<p><strong>ಹಾಸನ: </strong>ಜಿಲ್ಲೆಯಲ್ಲಿ ಕಾಡಾನೆ–ಮಾನವನ ಸಂಘರ್ಷ ಮುಂದುವರಿದಿದ್ದು, ಶನಿವಾರ ಕಾಡಾನೆಗಳ ದಾಳಿಗೆ ಕೆಲಗಳಲೆ ಗ್ರಾಮದಲ್ಲಿ ವೃದ್ಧ ಮೃತಪಟ್ಟಿದ್ದಾರೆ.</p>.<p>ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೆಲಗಳಲೆ ಗ್ರಾಮದ ಕೃಷ್ಣೇಗೌಡ (67) ಮೃತ ವ್ಯಕ್ತಿ. ಬೆಳಿಗ್ಗೆ ಮಗ ಸುದೀಶ್, ಮೊಮ್ಮಗ ಪ್ರಥಮ್ ಜೊತೆ ತೋಟಕ್ಕೆ ತೆರಳುವ ವೇಳೆ ಏಕಾಏಕಿ ಮೂರು ಕಾಡಾನೆ ದಾಳಿ ಮಾಡಿವೆ.</p>.<p>ಕಾಡಾನೆ ಹಿಂಡು ಕಂಡ ಕೂಡಲೇ ಎಲ್ಲರೂ ಓಡಿದ್ದಾರೆ. ಈ ವೇಳೆ ಕೃಷ್ಣೇಗೌಡ ಕೆಳಗೆ ಬಿದ್ದಿದ್ದಾರೆ. ನಂತರ ಕಾಡಾನೆಗಳು ತುಳಿದು ಸಾಯಿಸಿದೆ.ಸುದೇಶ್ ಮತ್ತು ಪ್ರಥಮ್ ತಪ್ಪಿಸಿಕೊಂಡಿದ್ದಾರೆ.</p>.<p>ಸಾವಿಗೀಡಾದ ಕೃಷ್ಣೇಗೌಡ ಮನೆಯಲ್ಲಿ ಶೋಕ ಮಡುಗಟ್ಟಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.</p>.<p>ಈಚೆಗಷ್ಟೇ ಒಂದು ಆನೆಯನ್ನು ಅರಣ್ಯ ಇಲಾಖೆಯಿಂದ ಸೆರೆಹಿಡಿಯಲಾಗಿತ್ತು. ಮತ್ತೊಂದು ಆನೆ ಸೆರೆಹಿಡಿಯಲು ಕಾರ್ಯಾಚರಣೆ ಮುಂದುವರಿದಿದ್ದು, ಈ ನಡುವೆ ವೃದ್ಧನ ಸಾವು ಸಂಭವಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>ಜಿಲ್ಲೆಯಲ್ಲಿ ಕಾಡಾನೆ–ಮಾನವನ ಸಂಘರ್ಷ ಮುಂದುವರಿದಿದ್ದು, ಶನಿವಾರ ಕಾಡಾನೆಗಳ ದಾಳಿಗೆ ಕೆಲಗಳಲೆ ಗ್ರಾಮದಲ್ಲಿ ವೃದ್ಧ ಮೃತಪಟ್ಟಿದ್ದಾರೆ.</p>.<p>ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೆಲಗಳಲೆ ಗ್ರಾಮದ ಕೃಷ್ಣೇಗೌಡ (67) ಮೃತ ವ್ಯಕ್ತಿ. ಬೆಳಿಗ್ಗೆ ಮಗ ಸುದೀಶ್, ಮೊಮ್ಮಗ ಪ್ರಥಮ್ ಜೊತೆ ತೋಟಕ್ಕೆ ತೆರಳುವ ವೇಳೆ ಏಕಾಏಕಿ ಮೂರು ಕಾಡಾನೆ ದಾಳಿ ಮಾಡಿವೆ.</p>.<p>ಕಾಡಾನೆ ಹಿಂಡು ಕಂಡ ಕೂಡಲೇ ಎಲ್ಲರೂ ಓಡಿದ್ದಾರೆ. ಈ ವೇಳೆ ಕೃಷ್ಣೇಗೌಡ ಕೆಳಗೆ ಬಿದ್ದಿದ್ದಾರೆ. ನಂತರ ಕಾಡಾನೆಗಳು ತುಳಿದು ಸಾಯಿಸಿದೆ.ಸುದೇಶ್ ಮತ್ತು ಪ್ರಥಮ್ ತಪ್ಪಿಸಿಕೊಂಡಿದ್ದಾರೆ.</p>.<p>ಸಾವಿಗೀಡಾದ ಕೃಷ್ಣೇಗೌಡ ಮನೆಯಲ್ಲಿ ಶೋಕ ಮಡುಗಟ್ಟಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.</p>.<p>ಈಚೆಗಷ್ಟೇ ಒಂದು ಆನೆಯನ್ನು ಅರಣ್ಯ ಇಲಾಖೆಯಿಂದ ಸೆರೆಹಿಡಿಯಲಾಗಿತ್ತು. ಮತ್ತೊಂದು ಆನೆ ಸೆರೆಹಿಡಿಯಲು ಕಾರ್ಯಾಚರಣೆ ಮುಂದುವರಿದಿದ್ದು, ಈ ನಡುವೆ ವೃದ್ಧನ ಸಾವು ಸಂಭವಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>