ಗ್ರಾಮದ ರೈತ ಚಂದ್ರೇಗೌಡ ಮಾತನಾಡಿ, ಕಳೆದ ಬಾರಿಯಂತೆ ಈ ಬಾರಿಯೂ ಖರೀದಿ ಕೇಂದ್ರದ ಬಳಿ ರೈತರು ಹೆಚ್ಚಾಗಿ ಸೇರುತ್ತಿರುವುದರಿಂದ ನೂಕುನಗ್ಗಲು ಉಂಟಾಗುತ್ತಿದೆ. ಖರೀದಿ ಕೇಂದ್ರದ ಅಧಿಕಾರಿಗಳು ಟೋಕನ್ ಪದ್ಧತಿ ಅನುಸರಿಸಿದರೆ ಅನುಕೂಲವಾಗುತ್ತದೆ, ಇದರಿಂದ ರೈತರು ಖರೀದಿ ಕೇಂದ್ರದ ಬಳಿ ಏಕಾಏಕಿ ಜಮಾಯಿಸುವುದು ಕಡಿಮೆಯಾಗಿ ಅವರ ಟೋಕನ್ ನಂಬರ್ ಬಂದಾಗ ನೋಂದಣಿ ಮಾಡಿಸಿಕೊಂಡು ಹೋಗುತ್ತಾರೆ ಎಂದು ಸಲಹೆ ನೀಡಿದರು.