<p><strong>ಹಾಸನ:</strong> ‘ಭೂಮಿ ನಂಬಿದರೆ ಕೈ ಬಿಡುವುದಿಲ್ಲ. ಎಷ್ಟೋ ಜನ ಕೃಷಿಯಿಂದಸಾಕಷ್ಟು ಪಡೆದುಕೊಂಡಿದ್ದರೂ ಕೃಷಿಯನ್ನು ದೂಷಿಸುತ್ತಾರೆ’ ಎಂದು ಪುಣ್ಯಭೂಮಿ ಸಂಸ್ಥೆ ಗೌರವ ನಿರ್ದೇಶಕ ವಿಜಯ್ಅಂಗಡಿ ಬೇಸರ ವ್ಯಕ್ತಪಡಿಸಿದರು.</p>.<p>ತಾಲ್ಲೂಕಿನ ಗೌರಿಪುರ ಗ್ರಾಮದ ಪ್ರಗತಿಪರ ರೈತ ಮಹಿಳೆ ಹೇಮಾ ಅನಂತ್ಅವರ ತೋಟದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪುಣ್ಯಭೂಮಿ ಪರಿಸರ ಪ್ರಿಯ ಕೃಷಿಕರ ಸೇವಾಸಂಸ್ಥೆಯ ‘ಬೆಳ್ಳಿ ಬದುಕು’ ಸಮಾರಂಭದಲ್ಲಿ ಮಾತನಾಡಿದರು.</p>.<p>‘ಕೃಷಿ ಲಾಭದಾಯಕವಲ್ಲ ಎಂದು ಹೇಳುವವರೇ ಹೆಚ್ಚು. ಆದರೆ, ಇತ್ತೀಚಿನದಿನಗಳಲ್ಲಿ ಪಟ್ಟಣಗಳಿಂದ ಅನೇಕರು ಹಿಂತಿರುಗಿ ಬರುತ್ತಿರುವುದು ಉತ್ತಮಬೆಳವಣಿಗೆಯಾಗಿದೆ. 1996ರಲ್ಲಿ ಆರಂಭವಾದ ಪುಣ್ಯಭೂಮಿ ಪರಿಸರ ಪ್ರಿಯ ಕೃಷಿಕರ ಸೇವಾ ಸಂಸ್ಥೆ, ಇಂದು 500ಕ್ಕೂ ಹೆಚ್ಚು ಮಂದಿ ಸದಸ್ಯರನ್ನು ಹೊಂದಿದೆ’ ಎಂದು ವಿವರಿಸಿದರು.</p>.<p>‘ಮಳೆ ನೀರು ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಪ್ರತಿಯೊಬ್ಬರು ತಮ್ಮಮನೆಯಲ್ಲಿ ಮಳೆ ನೀರು ಸಂಗ್ರಹ ಘಟಕ ಅಳವಡಿಸಿಕೊಳ್ಳಬೇಕು. ಸೈಕಲ್ಬಳಕೆ ಮಾಡುವುದರಿಂದ ಉತ್ತಮ ಆರೋಗ್ಯದ ಜೊತೆಗೆ ಹಣ<br />ಉಳಿತಾಯವಾಗಲಿದೆ. ಅಕ್ಕಿ, ಉಪ್ಪು, ಎಣ್ಣೆಬಳಕೆ ಕಡಿಮೆ ಮಾಡಿ, ರಾಗಿ ಹೆಚ್ಚು ಬಳಸಬೇಕು’ ಎಂದು ಸಲಹೆ<br />ನೀಡಿದರು.</p>.