಗಿ 14.5 ಓವರ್ಗಳಲ್ಲಿ ತಂಡವು 133 ರನ್ಗಳನ್ನು ತಲುಪಿತ್ತು. ಇದರಿಂದಾಗಿ ತಂಡದಲ್ಲಿ ಗೆಲುವಿನ ಭರವಸೆ ಮೂಡಿತ್ತು. </p><p>ಆದರೆ ಕರುಣ್ ಔಟಾಗಿದ್ದೇ ತಡ ಸನ್ನಿವೇಶ ಬದಲಾಯಿತು. ಅಭಿನವ್ ಮನೋಹರ್ (6), ಶ್ರೇಯಸ್ ಗೋಪಾಲ್ (4) ಮತ್ತು ಪ್ರವೀಣ ದುಬೆ (6) ಅವರು ಹೆಚ್ಚು ಹೊತ್ತು ನಿಲ್ಲದೇ ನಿರ್ಗಮಿಸಿದರು. ಇದರಿಂದಾಗಿ ಹಾದಿ ಕಠಿಣವಾಯಿತು. ಇದೇ ಹೊತ್ತಿನಲ್ಲಿ ವಿದ್ಯಾಧರ್ ಪಾಟೀಲ (27; 8ಎ, 4X2, 6X3) ಅವರು ಸ್ಮರಣ್ ಜೊತೆಗೂಡಿ ಕೇವಲ ಎಂಟು ಎಸೆತಗಳಲ್ಲಿ 29 ರನ್ಗಳನ್ನು ಸೇರಿಸಿದರು. ಕಮಲೇಶ್ ನಾಗರಕೋಟಿ (52ಕ್ಕೆ3) ಅವರ ದಾಳಿಯಲ್ಲಿ ವಿದ್ಯಾಧರ್ ಔಟಾದರು. ಆಗ ತಂಡದ ಮೊತ್ತವು 184 ರನ್ಗಳಾಗಿದ್ದವು. </p><p>ಕೊನೆಯ ಓವರ್ನಲ್ಲಿ 15 ರನ್ಗಳ ಅಗತ್ಯವಿದ್ದಾಗ ವೈಶಾಖ ವಿಜಯಕುಮಾರ್ ಅವರು ಒಂದು ಸಿಕ್ಸರ್ ಮತ್ತು ಸ್ಮರಣ್ ಒಂದು ಬೌಂಡರಿ ಹೊಡೆದರು. ಇದರಿಂದಾಗಿ ಕೊನೆಯ ಎಸೆತದಲ್ಲಿ ಗೆಲುವಿಗೆ 3 ರನ್ಗಳ ಅಗತ್ಯವಿತ್ತು. ಆದರೆ ಬ್ಯಾಟರ್ಗಳಿಗೆ ಕೇವಲ ಒಂದು ರನ್ ಗಳಿಸಲು ಸಾಧ್ಯವಾಯಿತು. ರೋಚಕ ಜಯ ಸಾಧಿಸಿದ ರಾಜಸ್ಥಾನ 12 ಅಂಕಗಳೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿದೆ. ಕರ್ನಾಟಕ ನಾಲ್ಕು ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ಜಾರಿದೆ. </p><p>ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ರಾಜಸ್ಥಾನ ತಂಡವು ದೀಪಕ್ ಹೂಡಾ (43), ಕಾರ್ತಿಕ್ ಶರ್ಮಾ (46 ರನ್) ಮತ್ತು ಲೊಮ್ರೊರ್ (ಔಟಾಗದೇ 48) ಅವರ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 201 ರನ್ ಗಳಿಸಿತು.</p><h2><strong>ಸಂಕ್ಷಿಪ್ತ ಸ್ಕೋರು:</strong> </h2>. <p><strong>ರಾಜಸ್ಥಾನ:</strong> 20 ಓವರ್ಗಳಲ್ಲಿ 5ಕ್ಕೆ201 (ಭರತ್ ಶರ್ಮಾ 38, ದೀಪಕ್ ಹೂಡಾ 43, ಕಾರ್ತಿಕ್ ಶರ್ಮಾ 46, ಮಹಿಪಾಲ್ ಲೊಮ್ರೊರ್ ಔಟಾಗದೇ 48, ವಿದ್ಯಾಧರ್ ಪಾಟೀಲ 41ಕ್ಕೆ2, ವೈಶಾಖ ವಿಜಯಕುಮಾರ್ 39ಕ್ಕೆ2) </p><p><strong>ಕರ್ನಾಟಕ:</strong> 20 