<p>ಹಾಸನ: ಜಿಲ್ಲೆಯಲ್ಲಿ ಮೇ ತಿಂಗಳಿಂದಲೇ ಆರಂಭವಾದ ಮಳೆ ಆಗಸ್ಟ್ ಅಂತ್ಯದವರೆಗೂ ನಿರಂತರವಾಗಿ ಸುರಿದಿದೆ. ಇದರಿಂದಾಗಿ ಜಿಲ್ಲೆಯಾದ್ಯಂತ ರಸ್ತೆಗಳು ಹದಗೆಟ್ಟಿವೆ. ತುಂಬಿದ ಕೆರೆಗಳು ಒಡೆದು, ರಸ್ತೆ, ತೋಟಗಳಿಗೆ ನುಗ್ಗಿದ್ದು, ಬಹುತೇಕ ಗ್ರಾಮೀಣ ರಸ್ತೆಗಳಲ್ಲಿ ಜನರ ಓಡಾಟಕ್ಕೆ ರಸ್ತೆಗಳೇ ಇಲ್ಲದಂತಾಗಿದೆ.</p>.<p>ಈ ಬಾರಿಯ ಮಳೆಯಿಂದ ಬಯಲು ಸೀಮೆ ಪ್ರದೇಶದ ಕೆರೆಗಳೂ ಭರ್ತಿಯಾಗಿವೆ. 300ಕ್ಕೂ ಅಧಿಕ ಕೆರೆಗಳು ತುಂಬಿದ್ದು, ಈ ಕೆರೆಗಳ ಹೆಚ್ಚುವರಿ ನೀರು ರಸ್ತೆಯ ಮೇಲೆ ಹರಿದಿದೆ. ಇದರಿಂದ ರಸ್ತೆಯಲ್ಲಿ ಕೊರಕಲು ಬಿದ್ದಿದ್ದು, ವಾಹನಗಳ ಓಡಾಟ ದುಸ್ತರವಾಗಿದೆ.</p>.<p>ಹಿರೀಸಾವೆ ಹೋಬಳಿಯಲ್ಲಿ ಸತತವಾಗಿ 3 ತಿಂಗಳು ಕಾಲ ಬಿದ್ದ ಮಳೆಗೆ ಗ್ರಾಮೀಣ ಭಾಗದ ಜಿಲ್ಲಾ ಪಂಚಾಯಿತಿ ರಸ್ತೆಗಳೂ ಸೇರಿದಂತೆ ಸಣ್ಣ ರಸ್ತೆಗಳು ಸಂಪೂರ್ಣ ಹಾಳಾಗಿವೆ.ಇದರಿಂದ ಹೋಬಳಿ ಕೇಂದ್ರ ಸೇರಿದಂತೆ ಇತರೆ ಗ್ರಾಮಗಳಿಗೆ ಹೋಗಲು ಸಾರ್ವಜನಿಕರಿಗೆ ತೊಂದರೆಯಾಗಿದೆ.</p>.<p>ಹಿರೀಸಾವೆಯಿಂದ 2ಕಿ.ಮೀ ದೂರದಲ್ಲಿ ಇರುವ ತೂಬಿನಕೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ2ರಸ್ತೆಗಳ ಡಾಂಬರ್, ಹಳ್ಳದ ನೀರಿನ ರಭಸಕ್ಕೆ ಕಿತ್ತು ಹೋಗಿದೆ.ಎರಡು ಸೇತುವೆಗಳ ಪಕ್ಕ ರಸ್ತೆ ಕೊಚ್ಚಿ ಹೋಗಿದೆ.ಈ ಗ್ರಾಮದವರು ಮತ್ತು ವಿದ್ಯಾರ್ಥಿಗಳು ನಿತ್ಯ ಕೊತ್ತನಹಳ್ಳಿ,ಕೊಳ್ಳೇನಹಳ್ಳಿ ಅಥವಾ ಕಿರೀಸಾವೆ ಮೂಲಕ6ಕಿ.ಮೀ.ಸುತ್ತಿ ಬರಬೇಕಿದೆ.</p>.<p>‘ರಸ್ತೆ ಮತ್ತು ಸೇತುವೆ ಸರಿಪಡಿಸಲು ಗ್ರಾಮಸ್ಥರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಎರಡು ತಿಂಗಳ ಹಿಂದೆ ಮನವಿ ಮಾಡಿದ್ದೇವೆ. ಆದರೆ, ಇದುವರೆಗೆ ರಸ್ತೆ,ಸೇತುವೆಯ ದುರಸ್ತಿ ಕಾರ್ಯ ಪ್ರಾರಂಭವಾಗಿಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಶಂಕರ್.</p>.<p>ಹಿರೀಸಾವೆಯಿಂದ ಕೊತ್ತನಹಳ್ಳಿ, ಕೊಳ್ಳೇನಹಳ್ಳಿಯ ಸಂಪರ್ಕ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದೆ.ಮಳೆ ನಿಂತು ಎರಡು ತಿಂಗಳಾದರೂ,ಇನ್ನೂ ಹಲವು ಗ್ರಾಮಗಳ ಸಣ್ಣ ರಸ್ತೆಗಳ ದುರಸ್ತಿ ಕೆಲಸ ಪ್ರಾರಂಭವಾಗಿಲ್ಲ.</p>.<p>ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದಾಗಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ಅನೇಕ ರಸ್ತೆಗಳು ಹಾಳಾಗಿದ್ದು, ವಾಹನಗಳು ಹಾಗೂ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.