<p>ರೈತ ಮಹಿಳೆ ಹೇಮಾ ಅನಂತ್ ಮಾತನಾಡಿ, ‘ಹಲವು ವರ್ಷಗಳ ಹಿಂದೆ ಈ ಜಾಗದಲ್ಲಿ ಏನೂ ಇರಲಿಲ್ಲ. ಭೂಮಿ ತಾಯಿ ಕೈ ಹಿಡಿದಿದ್ದಾಳೆ. ನಮ್ಮ ಕೃಷಿಉತ್ಪನ್ನಗಳನ್ನು ಜನರು ಖರೀದಿಸುತ್ತಿದ್ದಾರೆ’ ಎಂದರು.</p>.<p>ಆಲೂರಿನ ರೈತ ಅರುಣ್ ಕುಮಾರ್ ಮಾತನಾಡಿ, ‘ಕಾಫಿ ತೋಟದಲ್ಲಿಕೆಂಪಿರುವೆ ಸಮಸ್ಯೆ ಇತ್ತು. ಪುಣ್ಯಭೂಮಿ ಸಹಕಾರದಿಂದ ಸೈನಿಕ ಇರುವೆಸಾಕಿದ ಪರಿಣಾಮ ಅನುಕೂಲವಾಗಿದೆ. ಅಲ್ಲದೆ ಕಾಫಿ ಗಿಡದಲ್ಲಿ ಬರುವ<br />ಬೋರ್ ಕಾಯಿಲೆಯೂ ನಿಯಂತ್ರಣವಾಗಿದೆ’ ಎಂದು ನುಡಿದರು.</p>.<p>ರೈತ ಮಾಲತೇಶ್ ಮಾತನಾಡಿ, ‘ಮಳೆ ನೀರು ಸಂಗ್ರಹ ಘಟಕ ಅಳವಡಿಕೆಗೆ ₹25 ಸಾವಿರದಿಂದ ₹30 ಸಾವಿರ ವೆಚ್ಚವಾಗಬಹುದು. ಸಂಗ್ರಹಿಸಿದ ನೀರನ್ನುವರ್ಷವಿಡೀ ಬಳಸಬಹುದು. ತಾರಸಿಯಲ್ಲಿ ಸಣ್ಣಪುಟ್ಟ ತರಕಾರಿ<br />ಬೆಳೆಯಲಾಗುತ್ತಿದೆ’ ಎಂದರು.</p>.<p>ಹಾನುಬಾಳು ಹೋಬಳಿ ಹಂಜಗೋಡನಹಳ್ಳಿ ಕೃಷಿಕ ನರೇಶ್ ಮಾತನಾಡಿದರು.</p>.<p>85 ವರ್ಷದ ರೈತ ರಾಮಾಚಾರ್ ಅವರನ್ನುಸನ್ಮಾನಿಸಲಾಯಿತು. ಹೇಮಾ ಅನಂತ್ ಅವರ ಪುತ್ರ ಆಕಾಶ್ ಮತ್ತು ವೈಡೂರ್ಯ ದಂಪತಿಗೆ ಮಾವಿನ ಗಿಡಗಳನ್ನು ಉಡುಗೊರೆಯಾಗಿನೀಡಲಾಯಿತು. 120 ರೈತರ ಮಾಹಿತಿ ಒಳಗೊಂಡ ‘ರೈತ ನುಡಿ’ ಪುಸ್ತಕ ಬಿಡುಗಡೆ ಮಾಡಲಾಯಿತು.</p>.<p>ಜಯಂತಿ ಜಯರಾಮ ಸೌರಚಾಲಿತ ರೇಡಿಯೋ ಉದ್ಘಾಟಿಸಿದರು. ರೈತರಿಗೆಬಿತ್ತನೆಗಾಗಿ ಅರಿಸಿನ, ಮಾಂಗಾಯಿ ಶುಂಠಿ, ಪಟಾವಳಿ ಹಬ್ಬು, ಡ್ರ್ಯಾಗನ್ಫ್ರೂಟ್ಸ್, ಕೆಸ, ಕಸ್ತೂರಿ ಅರಿಸಿನ ವಿತರಿಸಲಾಯಿತು.</p>.