ಓವರ್ಗಳಲ್ಲಿ 8ಕ್ಕೆ200 (ದೇವದತ್ತ ಪಡಿಕ್ಕಲ್ 32, ಕರುಣ್ ನಾಯರ್ 51, ಸ್ಮರಣ್ ರವಿಚಂದ್ರನ್ ಔಟಾಗದೇ 48, ವಿದ್ಯಾಧರ್ ಪಾಟೀಲ 27, ಅಶೋಕ್ ಶರ್ಮಾ 43ಕ್ಕೆ3, ಕಮಲೇಶ್ ನಾಗರಕೋಟಿ 52ಕ್ಕೆ3) ಫಲಿತಾಂಶ: ರಾಜಸ್ಥಾನ ತಂಡಕ್ಕೆ 1 ರನ್ ಜಯ. </p>.IND vs SA: ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಬರೆದ ರೋಹಿತ್ ಶರ್ಮಾ.<h2>ಅಭಿಷೇಕ್ ಶರ್ಮಾ ಶರವೇಗದ ಶತಕ</h2><p>ಹೈದರಾಬಾದ್ : ಪಂಜಾಬ್ ತಂಡದ ಅಭಿಷೇಕ್ ಶರ್ಮಾ ಅವರು 52 ಎಸೆತಗಳಲ್ಲಿ 148 ರನ್ ಗಳಿಸಿ ದಾಖಲೆ ಬರೆದರು. ಭಾನುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಪಂದ್ಯದಲ್ಲಿ ಅಭಿಷೇಕ್ ಆಟದ ಬಲದಿಂದ ಪಂಜಾಬ್ ತಂಡವು ಬಂಗಾಳ ಎದುರು 112 ರನ್ಗಳಿಂದ ಜಯಿಸಿತು. </p><p>ಟಾಸ್ ಗೆದ್ದ ಪಂಜಾಬ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅಭಿಷೇಕ್ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಟಿ20 ಮಾದರಿಯಲ್ಲಿ ಎರಡನೇ ವೇಗದ ಅರ್ಧಶತಕ ದಾಖಲಿಸಿದ ಭಾರತೀಯ ಬ್ಯಾಟರ್ ಆದರು. ಒಟ್ಟಾರೆ ಮೂರನೇ ಬ್ಯಾಟರ್ ಆದರು. </p><p>ಮೊಹಮ್ಮದ್ ಶಮಿ ಮತ್ತು ಆಕಾಶ್ ದೀಪ್ ಅವರಂತಹ ಉತ್ತಮ ಬೌಲರ್ಗಳ ಎದುರು ಅಭಿಷೇಕ್ ಅಬ್ಬರಿಸಿದರು. ಅವರ ಆಟದಿಂದಾಗಿ ಪಂಜಾಬ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 310 ರನ್ ಗಳಿಸಿತು. ಅಭಿಷೇಕ್ ಆಟದಲ್ಲಿ 8 ಬೌಂಡರಿ ಮತ್ತು 16 ಸಿಕ್ಸರ್ಗಳಿದ್ದವು. </p><p>ಗುರಿ ಬೆನ್ನಟ್ಟಿದ ಬಂಗಾಳ ತಂಡಕ್ಕೆ 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 198 ರನ್ಗಳಿಸಲು ಮಾತ್ರ ಸಾಧ್ಯವಾಯಿತು. ತಂಡದ ನಾಯಕ ಅಭಿಮನ್ಯು ಈಶ್ವರನ್ (ಅಜೇಯ 130; 66ಎ, 4X12, 6X8) ಅವರು ಶತಕ ಹೊಡೆದರು. ಆದರೆ ಉಳಿದ ಬ್ಯಾಟರ್ಗಳು ವಿಫಲರಾದರು. ಆಕಾಶ್ ದೀಪ್ 31 ರನ್) ಎರಡಂಕಿ ಗಳಿಸಿದ ಎರಡನೇ ಬ್ಯಾಟರ್ ಆದರು.</p> .ಅಭಿಷೇಕ್ ಶರ್ಮಾ ಅಬ್ಬರ: 16 ಸಿಕ್ಸರ್, 12 ಬಾಲ್ ಫಿಫ್ಟಿ, 32 ಎಸೆತಗಳಲ್ಲಿ ಶತಕ.