‘ಕಾನೂನು ಪ್ರಕಾರವೇ ಹಾಸನ ನಗರಸಭೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲು ನಿಗದಿ ಮಾಡಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ನಗರಸಭೆಯ 35 ವಾರ್ಡ್ಗಳ ಮೀಸಲಾತಿ ಪ್ರಕಟಿಸಲಾಗಿತ್ತು. ಆದರೆ, ಹಿಂದಿನ ಕಾಂಗ್ರೆಸ್, ಸಮ್ಮಿಶ್ರ ಸರ್ಕಾರದಲ್ಲಿ 35 ವಾರ್ಡ್ಗಳ ಮೀಸಲಾತಿ ಬದಲಾವಣೆ ಮಾಡಲಾಯಿತು. ಆಗ ಏಕೆ ಬದಲಾಯಿಸಿದರು ? ಆಗ ಕಾನೂನು ಎಲ್ಲಿ ಹೋಗಿತ್ತು? ಅವರು ಮಾಡಿದರೆ ರಾಜಕಾರಣ, ಬೇರೆಯವರು ಮಾಡಿದರೆ ಕಾನೂನು ಬಾಹಿರ ಎನ್ನುವುದಾದರೆ ನಾವು ರಾಜಕಾರಣ ಮಾಡುತ್ತಿರುವುದು’ಎಂದು ಸ್ಪಷ್ಟಪಡಿಸಿದರು.