</p>.<p>ಗ್ರಾಮಾಂತರ ಪ್ರದೇಶದಲ್ಲಿ ಕೆಲವೆಡೆ 50 ಮನೆಗಳಿರುವ ಬಡಾವಣೆಗಳ ಮಣ್ಣಿನ ರಸ್ತೆ ಹದಗೆಟ್ಟಿದೆ. ಅಚ್ಚುಕಟ್ಟು ಪ್ರದೇಶಗಳ ರಸ್ತೆಗಳೂ ಇದಕ್ಕಿಂತ ಭಿನ್ನವಾಗಿಲ್ಲ. ಈ ರಸ್ತೆಗಳ ದುರಸ್ತಿಗೆ ಕ್ರಮ ತೆಗೆದುಕೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಜನರ ಒತ್ತಾಯ.</p>.<p>ಭಾರಿ ಮಳೆಯಿಂದ ಆಲೂರು ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿರುವ ಸುಮಾರು 200 ಕಿ.ಮೀ. ರಸ್ತೆಗಳು ಹದಗೆಟ್ಟಿವೆ. ಈ ಬಗ್ಗೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ<br />ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.</p>.<p>ಈವರೆಗೂ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಆಗಾಗ ಮಳೆ ಆಗುತ್ತಿರುವುದರಿಂದ ಕೆಲ ಗ್ರಾಮಗಳಲ್ಲಿರುವ ರಸ್ತೆಗಳು ತೀವ್ರ ಹಾನಿಗೊಳಗಾಗುತ್ತಿವೆ. ಕೆಲ ರಸ್ತೆಗಳ ಇಕ್ಕೆಲಗಳಲ್ಲಿ ಗಿಡಗಂಟಿಗಳು<br />ಬೆಳೆದಿವೆ. ಕೆಲ ರಸ್ತೆಗಳು ಕೆರೆ ಏರಿ ಮೂಲಕ ಹಾದು ಹೋಗಿದ್ದು, ರಸ್ತೆಗಳು ಗುಂಡಿಗಳಾಗಿದ್ದು, ಜನ, ಜಾನುವಾರುಗಳು ತಿರುಗಾಡಲು ಸಾಧ್ಯವಾಗುತ್ತಿಲ್ಲ.</p>.<p>ಹಳೇಬೀಡಿನ ಬೇಲೂರು– ಬಾಣಾವರ ರಸ್ತೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ ಬೇರೆ ಎಲ್ಲ ರಸ್ತೆಗಳು ಮಳೆಯಿಂದ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ತೊಡಕಾಗಿದೆ.</p>.<p>ದ್ವಾರಸಮುದ್ರ ಕೆರೆಯ ಏರಿ ದುರಸ್ತಿ ಮಾಡಿ ಒಂದೂವರೆ ವರ್ಷ ಕಳೆದಿದೆ. ಆದರೆ, ಏರಿಯ ಮೇಲಿನ ರಸ್ತೆಗೆ ಡಾಂಬರ್ ಹಾಕುವ ಕೆಲಸ ವಿಳಂಬವಾಗಿದ್ದು, ಏರಿಯಲ್ಲಿ ಗುಂಡಿ<br />ಗಳು ನಿರ್ಮಾಣವಾಗಿವೆ. ಮಣ್ಣಿನ ರಸ್ತೆಯಲ್ಲಿ ಜಲ್ಲಿ ಮೇಲಿದ್ದಿವೆ. ವಾಹನ ಸಂಚರಿಸುವಾಗ ರಸ್ತೆ ದೂಳುಮಯ<br />ವಾಗುತ್ತಿದೆ. ಚುರುಕಿನಿಂದ ಡಾಂಬರೀ<br />ಕರಣ ಮಾಡಬೇಕು ಎಂದು ಶಾಸಕ ಕೆ.ಎಸ್.ಲಿಂಗೇಶ್ ಸೂಚಿಸಿದ್ದರೂ, ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ.</p>.<p>ಹೊಯ್ಸಳೇಶ್ವರ ದೇವಾಲಯ ರಸ್ತೆಯಲ್ಲಿ ಬಸವೇಶ್ವರ ವೃತ್ತದ ಬಳಿ ದೊಡ್ಡ ಗಾತ್ರದ ಗುಂಡಿಗಳು ಬಿದ್ದಿದ್ದವು. ಡಾಂಬರ್ ಹಾಕದೆ ಜಲ್ಲಿ, ಮಣ್ಣು ತುಂಬಿಸಲಾಗಿದೆ. ಗುಂಡಿ ಮುಚ್ಚುವ ಜಾಗದಲ್ಲಿ ಸಮತಟ್ಟು ಮಾಡದೆ ಇರುವುದರಿಂದ ಈಗಲೂ ವಾಹನ ಅಪಘಾತಗಳಿಗೆ ಅವಕಾಶ ಕಲ್ಪಿಸಿದಂತಾಗಿದೆ.</p>.<p>ರಾಜನಶಿಯೂರು ರಸ್ತೆಯಲ್ಲಿ ಹೆಜ್ಜೆಗೊಂದು ಗುಂಡಿಗಳಾಗಿವೆ. ಹಳೇಬೀಡಿನಿಂದ 5 ಕಿ.