<p><strong>ಕೊಣನೂರು (ಹಾಸನ):</strong> ‘ಸಂಗೀತದ ಹಬ್ಬ’ವೆಂದೇ ಪ್ರಖ್ಯಾತವಾಗಿರುವ ಇಲ್ಲಿನ ರುದ್ರಪಟ್ಟಣದ 5 ದಿನಗಳ ಸಂಗೀತೋತ್ಸವಕ್ಕೆ ಬುಧವಾರ ಅದ್ದೂರಿ ಚಾಲನೆ ದೊರಕಿತು. 22ನೇ ವರ್ಷದ ಸಂಗೀತೋತ್ಸವದಲ್ಲಿ ಮೊದಲ ದಿನವೇ ಯುವ ಪ್ರತಿಭೆಗಳು ತಮ್ಮ ಹಾಡುಗಾರಿಕೆ, ನೃತ್ಯಗಳಿಂದ ಜನರ ಮನಸೂರೆಗೊಂಡರು.</p>.<p>ಗಾಯಕಿ ಮಧುರಾ ಪ್ರಶಾಂತ್ ನಡೆಸಿಕೊಟ್ಟ ಕಛೇರಿಯಲ್ಲಿ ‘ಮಹಾಗಣಪತಿ’ ಕೃತಿಯನ್ನು ಅಠಾಣ ರಾಗದಲ್ಲಿ, ತ್ಯಾಗರಾಜರ ‘ಶ್ರೀರಾಮ ಪಾದಮ’ ಕೃತಿಯನ್ನು ಅಮೃತ ವಾಹಿನಿ ರಾಗದಲ್ಲಿ, ‘ಬ್ರೋವ ಭಾರಮಾ’ ಕೃತಿಯನ್ನು ಬಹುದಾರಿ ರಾಗದಲ್ಲಿ ಮತ್ತು ವಾದಿರಾಜರ ಕೃತಿ ‘ನಾರಾಯಣ ಎನ್ನಿರೋ’ ಅನ್ನು ಹಂಸಧ್ವನಿ ರಾಗದಲ್ಲಿ ಪ್ರಸ್ತುತಪಡಿಸಿದರು.</p>.<p>ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಆಯೋಜಕ ವಿದ್ವಾನ್ ಆರ್.ಕೆ.ಪದ್ಮನಾಭ್, ‘ರುದ್ರಪಟ್ಟಣದಲ್ಲಿ ಜರುಗುವ ಸಂಗೀತೋತ್ಸವದಲ್ಲಿ ದೇಶದ ವಿವಿಧ ಭಾಗಗಳ ಸಂಗೀತ ಕಲಾವಿದರು ಸ್ವಯಂ ಆಸಕ್ತಿಯಿಂದ ಕಾರ್ಯಕ್ರಮ ನೀಡುವ ರೀತಿಯು ಇಲ್ಲಿನ ಸಂಗೀತ ಪರಂಪರೆಗೆ ದೊರಕುತ್ತಿರುವ ದೊಡ್ಡ ಗೌರವ’ ಎಂದರು.</p>.<p>‘22 ವರ್ಷಗಳಿಂದ ಜರುಗುತ್ತಿರುವ ಸಂಗೀತೋತ್ಸವದಲ್ಲಿ, ವರ್ಷದಿಂದ ವರ್ಷಕ್ಕೆ ಕಲಾವಿದರು ಮತ್ತು ಶ್ರೋತೃಗಳ ಸಂಖ್ಯೆ ಹೆಚ್ಚಾಗುತ್ತಿದೆ. 5 ದಿನಗಳ ಸಂಗೀತದ ಹಬ್ಬ ಆಚರಣೆ ಮಾಡುತ್ತಿರುವುದು ಅವಿಸ್ಮರಣೀಯ ಕ್ಷಣ. ರುದ್ರಪಟ್ಟಣದ ಸಂಗೀತೋತ್ಸವಕ್ಕೆ ಬೇಡಿಕೆ ಹೆಚ್ಚುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಣನೂರು (ಹಾಸನ):</strong> ‘ಸಂಗೀತದ ಹಬ್ಬ’ವೆಂದೇ ಪ್ರಖ್ಯಾತವಾಗಿರುವ ಇಲ್ಲಿನ ರುದ್ರಪಟ್ಟಣದ 5 ದಿನಗಳ ಸಂಗೀತೋತ್ಸವಕ್ಕೆ ಬುಧವಾರ ಅದ್ದೂರಿ ಚಾಲನೆ ದೊರಕಿತು. 