<p>ಪುಣ್ಯಭೂಮಿ ಸಂಸ್ಥೆಯ ದೊಡ್ಡ ವೀರೇಗೌಡ, ರಂಗಶೆಟ್ಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ‘ಭೂಮಿ ನಂಬಿದರೆ ಕೈ ಬಿಡುವುದಿಲ್ಲ. ಎಷ್ಟೋ ಜನ ಕೃಷಿಯಿಂದಸಾಕಷ್ಟು ಪಡೆದುಕೊಂಡಿದ್ದರೂ ಕೃಷಿಯನ್ನು ದೂಷಿಸುತ್ತಾರೆ’ ಎಂದು ಪುಣ್ಯಭೂಮಿ ಸಂಸ್ಥೆ ಗೌರವ ನಿರ್ದೇಶಕ ವಿಜಯ್ಅಂಗಡಿ ಬೇಸರ ವ್ಯಕ್ತಪಡಿಸಿದರು.</p>.<p>ತಾಲ್ಲೂಕಿನ ಗೌರಿಪುರ ಗ್ರಾಮದ ಪ್ರಗತಿಪರ ರೈತ ಮಹಿಳೆ ಹೇಮಾ ಅನಂತ್ಅವರ ತೋಟದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪುಣ್ಯಭೂಮಿ ಪರಿಸರ ಪ್ರಿಯ ಕೃಷಿಕರ ಸೇವಾಸಂಸ್ಥೆಯ ‘ಬೆಳ್ಳಿ ಬದುಕು’ ಸಮಾರಂಭದಲ್ಲಿ ಮಾತನಾಡಿದರು.</p>.<p>‘ಕೃಷಿ ಲಾಭದಾಯಕವಲ್ಲ ಎಂದು ಹೇಳುವವರೇ ಹೆಚ್ಚು. ಆದರೆ, ಇತ್ತೀಚಿನದಿನಗಳಲ್ಲಿ ಪಟ್ಟಣಗಳಿಂದ ಅನೇಕರು ಹಿಂತಿರುಗಿ ಬರುತ್ತಿರುವುದು ಉತ್ತಮಬೆಳವಣಿಗೆಯಾಗಿದೆ. 1996ರಲ್ಲಿ ಆರಂಭವಾದ ಪುಣ್ಯಭೂಮಿ ಪರಿಸರ ಪ್ರಿಯ ಕೃಷಿಕರ ಸೇವಾ ಸಂಸ್ಥೆ, ಇಂದು 500ಕ್ಕೂ ಹೆಚ್ಚು ಮಂದಿ ಸದಸ್ಯರನ್ನು ಹೊಂದಿದೆ’ ಎಂದು ವಿವರಿಸಿದರು.</p>.<p>‘ಮಳೆ ನೀರು ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಪ್ರತಿಯೊಬ್ಬರು ತಮ್ಮಮನೆಯಲ್ಲಿ ಮಳೆ ನೀರು ಸಂಗ್ರಹ ಘಟಕ ಅಳವಡಿಸಿಕೊಳ್ಳಬೇಕು. ಸೈಕಲ್ಬಳಕೆ ಮಾಡುವುದರಿಂದ ಉತ್ತಮ ಆರೋಗ್ಯದ ಜೊತೆಗೆ ಹಣ<br />ಉಳಿತಾಯವಾಗಲಿದೆ. ಅಕ್ಕಿ, ಉಪ್ಪು, ಎಣ್ಣೆಬಳಕೆ ಕಡಿಮೆ ಮಾಡಿ, ರಾಗಿ ಹೆಚ್ಚು ಬಳಸಬೇಕು’ ಎಂದು ಸಲಹೆ<br />ನೀಡಿದರು.</p>.<p>ರೈತ ಮಹಿಳೆ ಹೇಮಾ ಅನಂತ್ ಮಾತನಾಡಿ, ‘ಹಲವು ವರ್ಷಗಳ ಹಿಂದೆ ಈ ಜಾಗದಲ್ಲಿ ಏನೂ ಇರಲಿಲ್ಲ. ಭೂಮಿ ತಾಯಿ ಕೈ ಹಿಡಿದಿದ್ದಾಳೆ. ನಮ್ಮ ಕೃಷಿಉತ್ಪನ್ನಗಳನ್ನು ಜನರು ಖರೀದಿಸುತ್ತಿದ್ದಾರೆ’ ಎಂದರು.