ಮೀ ರಾಜಶಿಯೂರು ತಲುಪುವವರೆಗೆ ಗುಂಡಿಯಿಂದ ಗುಂಡಿಗೆ ಇಳಿದು ವಾಹನ ಚಾಲನೆ ಮಾಡುವಂತಾಗಿದೆ. ಹಗರೆ ಮಾರ್ಗದ ಹಳೇಬೀಡು ಹಾಸನ ರಸ್ತೆಯಲ್ಲಿ ಬಸ್ತಿಹಳ್ಳಿ ದಾಟಿದಾಕ್ಷಣ ಪುಷ್ಪಗಿರಿಯವರೆಗೆ ಗುಂಡಿ ಬಿದ್ದಿದೆ.</p>.<p class="Briefhead">‘ದುರಸ್ತಿಗೆ ₹264 ಕೋಟಿ ಬೇಕು’</p>.<p>‘ಅರಕಲಗೂಡು ತಾಲ್ಲೂಕಿನಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಾಜ್ಯ ಹೆದ್ದಾರಿ 89.49 ಕಿ.ಮೀ ಹಾನಿಯಾಗಿದ್ದು, ಇದರ ದುರಸ್ತಿಗೆ ₹49.65 ಕೋಟಿ, ಹಾನಿಯಾಗಿರುವ ಜಿಲ್ಲಾ ಮುಖ್ಯ ರಸ್ತೆ ದುರಸ್ತಿಗೆ ₹188.55 ಕೋಟಿ ಅಗತ್ಯವಿದೆ. ರಾಜ್ಯ ಹೆದ್ದಾರಿಯಲ್ಲಿ 10 ಕಿರು ಸೇತುವೆಗಳು ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ 23 ಕಿರು ಸೇತುವೆಗಳಿಗೆ ಹಾನಿಯಾಗಿದ್ದು, ಇದರ ಮರುನಿರ್ಮಾಣಕ್ಕೆ ₹9.8 ಕೋಟಿ ಅಗತ್ಯವಿದೆ. ರಸ್ತೆ, ಕಿರು ಸೇತುವೆಗಳ ದುರಸ್ತಿಗೆ ಒಟ್ಟು ₹264 ಕೋಟಿ ಅಗತ್ಯವಿದ್ದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ತಕ್ಷಣದ ದುರಸ್ತಿಗೆ ಕಾರ್ಯಕ್ಕೆ ₹1.85 ಕೋಟಿ ಕೇಳಿದ್ದು, ₹1.50 ಕೋಟಿ ಮಂಜೂರಾಗಿರುವ ಮಾಹಿತಿ ಬಂದಿದೆ. ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಎಇಇ ಬಿ.ಎಸ್. ಗಣೇಶ್ ತಿಳಿಸಿದರು.</p>.<p>‘ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿದ 2,415 ಕಿ.ಮೀ. ರಸ್ತೆ ಹಾನಿಗೊಳಗಾಗಿದ್ದು, ಇದರ ದುರಸ್ತಿಗೆ ₹5.86 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.</p>.<p class="Briefhead">ಯಾರು ಏನಂತಾರೆ?</p>.<p class="Briefhead">‘ಹಣ ಬಿಡುಗಡೆಯಾದ ತಕ್ಷಣ ದುರಸ್ತಿ’</p>.<p>ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಪರಿಸ್ಥಿತಿ ಮತ್ತು ದುರಸ್ತಿಗೆ ತಗಲುವ ವೆಚ್ಚದ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ. ಹಣ ಬಿಡುಗಡೆಯಾದ ಕೂಡಲೇ ದುರಸ್ತಿ ಪ್ರಮಾಣ ಆಧರಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.</p>.<p>–ನರಸಿಂಹಯ್ಯ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಆಲೂರು</p>.<p class="Briefhead">‘ಅನುದಾನ ಸಾಕಾಗದು’</p>.