<p><strong>ಸಂಕ್ಷಿಪ್ತ ಸ್ಕೋರು:</strong> ಪಂಜಾಬ್ 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 310 (ಅಭಿಷೇಕ್ ಶರ್ಮಾ 148, ಪ್ರಭಸಿಮ್ರನ್ ಸಿಂಗ್ 70, ರಮಣದೀಪ್ ಸಿಂಗ್ 39, ಸನ್ವೀರ್ ಸಿಂಗ್ 22, ಆಕಾಶ್ ದೀಪ್ 55ಕ್ಕೆ2) ಬಂಗಾಳ: 20 ಓವರ್ಗಳಲ್ಲಿ 9ಕ್ಕೆ198 (ಅಭಿಮನ್ಯು ಈಶ್ವರನ್ ಔಟಾಗದೇ 130, ಆಕಾಶ್ ದೀಪ್ 31, ಗುರ್ನೂರ್ ಬ್ರಾರ್ 40ಕ್ಕೆ2, ಹರಪ್ರೀತ್ ಬ್ರಾರ್ 23ಕ್ಕೆ4, ನೇಹಲ್ ವಧೇರಾ 19ಕ್ಕೆ2).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್:</strong> ಕರುಣ್ ನಾಯರ್ ಮತ್ತು ಆರ್. ಸ್ಮರಣ್ ಅವರ ಉತ್ತಮ ಬ್ಯಾಟಿಂಗ್ ಹೊರತಾಗಿಯೂ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ ಎದುರು ಕೇವಲ 1 ರನ್ ಅಂತರದಿಂದ ಸೋತಿತು. </p><p>ಭಾನುವಾರ ನಡೆದ ಎಲೀಟ್ ಡಿ ಗುಂಪಿನ ಪಂದ್ಯದಲ್ಲಿ 202 ರನ್ಗಳ ಜಯದ ಗುರಿ ಬೆನ್ನಟ್ಟಿದ ಕರ್ನಾಟಕ ತಂಡವು ಆರಂಭಿಕ ಆಘಾತ ಅನುಭವಿಸಿತು. 19 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಮಯಂಕ್ ಅಗರವಾಲ್ ಮತ್ತು ಕೆ.ಎಲ್. ಶ್ರೀಜಿತ್ ಅವರು ನಿರ್ಗಮಿಸಿದರು. ಆಟಕ್ಕೆ ಕುದುರಿಕೊಂಡಿದ್ದ ದೇವದತ್ತ ಪಡಿಕ್ಕಲ್ (32; 23ಎ) ಅವರು ಔಟಾದಾಗ ತಂಡದ ಮೊತ್ತವು 51ಕ್ಕೆ3 ವಿಕೆಟ್ಗಳಾಗಿತ್ತು. </p><p>ಈ ಹಂತದಲ್ಲಿ ಕರುಣ್ (51; 32ಎ) ಮತ್ತು ಸ್ಮರಣ್ (ಔಟಾಗದೇ 48, 31ಎ) ಅವರಿಬ್ಬರೂ ಪ್ರತಿಹೋರಾಟ ಮಾಡಿದರು. ಇದರಿಂದಾಗಿ 14.5 ಓವರ್ಗಳಲ್ಲಿ ತಂಡವು 133 ರನ್ಗಳನ್ನು ತಲುಪಿತ್ತು. ಇದರಿಂದಾಗಿ ತಂಡದಲ್ಲಿ ಗೆಲುವಿನ ಭರವಸೆ ಮೂಡಿತ್ತು. </p><p>ಆದರೆ ಕರುಣ್ ಔಟಾಗಿದ್ದೇ ತಡ ಸನ್ನಿವೇಶ ಬದಲಾಯಿತು. ಅಭಿನವ್ ಮನೋಹರ್ (6), ಶ್ರೇಯಸ್ ಗೋಪಾಲ್ (4) ಮತ್ತು ಪ್ರವೀಣ ದುಬೆ (6) ಅವರು ಹೆಚ್ಚು ಹೊತ್ತು ನಿಲ್ಲದೇ ನಿರ್ಗಮಿಸಿದರು. ಇದರಿಂದಾಗಿ ಹಾದಿ ಕಠಿಣವಾಯಿತು. ಇದೇ ಹೊತ್ತಿನಲ್ಲಿ ವಿದ್ಯಾಧರ್ ಪಾಟೀಲ (27; 8ಎ, 4X2, 6X3) ಅವರು ಸ್ಮರಣ್ ಜೊತೆಗೂಡಿ ಕೇವಲ ಎಂಟು ಎಸೆತಗಳಲ್ಲಿ 29 ರನ್ಗಳನ್ನು