ವಿಜಯೋತ್ಸವ: ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದ ರಾಜಬೀದಿ ಹಾಗೂ ಕುಶಾಲನಗರ ಬಡಾವಣೆಯಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಿದರು. ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರಣ್ಣ, ಪಕ್ಷದ ಮುಖಂಡ ಸೈಯದ್ ಮುಫೀಜ್, ಪುರಸಭಾ ಸದಸ್ಯರಾದ ಅಣ್ಣಪ್ಪ, ಅನ್ನಪೂರ್ಣ, ಕೊಲ್ಲಹಳ್ಳಿ ಸಲೀಂ, ಬೈಕೆರೆ ದೇವರಾಜ್, ಪುರಸಭೆ ಮಾಜಿ ಅಧ್ಯಕ್ಷೆ ಕೌಲಸ್ಯ ಲಕ್ಷ್ಮಣಗೌಡ ಇದ್ದರು.