<p>ರಸ್ತೆ ದುರಸ್ತಿಗೆ ನೀರಾವರಿ ಇಲಾಖೆಯಿಂದ ₹75 ಲಕ್ಷ, ಲೋಕೋಪಯೋಗಿ ಇಲಾಖೆಯಿಂದ ₹1 ಕೋಟಿ ಬಿಡುಗಡೆಯಾಗಿದೆ. ಈ ಅನುದಾನ ಸಾಕಾಗುವುದಿಲ್ಲ. ನೀರಾವರಿ ಇಲಾಖೆಯಿಂದ ಅಂದಾಜು ₹15 ಕೋಟಿ, ಆರ್ಡಿಪಿಆರ್ ಇಲಾಖೆಯಿಂದ ₹10 ಕೋಟಿ ಬಿಡುಗಡೆ ಮಾಡಬೇಕು. ಪಟ್ಟಣದಲ್ಲಿ ರಸ್ತೆ ಅಭಿವೃದ್ಧಿಗೆ ₹5 ಕೋಟಿ ಅಗತ್ಯ ಇದೆ.</p>.<p>–ಸಿ.ಎನ್.ಬಾಲಕೃಷ್ಣ, ಶಾಸಕ</p>.<p class="Briefhead">‘ರಸ್ತೆ ಇಲ್ಲದೇ ಸಂಚಾರ ದುಸ್ತರ’</p>.<p>ರಸ್ತೆ ಇಲ್ಲದೆ, ಸರಿಯಾದ ಸಮಯಕ್ಕೆ ಶಾಲಾ, ಕಾಲೇಜಿಗೆ ಹೋಗಲು ಆಗುತ್ತಿಲ್ಲ. ಹಳ್ಳದಲ್ಲಿ ನೀರು ಹರಿಯುತ್ತಿದ್ದು, ನಡೆದುಕೊಂಡು ಹೋಗಲು ಆಗದೆ, ಊರಿನಿಂದ ಹೋಗುವ ಬೈಕ್ಗಳನ್ನು ಕಾಯಬೇಕಿದೆ. ವಾಹನ ಇಲ್ಲದವರಿಗೆ ಕಷ್ಟವಾಗಿದೆ.</p>.<p>–ಟಿ.ಎಲ್. ವಿಕಾಸ್, ವಿದ್ಯಾರ್ಥಿ, ತೂಬಿನಕೆರೆ, ಹಿರೀಸಾವೆ ಹೋಬಳಿ</p>.<p class="Briefhead">‘ಆರೋಗ್ಯ ಸಮಸ್ಯೆ ಉಲ್ಬಣ’</p>.<p>ಗುಂಡಿಯಿಂದಾಗಿ ವಾಹನಗಳಿಗೆ ಹೆಚ್ಚಿನ ಇಂಧನ ಬಳಕೆಯಾಗುತ್ತಿದೆ. ವಾಹನ ಬಾಡಿಗೆಯಿಂದ ಲಾಭ ಇಲ್ಲದಂತಾಗಿದೆ. ಈ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದರಿಂದ ಸೊಂಟ, ಮೈಕೈ ನೋವು ಕಾಣಿಸಿಕೊಳ್ಳುತ್ತಿದೆ. ದೂಳಿನಿಂದ ಕೆಮ್ಮು, ಶೀತ ಮೊದಲಾದ ಶ್ವಾಸಕೋಶ ಕಾಯಿಲೆ ಎದುರಿಸುವಂತಾಗಿದೆ.</p>.<p>–ಗಣೇಶ, ಆಟೊರಿಕ್ಷಾ ಚಾಲಕ, ಹಳೇಬೀಡು</p>.<p class="Briefhead">‘ತಕ್ಷಣ ದುರಸ್ತಿ ಮಾಡಿ’</p>.<p>ಹಳೇಬೀಡಿನಲ್ಲಿ ಗುಂಡಿ ಇಲ್ಲದ ರಸ್ತೆಯೇ ಇಲ್ಲದಂತಾಗಿದೆ. ನಡೆದಾಡುವುದಕ್ಕೂ ಸಮಸ್ಯೆಯಾಗಿದೆ. ತಕ್ಷಣ ರಸ್ತೆಗಳನ್ನು ದುರಸ್ತಿ ಮಾಡಿಸಿದರೆ ಮಾತ್ರ ಜನ ನೆಮ್ಮದಿಯಿಂದ ಪ್ರಯಾಣ ಮಾಡಬಹುದು.</p>.<p>–ಜಿ.ಎನ್.ಗಂಗಾಧರಪ್ಪ, ಕಾಂಗ್ರೆಸ್ ಮುಖಂಡ, ಹಳೇಬೀಡು</p>.<p class="Briefhead">‘ಕೂಡಲೇ ಹಣ ಬಿಡುಗಡೆ ಮಾಡಿ’</p>.<p>ತಾಲ್ಲೂಕಿನಲ್ಲಿ ಸುರಿದ ಭಾರಿ ಪ್ರಮಾಣದ ಮಳೆಗೆ ರಸ್ತೆ ಸೇರಿದಂತೆ ಅಪಾರ ಪ್ರಮಾಣದ ಆಸ್ತಿಗಳಿಗೆ ಹಾನಿಯಾಗಿದೆ. ಸಂಬಂಧಿಸಿದ ಇಲಾಖೆಗಳು ನಷ್ಟದ ಅಂದಾಜು ತಯಾರಿಸಿ ಪ್ರಸ್ತಾವ ಸಲ್ಲಿಸಿವೆ. ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕು.</p>.<p>–ಎ.ಟಿ.ರಾಮಸ್ವಾಮಿ, ಅರಕಲಗೂಡು ಶಾಸಕ</p>.<p>*****</p>.<p class="Subhead">ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ಹಿ.ಕೃ. ಚಂದ್ರು, ಎಂ.ಪಿ. ಹರೀಶ್, ಸಿದ್ದರಾಜು, ಎಚ್.