</p>.<p>ಆಲೂರಿನ ರೈತ ಅರುಣ್ ಕುಮಾರ್ ಮಾತನಾಡಿ, ‘ಕಾಫಿ ತೋಟದಲ್ಲಿಕೆಂಪಿರುವೆ ಸಮಸ್ಯೆ ಇತ್ತು. ಪುಣ್ಯಭೂಮಿ ಸಹಕಾರದಿಂದ ಸೈನಿಕ ಇರುವೆಸಾಕಿದ ಪರಿಣಾಮ ಅನುಕೂಲವಾಗಿದೆ. ಅಲ್ಲದೆ ಕಾಫಿ ಗಿಡದಲ್ಲಿ ಬರುವ<br />ಬೋರ್ ಕಾಯಿಲೆಯೂ ನಿಯಂತ್ರಣವಾಗಿದೆ’ ಎಂದು ನುಡಿದರು.</p>.<p>ರೈತ ಮಾಲತೇಶ್ ಮಾತನಾಡಿ, ‘ಮಳೆ ನೀರು ಸಂಗ್ರಹ ಘಟಕ ಅಳವಡಿಕೆಗೆ ₹25 ಸಾವಿರದಿಂದ ₹30 ಸಾವಿರ ವೆಚ್ಚವಾಗಬಹುದು. ಸಂಗ್ರಹಿಸಿದ ನೀರನ್ನುವರ್ಷವಿಡೀ ಬಳಸಬಹುದು. ತಾರಸಿಯಲ್ಲಿ ಸಣ್ಣಪುಟ್ಟ ತರಕಾರಿ<br />ಬೆಳೆಯಲಾಗುತ್ತಿದೆ’ ಎಂದರು.</p>.<p>ಹಾನುಬಾಳು ಹೋಬಳಿ ಹಂಜಗೋಡನಹಳ್ಳಿ ಕೃಷಿಕ ನರೇಶ್ ಮಾತನಾಡಿದರು.</p>.<p>85 ವರ್ಷದ ರೈತ ರಾಮಾಚಾರ್ ಅವರನ್ನುಸನ್ಮಾನಿಸಲಾಯಿತು. ಹೇಮಾ ಅನಂತ್ ಅವರ ಪುತ್ರ ಆಕಾಶ್ ಮತ್ತು ವೈಡೂರ್ಯ ದಂಪತಿಗೆ ಮಾವಿನ ಗಿಡಗಳನ್ನು ಉಡುಗೊರೆಯಾಗಿನೀಡಲಾಯಿತು. 120 ರೈತರ ಮಾಹಿತಿ ಒಳಗೊಂಡ ‘ರೈತ ನುಡಿ’ ಪುಸ್ತಕ ಬಿಡುಗಡೆ ಮಾಡಲಾಯಿತು.</p>.<p>ಜಯಂತಿ ಜಯರಾಮ ಸೌರಚಾಲಿತ ರೇಡಿಯೋ ಉದ್ಘಾಟಿಸಿದರು. ರೈತರಿಗೆಬಿತ್ತನೆಗಾಗಿ ಅರಿಸಿನ, ಮಾಂಗಾಯಿ ಶುಂಠಿ, ಪಟಾವಳಿ ಹಬ್ಬು, ಡ್ರ್ಯಾಗನ್ಫ್ರೂಟ್ಸ್, ಕೆಸ, ಕಸ್ತೂರಿ ಅರಿಸಿನ ವಿತರಿಸಲಾಯಿತು.</p>.<p>ಪುಣ್ಯಭೂಮಿ ಸಂಸ್ಥೆಯ ದೊಡ್ಡ ವೀರೇಗೌಡ, ರಂಗಶೆಟ್ಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>