ಸೇರಿಸಿದರು. ಕಮಲೇಶ್ ನಾಗರಕೋಟಿ (52ಕ್ಕೆ3) ಅವರ ದಾಳಿಯಲ್ಲಿ ವಿದ್ಯಾಧರ್ ಔಟಾದರು. ಆಗ ತಂಡದ ಮೊತ್ತವು 184 ರನ್ಗಳಾಗಿದ್ದವು. </p><p>ಕೊನೆಯ ಓವರ್ನಲ್ಲಿ 15 ರನ್ಗಳ ಅಗತ್ಯವಿದ್ದಾಗ ವೈಶಾಖ ವಿಜಯಕುಮಾರ್ ಅವರು ಒಂದು ಸಿಕ್ಸರ್ ಮತ್ತು ಸ್ಮರಣ್ ಒಂದು ಬೌಂಡರಿ ಹೊಡೆದರು. ಇದರಿಂದಾಗಿ ಕೊನೆಯ ಎಸೆತದಲ್ಲಿ ಗೆಲುವಿಗೆ 3 ರನ್ಗಳ ಅಗತ್ಯವಿತ್ತು. ಆದರೆ ಬ್ಯಾಟರ್ಗಳಿಗೆ ಕೇವಲ ಒಂದು ರನ್ ಗಳಿಸಲು ಸಾಧ್ಯವಾಯಿತು. ರೋಚಕ ಜಯ ಸಾಧಿಸಿದ ರಾಜಸ್ಥಾನ 12 ಅಂಕಗಳೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿದೆ. ಕರ್ನಾಟಕ ನಾಲ್ಕು ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ಜಾರಿದೆ. </p><p>ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ರಾಜಸ್ಥಾನ ತಂಡವು ದೀಪಕ್ ಹೂಡಾ (43), ಕಾರ್ತಿಕ್ ಶರ್ಮಾ (46 ರನ್) ಮತ್ತು ಲೊಮ್ರೊರ್ (ಔಟಾಗದೇ 48) ಅವರ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 201 ರನ್ ಗಳಿಸಿತು.</p><h2><strong>ಸಂಕ್ಷಿಪ್ತ ಸ್ಕೋರು:</strong> </h2>. <p><strong>ರಾಜಸ್ಥಾನ:</strong> 20 ಓವರ್ಗಳಲ್ಲಿ 5ಕ್ಕೆ201 (ಭರತ್ ಶರ್ಮಾ 38, ದೀಪಕ್ ಹೂಡಾ 43, ಕಾರ್ತಿಕ್ ಶರ್ಮಾ 46, ಮಹಿಪಾಲ್ ಲೊಮ್ರೊರ್ ಔಟಾಗದೇ 48, ವಿದ್ಯಾಧರ್ ಪಾಟೀಲ 41ಕ್ಕೆ2, ವೈಶಾಖ ವಿಜಯಕುಮಾರ್ 39ಕ್ಕೆ2) </p><p><strong>ಕರ್ನಾಟಕ:</strong> 20 ಓವರ್ಗಳಲ್ಲಿ 8ಕ್ಕೆ200 (ದೇವದತ್ತ ಪಡಿಕ್ಕಲ್ 32, ಕರುಣ್ ನಾಯರ್ 51, ಸ್ಮರಣ್ ರವಿಚಂದ್ರನ್ ಔಟಾಗದೇ 48, ವಿದ್ಯಾಧರ್ ಪಾಟೀಲ 27, ಅಶೋಕ್ ಶರ್ಮಾ 43ಕ್ಕೆ3, ಕಮಲೇಶ್ ನಾಗರಕೋಟಿ 52ಕ್ಕೆ3) ಫಲಿತಾಂಶ: ರಾಜಸ್ಥಾನ ತಂಡಕ್ಕೆ 1 ರನ್ ಜಯ. </p>.IND vs SA: ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಬರೆದ ರೋಹಿತ್ ಶರ್ಮಾ.