ಎಸ್. ಅನಿಲ್ ಕುಮಾರ್, ಜಗದೀಶ್ ಹೊರಟ್ಟಿ, ಜಿ. ಚಂದ್ರಶೇಖರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ: ಜಿಲ್ಲೆಯಲ್ಲಿ ಮೇ ತಿಂಗಳಿಂದಲೇ ಆರಂಭವಾದ ಮಳೆ ಆಗಸ್ಟ್ ಅಂತ್ಯದವರೆಗೂ ನಿರಂತರವಾಗಿ ಸುರಿದಿದೆ. ಇದರಿಂದಾಗಿ ಜಿಲ್ಲೆಯಾದ್ಯಂತ ರಸ್ತೆಗಳು ಹದಗೆಟ್ಟಿವೆ. ತುಂಬಿದ ಕೆರೆಗಳು ಒಡೆದು, ರಸ್ತೆ, ತೋಟಗಳಿಗೆ ನುಗ್ಗಿದ್ದು, ಬಹುತೇಕ ಗ್ರಾಮೀಣ ರಸ್ತೆಗಳಲ್ಲಿ ಜನರ ಓಡಾಟಕ್ಕೆ ರಸ್ತೆಗಳೇ ಇಲ್ಲದಂತಾಗಿದೆ.</p>.<p>ಈ ಬಾರಿಯ ಮಳೆಯಿಂದ ಬಯಲು ಸೀಮೆ ಪ್ರದೇಶದ ಕೆರೆಗಳೂ ಭರ್ತಿಯಾಗಿವೆ. 300ಕ್ಕೂ ಅಧಿಕ ಕೆರೆಗಳು ತುಂಬಿದ್ದು, ಈ ಕೆರೆಗಳ ಹೆಚ್ಚುವರಿ ನೀರು ರಸ್ತೆಯ ಮೇಲೆ ಹರಿದಿದೆ. ಇದರಿಂದ ರಸ್ತೆಯಲ್ಲಿ ಕೊರಕಲು ಬಿದ್ದಿದ್ದು, ವಾಹನಗಳ ಓಡಾಟ ದುಸ್ತರವಾಗಿದೆ.</p>.<p>ಹಿರೀಸಾವೆ ಹೋಬಳಿಯಲ್ಲಿ ಸತತವಾಗಿ 3 ತಿಂಗಳು ಕಾಲ ಬಿದ್ದ ಮಳೆಗೆ ಗ್ರಾಮೀಣ ಭಾಗದ ಜಿಲ್ಲಾ ಪಂಚಾಯಿತಿ ರಸ್ತೆಗಳೂ ಸೇರಿದಂತೆ ಸಣ್ಣ ರಸ್ತೆಗಳು ಸಂಪೂರ್ಣ ಹಾಳಾಗಿವೆ.ಇದರಿಂದ ಹೋಬಳಿ ಕೇಂದ್ರ ಸೇರಿದಂತೆ ಇತರೆ ಗ್ರಾಮಗಳಿಗೆ ಹೋಗಲು ಸಾರ್ವಜನಿಕರಿಗೆ ತೊಂದರೆಯಾಗಿದೆ.</p>.<p>ಹಿರೀಸಾವೆಯಿಂದ 2ಕಿ.ಮೀ ದೂರದಲ್ಲಿ ಇರುವ ತೂಬಿನಕೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ2ರಸ್ತೆಗಳ ಡಾಂಬರ್, ಹಳ್ಳದ ನೀರಿನ ರಭಸಕ್ಕೆ ಕಿತ್ತು ಹೋಗಿದೆ.ಎರಡು ಸೇತುವೆಗಳ ಪಕ್ಕ ರಸ್ತೆ ಕೊಚ್ಚಿ ಹೋಗಿದೆ.ಈ ಗ್ರಾಮದವರು ಮತ್ತು ವಿದ್ಯಾರ್ಥಿಗಳು ನಿತ್ಯ ಕೊತ್ತನಹಳ್ಳಿ,ಕೊಳ್ಳೇನಹಳ್ಳಿ ಅಥವಾ ಕಿರೀಸಾವೆ ಮೂಲಕ6ಕಿ.ಮೀ.ಸುತ್ತಿ ಬರಬೇಕಿದೆ.</p>.<p>‘ರಸ್ತೆ ಮತ್ತು ಸೇತುವೆ ಸರಿಪಡಿಸಲು ಗ್ರಾಮಸ್ಥರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಎರಡು ತಿಂಗಳ ಹಿಂದೆ ಮನವಿ ಮಾಡಿದ್ದೇವೆ. ಆದರೆ, ಇದುವರೆಗೆ ರಸ್ತೆ,ಸೇತುವೆಯ ದುರಸ್ತಿ ಕಾರ್ಯ ಪ್ರಾರಂಭವಾಗಿಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಶಂಕರ್.</p>.<p>ಹಿರೀಸಾವೆಯಿಂದ ಕೊತ್ತನಹಳ್ಳಿ, ಕೊಳ್ಳೇನಹಳ್ಳಿಯ ಸಂಪರ್ಕ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದೆ.ಮಳೆ ನಿಂತು ಎರಡು ತಿಂಗಳಾದರೂ,ಇನ್ನೂ ಹಲವು ಗ್ರಾಮಗಳ ಸಣ್ಣ ರಸ್ತೆಗಳ ದುರಸ್ತಿ ಕೆಲಸ ಪ್ರಾರಂಭವಾಗಿಲ್ಲ.</p>.<p>ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದಾಗಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ಅನೇಕ ರಸ್ತೆಗಳು ಹಾಳಾಗಿದ್ದು, ವಾಹನಗಳು ಹಾಗೂ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.</p>.