22ನೇ ವರ್ಷದ ಸಂಗೀತೋತ್ಸವದಲ್ಲಿ ಮೊದಲ ದಿನವೇ ಯುವ ಪ್ರತಿಭೆಗಳು ತಮ್ಮ ಹಾಡುಗಾರಿಕೆ, ನೃತ್ಯಗಳಿಂದ ಜನರ ಮನಸೂರೆಗೊಂಡರು.</p>.<p>ಗಾಯಕಿ ಮಧುರಾ ಪ್ರಶಾಂತ್ ನಡೆಸಿಕೊಟ್ಟ ಕಛೇರಿಯಲ್ಲಿ ‘ಮಹಾಗಣಪತಿ’ ಕೃತಿಯನ್ನು ಅಠಾಣ ರಾಗದಲ್ಲಿ, ತ್ಯಾಗರಾಜರ ‘ಶ್ರೀರಾಮ ಪಾದಮ’ ಕೃತಿಯನ್ನು ಅಮೃತ ವಾಹಿನಿ ರಾಗದಲ್ಲಿ, ‘ಬ್ರೋವ ಭಾರಮಾ’ ಕೃತಿಯನ್ನು ಬಹುದಾರಿ ರಾಗದಲ್ಲಿ ಮತ್ತು ವಾದಿರಾಜರ ಕೃತಿ ‘ನಾರಾಯಣ ಎನ್ನಿರೋ’ ಅನ್ನು ಹಂಸಧ್ವನಿ ರಾಗದಲ್ಲಿ ಪ್ರಸ್ತುತಪಡಿಸಿದರು.</p>.<p>ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಆಯೋಜಕ ವಿದ್ವಾನ್ ಆರ್.ಕೆ.ಪದ್ಮನಾಭ್, ‘ರುದ್ರಪಟ್ಟಣದಲ್ಲಿ ಜರುಗುವ ಸಂಗೀತೋತ್ಸವದಲ್ಲಿ ದೇಶದ ವಿವಿಧ ಭಾಗಗಳ ಸಂಗೀತ ಕಲಾವಿದರು ಸ್ವಯಂ ಆಸಕ್ತಿಯಿಂದ ಕಾರ್ಯಕ್ರಮ ನೀಡುವ ರೀತಿಯು ಇಲ್ಲಿನ ಸಂಗೀತ ಪರಂಪರೆಗೆ ದೊರಕುತ್ತಿರುವ ದೊಡ್ಡ ಗೌರವ’ ಎಂದರು.</p>.<p>‘22 ವರ್ಷಗಳಿಂದ ಜರುಗುತ್ತಿರುವ ಸಂಗೀತೋತ್ಸವದಲ್ಲಿ, ವರ್ಷದಿಂದ ವರ್ಷಕ್ಕೆ ಕಲಾವಿದರು ಮತ್ತು ಶ್ರೋತೃಗಳ ಸಂಖ್ಯೆ ಹೆಚ್ಚಾಗುತ್ತಿದೆ. 5 ದಿನಗಳ ಸಂಗೀತದ ಹಬ್ಬ ಆಚರಣೆ ಮಾಡುತ್ತಿರುವುದು ಅವಿಸ್ಮರಣೀಯ ಕ್ಷಣ. ರುದ್ರಪಟ್ಟಣದ ಸಂಗೀತೋತ್ಸವಕ್ಕೆ ಬೇಡಿಕೆ ಹೆಚ್ಚುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>