<h2>ಅಭಿಷೇಕ್ ಶರ್ಮಾ ಶರವೇಗದ ಶತಕ</h2><p>ಹೈದರಾಬಾದ್ : ಪಂಜಾಬ್ ತಂಡದ ಅಭಿಷೇಕ್ ಶರ್ಮಾ ಅವರು 52 ಎಸೆತಗಳಲ್ಲಿ 148 ರನ್ ಗಳಿಸಿ ದಾಖಲೆ ಬರೆದರು. ಭಾನುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಪಂದ್ಯದಲ್ಲಿ ಅಭಿಷೇಕ್ ಆಟದ ಬಲದಿಂದ ಪಂಜಾಬ್ ತಂಡವು ಬಂಗಾಳ ಎದುರು 112 ರನ್ಗಳಿಂದ ಜಯಿಸಿತು. </p><p>ಟಾಸ್ ಗೆದ್ದ ಪಂಜಾಬ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅಭಿಷೇಕ್ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಟಿ20 ಮಾದರಿಯಲ್ಲಿ ಎರಡನೇ ವೇಗದ ಅರ್ಧಶತಕ ದಾಖಲಿಸಿದ ಭಾರತೀಯ ಬ್ಯಾಟರ್ ಆದರು. ಒಟ್ಟಾರೆ ಮೂರನೇ ಬ್ಯಾಟರ್ ಆದರು. </p><p>ಮೊಹಮ್ಮದ್ ಶಮಿ ಮತ್ತು ಆಕಾಶ್ ದೀಪ್ ಅವರಂತಹ ಉತ್ತಮ ಬೌಲರ್ಗಳ ಎದುರು ಅಭಿಷೇಕ್ ಅಬ್ಬರಿಸಿದರು. ಅವರ ಆಟದಿಂದಾಗಿ ಪಂಜಾಬ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 310 ರನ್ ಗಳಿಸಿತು. ಅಭಿಷೇಕ್ ಆಟದಲ್ಲಿ 8 ಬೌಂಡರಿ ಮತ್ತು 16 ಸಿಕ್ಸರ್ಗಳಿದ್ದವು. </p><p>ಗುರಿ ಬೆನ್ನಟ್ಟಿದ ಬಂಗಾಳ ತಂಡಕ್ಕೆ 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 198 ರನ್ಗಳಿಸಲು ಮಾತ್ರ ಸಾಧ್ಯವಾಯಿತು. ತಂಡದ ನಾಯಕ ಅಭಿಮನ್ಯು ಈಶ್ವರನ್ (ಅಜೇಯ 130; 66ಎ, 4X12, 6X8) ಅವರು ಶತಕ ಹೊಡೆದರು. ಆದರೆ ಉಳಿದ ಬ್ಯಾಟರ್ಗಳು ವಿಫಲರಾದರು. ಆಕಾಶ್ ದೀಪ್ 31 ರನ್) ಎರಡಂಕಿ ಗಳಿಸಿದ ಎರಡನೇ ಬ್ಯಾಟರ್ ಆದರು.</p> .ಅಭಿಷೇಕ್ ಶರ್ಮಾ ಅಬ್ಬರ: 16 ಸಿಕ್ಸರ್, 12 ಬಾಲ್ ಫಿಫ್ಟಿ, 32 ಎಸೆತಗಳಲ್ಲಿ ಶತಕ.<p><strong>ಸಂಕ್ಷಿಪ್ತ ಸ್ಕೋರು:</strong> ಪಂಜಾಬ್ 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 310 (ಅಭಿಷೇಕ್ ಶರ್ಮಾ 148, ಪ್ರಭಸಿಮ್ರನ್ ಸಿಂಗ್ 70, ರಮಣದೀಪ್ ಸಿಂಗ್ 39, ಸನ್ವೀರ್ ಸಿಂಗ್ 22, ಆಕಾಶ್ ದೀಪ್ 55ಕ್ಕೆ2) ಬಂಗಾಳ: 20 ಓವರ್ಗಳಲ್ಲಿ 9ಕ್ಕೆ198 (ಅಭಿಮನ್ಯು ಈಶ್ವರನ್ ಔಟಾಗದೇ 130, ಆಕಾಶ್ ದೀಪ್ 31, ಗುರ್ನೂರ್ ಬ್ರಾರ್ 40ಕ್ಕೆ2, ಹರಪ್ರೀತ್ ಬ್ರಾರ್ 23ಕ್ಕೆ4, ನೇಹಲ್ ವಧೇರಾ 19ಕ್ಕೆ2).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>