<p>ಗ್ರಾಮಾಂತರ ಪ್ರದೇಶದಲ್ಲಿ ಕೆಲವೆಡೆ 50 ಮನೆಗಳಿರುವ ಬಡಾವಣೆಗಳ ಮಣ್ಣಿನ ರಸ್ತೆ ಹದಗೆಟ್ಟಿದೆ. ಅಚ್ಚುಕಟ್ಟು ಪ್ರದೇಶಗಳ ರಸ್ತೆಗಳೂ ಇದಕ್ಕಿಂತ ಭಿನ್ನವಾಗಿಲ್ಲ. ಈ ರಸ್ತೆಗಳ ದುರಸ್ತಿಗೆ ಕ್ರಮ ತೆಗೆದುಕೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಜನರ ಒತ್ತಾಯ.</p>.<p>ಭಾರಿ ಮಳೆಯಿಂದ ಆಲೂರು ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿರುವ ಸುಮಾರು 200 ಕಿ.ಮೀ. ರಸ್ತೆಗಳು ಹದಗೆಟ್ಟಿವೆ. ಈ ಬಗ್ಗೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ<br />ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.</p>.<p>ಈವರೆಗೂ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಆಗಾಗ ಮಳೆ ಆಗುತ್ತಿರುವುದರಿಂದ ಕೆಲ ಗ್ರಾಮಗಳಲ್ಲಿರುವ ರಸ್ತೆಗಳು ತೀವ್ರ ಹಾನಿಗೊಳಗಾಗುತ್ತಿವೆ. ಕೆಲ ರಸ್ತೆಗಳ ಇಕ್ಕೆಲಗಳಲ್ಲಿ ಗಿಡಗಂಟಿಗಳು<br />ಬೆಳೆದಿವೆ. ಕೆಲ ರಸ್ತೆಗಳು ಕೆರೆ ಏರಿ ಮೂಲಕ ಹಾದು ಹೋಗಿದ್ದು, ರಸ್ತೆಗಳು ಗುಂಡಿಗಳಾಗಿದ್ದು, ಜನ, ಜಾನುವಾರುಗಳು ತಿರುಗಾಡಲು ಸಾಧ್ಯವಾಗುತ್ತಿಲ್ಲ.</p>.<p>ಹಳೇಬೀಡಿನ ಬೇಲೂರು– ಬಾಣಾವರ ರಸ್ತೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ ಬೇರೆ ಎಲ್ಲ ರಸ್ತೆಗಳು ಮಳೆಯಿಂದ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ತೊಡಕಾಗಿದೆ.</p>.<p>ದ್ವಾರಸಮುದ್ರ ಕೆರೆಯ ಏರಿ ದುರಸ್ತಿ ಮಾಡಿ ಒಂದೂವರೆ ವರ್ಷ ಕಳೆದಿದೆ. ಆದರೆ, ಏರಿಯ ಮೇಲಿನ ರಸ್ತೆಗೆ ಡಾಂಬರ್ ಹಾಕುವ ಕೆಲಸ ವಿಳಂಬವಾಗಿದ್ದು, ಏರಿಯಲ್ಲಿ ಗುಂಡಿ<br />ಗಳು ನಿರ್ಮಾಣವಾಗಿವೆ. ಮಣ್ಣಿನ ರಸ್ತೆಯಲ್ಲಿ ಜಲ್ಲಿ ಮೇಲಿದ್ದಿವೆ. ವಾಹನ ಸಂಚರಿಸುವಾಗ ರಸ್ತೆ ದೂಳುಮಯ<br />ವಾಗುತ್ತಿದೆ. ಚುರುಕಿನಿಂದ ಡಾಂಬರೀ<br />ಕರಣ ಮಾಡಬೇಕು ಎಂದು ಶಾಸಕ ಕೆ.ಎಸ್.ಲಿಂಗೇಶ್ ಸೂಚಿಸಿದ್ದರೂ, ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ.</p>.<p>ಹೊಯ್ಸಳೇಶ್ವರ ದೇವಾಲಯ ರಸ್ತೆಯಲ್ಲಿ ಬಸವೇಶ್ವರ ವೃತ್ತದ ಬಳಿ ದೊಡ್ಡ ಗಾತ್ರದ ಗುಂಡಿಗಳು ಬಿದ್ದಿದ್ದವು. ಡಾಂಬರ್ ಹಾಕದೆ ಜಲ್ಲಿ, ಮಣ್ಣು ತುಂಬಿಸಲಾಗಿದೆ. ಗುಂಡಿ ಮುಚ್ಚುವ ಜಾಗದಲ್ಲಿ ಸಮತಟ್ಟು ಮಾಡದೆ ಇರುವುದರಿಂದ ಈಗಲೂ ವಾಹನ ಅಪಘಾತಗಳಿಗೆ ಅವಕಾಶ ಕಲ್ಪಿಸಿದಂತಾಗಿದೆ.</p>.<p>ರಾಜನಶಿಯೂರು ರಸ್ತೆಯಲ್ಲಿ ಹೆಜ್ಜೆಗೊಂದು ಗುಂಡಿಗಳಾಗಿವೆ. ಹಳೇಬೀಡಿನಿಂದ 5 ಕಿ.ಮೀ ರಾಜಶಿಯೂರು ತಲುಪುವವರೆಗೆ ಗುಂಡಿಯಿಂದ ಗುಂಡಿಗೆ ಇಳಿದು ವಾಹನ ಚಾಲನೆ ಮಾಡುವಂತಾಗಿದೆ. ಹಗರೆ ಮಾರ್ಗದ ಹಳೇಬೀಡು ಹಾಸನ ರಸ್ತೆಯಲ್ಲಿ ಬಸ್ತಿಹಳ್ಳಿ ದಾಟಿದಾಕ್ಷಣ ಪುಷ್ಪಗಿರಿಯವರೆಗೆ ಗುಂಡಿ ಬಿದ್ದಿದೆ.</p>.<p class="Briefhead">‘ದುರಸ್ತಿಗೆ ₹264 ಕೋಟಿ ಬೇಕು’</p>.<p>‘ಅರಕಲಗೂಡು ತಾಲ್ಲೂಕಿನಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಾಜ್ಯ ಹೆದ್ದಾರಿ 89.49 ಕಿ.ಮೀ ಹಾನಿಯಾಗಿದ್ದು, ಇದರ ದುರಸ್ತಿಗೆ ₹49.65 ಕೋಟಿ, ಹಾನಿಯಾಗಿರುವ ಜಿಲ್ಲಾ ಮುಖ್ಯ ರಸ್ತೆ ದುರಸ್ತಿಗೆ ₹188.55 ಕೋಟಿ ಅಗತ್ಯವಿದೆ. ರಾಜ್ಯ ಹೆದ್ದಾರಿಯಲ್ಲಿ 10 ಕಿರು ಸೇತುವೆಗಳು ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ 23 ಕಿರು ಸೇತುವೆಗಳಿಗೆ ಹಾನಿಯಾಗಿದ್ದು, ಇದರ ಮರುನಿರ್ಮಾಣಕ್ಕೆ ₹9.8 ಕೋಟಿ ಅಗತ್ಯವಿದೆ. ರಸ್ತೆ, ಕಿರು ಸೇತುವೆಗಳ ದುರಸ್ತಿಗೆ ಒಟ್ಟು ₹264 ಕೋಟಿ ಅಗತ್ಯವಿದ್ದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ತಕ್ಷಣದ ದುರಸ್ತಿಗೆ ಕಾರ್ಯಕ್ಕೆ ₹1.85 ಕೋಟಿ ಕೇಳಿದ್ದು, ₹1.50 ಕೋಟಿ ಮಂಜೂರಾಗಿರುವ ಮಾಹಿತಿ ಬಂದಿದೆ. ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಎಇಇ ಬಿ.ಎಸ್. ಗಣೇಶ್ ತಿಳಿಸಿದರು.</p>.<p>‘ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿದ 2,415 ಕಿ.ಮೀ. ರಸ್ತೆ ಹಾನಿಗೊಳಗಾಗಿದ್ದು, ಇದರ ದುರಸ್ತಿಗೆ ₹5.86 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.</p>.<p class="Briefhead">ಯಾರು ಏನಂತಾರೆ?</p>.<p class="Briefhead">‘ಹಣ ಬಿಡುಗಡೆಯಾದ ತಕ್ಷಣ ದುರಸ್ತಿ’</p>.<p>ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಪರಿಸ್ಥಿತಿ ಮತ್ತು ದುರಸ್ತಿಗೆ ತಗಲುವ ವೆಚ್ಚದ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ. ಹಣ ಬಿಡುಗಡೆಯಾದ ಕೂಡಲೇ ದುರಸ್ತಿ ಪ್ರಮಾಣ ಆಧರಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.</p>.<p>–ನರಸಿಂಹಯ್ಯ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಆಲೂರು</p>.<p class="Briefhead">‘ಅನುದಾನ ಸಾಕಾಗದು’</p>.<p>ರಸ್ತೆ ದುರಸ್ತಿಗೆ ನೀರಾವರಿ ಇಲಾಖೆಯಿಂದ ₹75 ಲಕ್ಷ, ಲೋಕೋಪಯೋಗಿ ಇಲಾಖೆಯಿಂದ ₹1 ಕೋಟಿ ಬಿಡುಗಡೆಯಾಗಿದೆ. ಈ ಅನುದಾನ ಸಾಕಾಗುವುದಿಲ್ಲ. ನೀರಾವರಿ ಇಲಾಖೆಯಿಂದ ಅಂದಾಜು ₹15 ಕೋಟಿ, ಆರ್ಡಿಪಿಆರ್ ಇಲಾಖೆಯಿಂದ ₹10 ಕೋಟಿ ಬಿಡುಗಡೆ ಮಾಡಬೇಕು. ಪಟ್ಟಣದಲ್ಲಿ ರಸ್ತೆ ಅಭಿವೃದ್ಧಿಗೆ ₹5 ಕೋಟಿ ಅಗತ್ಯ ಇದೆ.</p>.<p>–ಸಿ.ಎನ್.ಬಾಲಕೃಷ್ಣ, ಶಾಸಕ</p>.<p class="Briefhead">‘ರಸ್ತೆ ಇಲ್ಲದೇ ಸಂಚಾರ ದುಸ್ತರ’</p>.<p>ರಸ್ತೆ ಇಲ್ಲದೆ, ಸರಿಯಾದ ಸಮಯಕ್ಕೆ ಶಾಲಾ, ಕಾಲೇಜಿಗೆ ಹೋಗಲು ಆಗುತ್ತಿಲ್ಲ. ಹಳ್ಳದಲ್ಲಿ ನೀರು ಹರಿಯುತ್ತಿದ್ದು, ನಡೆದುಕೊಂಡು ಹೋಗಲು ಆಗದೆ, ಊರಿನಿಂದ ಹೋಗುವ ಬೈಕ್ಗಳನ್ನು ಕಾಯಬೇಕಿದೆ. ವಾಹನ ಇಲ್ಲದವರಿಗೆ ಕಷ್ಟವಾಗಿದೆ.</p>.<p>–ಟಿ.ಎಲ್. ವಿಕಾಸ್, ವಿದ್ಯಾರ್ಥಿ, ತೂಬಿನಕೆರೆ, ಹಿರೀಸಾವೆ ಹೋಬಳಿ</p>.<p class="Briefhead">‘ಆರೋಗ್ಯ ಸಮಸ್ಯೆ ಉಲ್ಬಣ’</p>.<p>ಗುಂಡಿಯಿಂದಾಗಿ ವಾಹನಗಳಿಗೆ ಹೆಚ್ಚಿನ ಇಂಧನ ಬಳಕೆಯಾಗುತ್ತಿದೆ. ವಾಹನ ಬಾಡಿಗೆಯಿಂದ ಲಾಭ ಇಲ್ಲದಂತಾಗಿದೆ. ಈ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದರಿಂದ ಸೊಂಟ, ಮೈಕೈ ನೋವು ಕಾಣಿಸಿಕೊಳ್ಳುತ್ತಿದೆ. ದೂಳಿನಿಂದ ಕೆಮ್ಮು, ಶೀತ ಮೊದಲಾದ ಶ್ವಾಸಕೋಶ ಕಾಯಿಲೆ ಎದುರಿಸುವಂತಾಗಿದೆ.</p>.<p>–ಗಣೇಶ, ಆಟೊರಿಕ್ಷಾ ಚಾಲಕ, ಹಳೇಬೀಡು</p>.<p class="Briefhead">‘ತಕ್ಷಣ ದುರಸ್ತಿ ಮಾಡಿ’</p>.<p>ಹಳೇಬೀಡಿನಲ್ಲಿ ಗುಂಡಿ ಇಲ್ಲದ ರಸ್ತೆಯೇ ಇಲ್ಲದಂತಾಗಿದೆ. ನಡೆದಾಡುವುದಕ್ಕೂ ಸಮಸ್ಯೆಯಾಗಿದೆ. ತಕ್ಷಣ ರಸ್ತೆಗಳನ್ನು ದುರಸ್ತಿ ಮಾಡಿಸಿದರೆ ಮಾತ್ರ ಜನ ನೆಮ್ಮದಿಯಿಂದ ಪ್ರಯಾಣ ಮಾಡಬಹುದು.</p>.<p>–ಜಿ.ಎನ್.ಗಂಗಾಧರಪ್ಪ, ಕಾಂಗ್ರೆಸ್ ಮುಖಂಡ, ಹಳೇಬೀಡು</p>.<p class="Briefhead">‘ಕೂಡಲೇ ಹಣ ಬಿಡುಗಡೆ ಮಾಡಿ’</p>.<p>ತಾಲ್ಲೂಕಿನಲ್ಲಿ ಸುರಿದ ಭಾರಿ ಪ್ರಮಾಣದ ಮಳೆಗೆ ರಸ್ತೆ ಸೇರಿದಂತೆ ಅಪಾರ ಪ್ರಮಾಣದ ಆಸ್ತಿಗಳಿಗೆ ಹಾನಿಯಾಗಿದೆ. ಸಂಬಂಧಿಸಿದ ಇಲಾಖೆಗಳು ನಷ್ಟದ ಅಂದಾಜು ತಯಾರಿಸಿ ಪ್ರಸ್ತಾವ ಸಲ್ಲಿಸಿವೆ. ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕು.</p>.<p>–ಎ.ಟಿ.ರಾಮಸ್ವಾಮಿ, ಅರಕಲಗೂಡು ಶಾಸಕ</p>.<p>*****</p>.<p class="Subhead">ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ಹಿ.ಕೃ. ಚಂದ್ರು, ಎಂ.ಪಿ. ಹರೀಶ್, ಸಿದ್ದರಾಜು, ಎಚ್.ಎಸ್. ಅನಿಲ್ ಕುಮಾರ್, ಜಗದೀಶ್ ಹೊರಟ್ಟಿ, ಜಿ. ಚಂದ್ರಶೇಖರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>