ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ: ಬಿತ್ತನೆ ಬೀಜಕ್ಕೂ ತಟ್ಟಿದ ಬೆಲೆ ಏರಿಕೆ ಬಿಸಿ

ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಬೀಜ, ಗೊಬ್ಬರ ದಾಸ್ತಾನು: ಜುಲೈ ಅಂತ್ಯಕ್ಕೆ ಶೇ 75 ರಷ್ಟು ಬಿತ್ತನೆ
Published : 1 ಜುಲೈ 2024, 7:25 IST
Last Updated : 1 ಜುಲೈ 2024, 7:25 IST
ಫಾಲೋ ಮಾಡಿ
Comments
ಬೆಲೆ ಹೆಚ್ಚಿಸಿದ ಸರ್ಕಾರ
ಕಳೆದ ವರ್ಷ 5 ಕೆ.ಜಿ. ರಾಗಿ ಬಿತ್ತನೆ ಬೀಜದ ಬೆಲೆ ₹ 190 ಇತ್ತು. ಸರ್ಕಾರ ಈ ವರ್ಷ ₹ 45 ಹೆಚ್ಚಿಗೆ ಮಾಡಿ ₹ 235 ಆಗಿದೆ. 2022–23 ರಲ್ಲಿ ಹಿರೀಸಾವೆ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ಬಂದಿಲ್ಲ. ಸರ್ಕಾರ ಬೆಳೆ ವಿಮೆ ಪರಿಹಾರ ನೀಡುವಾಗ ತಾರತಮ್ಯ ಮಾಡಬಾರದು. ಶ್ರೀನಿವಾಸ್ ರೈತ ತೂಬಿನ ಕೆರೆ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇಲ್ಲ. ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಲಾಗುತ್ತಿದೆ. ರಾಜಸುಲೋಚನಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಬಿತ್ತನೆ ಬೀಜದ ಕೊರತೆ ಇಲ್ಲ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 42 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಮಾಡಲಾಗುತ್ತದೆ. ಈಗಾಗಲೇ 3569 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಬಿತ್ತನೆ ಬೀಜದ ಕೊರತೆ ಇಲ್ಲ. ಎಂ.ಎಸ್. ಜನಾರ್ದನ್ ಸಹಾಯಕ ಕೃಷಿ ನಿರ್ದೇಶಕ ಚನ್ನರಾಯಪಟ್ಟಣ ಬೆಲೆ ಕಡಿಮೆ ಮಾಡಿ ರಾಗಿ ಹೆಸರು ಮುಸುಕಿನಜೋಳ ಅಲಸಂದೆ  ಬಿತ್ತನೆ ಬೀಜದ ದರ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ರೈತರ ಹಿತಕ್ಕೆ ಮಾರಕವಾಗುವಂತೆ ನಡೆದುಕೊಳ್ಳಬಾರದು. ಈ ಹಿಂದಿನಂತೆ  ಬಿತ್ತನೆ ಬೀಜದ ದರ ಕಡಿಮೆ ಮಾಡುವ ಮೂಲಕ ಸರ್ಕಾರ ನೆರವಿಗೆ  ಧಾವಿಸಬೇಕು. ಸಿ.ಜಿ.ರವಿ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನರಾಯಪಟ್ಟಣ ಬೀಜ ಗೊಬ್ಬರದ ಕೊರತೆ ಇಲ್ಲ ಹಿರೀಸಾವೆ ರೈತ ಸಂಪರ್ಕ ಕೇಂದ್ರದಲ್ಲಿ 540 ಕೆ.ಜಿ. ರಾಗಿ 600 ಕೆ.ಜಿ. ಮುಸುಕಿನ ಜೋಳ 1ಸಾವಿರ ಕೆ.ಜಿ. ಸೆಣಬು 100 ಕೆ.ಜಿ. ಹೆಸರಿನ ಬಿತ್ತನೆ ಬೀಜಗಳ ದಾಸ್ತಾನು ಇದೆ. ಗೊಬ್ಬರದ ಕೊರತೆಯೂ ಇಲ್ಲ. ಜಹಾನ್ ತಾಜ್ ಹಿರೀಸಾವೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ 12 ಸಾವಿರ ಹೆಕ್ಟೇರ್‌ನಲ್ಲಿ ವಾಣಿಜ್ಯ ಬೆಳೆ 12805 ಹೆಕ್ಟೇರ್‌ನಲ್ಲಿ ವಾಣಿಜ್ಯ ಬೆಳೆಗಳಾದ ತಂಬಾಕು ಕಬ್ಬು ಹಾಗೂ ಹತ್ತಿ ಬಿತ್ತನೆ ಗುರಿ ಹೊಂದಲಾಗಿದ್ದು 11067 ಹೆಕ್ಟೇರ್‌ನಲ್ಲಿ ಬಿತ್ತನೆ ಪ್ರಗತಿಯಲ್ಲಿದೆ. ಮಂಜುನಾಥ್ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಅಗತ್ಯ ದಾಸ್ತಾನು ಈ ವರ್ಷ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಕೊರತೆಯಾಗಿಲ್ಲ. ಆಗಸ್ಟ್‌ವರೆಗೂ ಪೂರೈಕೆ ಮಾಡಲು ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಆಗಸ್ಟ್ ನಂತರ ಪೂರೈಕೆ ಮಾಡಲು ರಾಗಿ ಬೀಜ ದಾಸ್ತಾನು ಮಾಡಲು ಸಿದ್ದತೆ ನಡೆದಿದೆ.  ರಂಗಸ್ವಾಮಿ ಸಹಾಯಕ ಕೃಷಿ ನಿರ್ದೇಶಕ ಬೇಲೂರು ತಾಲ್ಲೂಕು
ಅರಕಲಗೂಡು: ಬಿತ್ತನೆ ಬೀಜದ ಕೊರತೆ ಇಲ್ಲ
ಅರಕಲಗೂಡು ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು ಕೃಷಿ ಚಟುವಟಿಕೆ ಚುರುಕಾಗಿದೆ. ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕಿ ಕೆ.ಜಿ. ಕವಿತಾ ತಿಳಿಸಿದರು. ಮುಸುಕಿನ ಜೋಳದ ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ವಿವಿಧ ತಳಿಯ ಮುಸುಕಿನ ಜೋಳದ 223 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನಿದ್ದು ಈ ವರೆಗೆ 75.90 ಕ್ವಿಂಟಲ್ ವಿತರಣೆಯಾಗಿದೆ. ಉಳಿದಂತೆ ಅಲಸಂದೆ 62.8 ಕ್ವಿಂಟಲ್ ದಾಸ್ತಾನಿದ್ದು 35.2 ಕ್ವಿಂಟಲ್ ವಿತರಣೆ ತೊಗರಿ 60 ಕೆ.ಜಿ. ದಾಸ್ತಾನು 25 ಕೆ.ಜಿ. ವಿತರಣೆ ರಾಗಿ ದಾಸ್ತಾನು 85 ಕ್ವಿಂಟಲ್ 4.65 ಕ್ವಿಂಟಲ್ ವಿತರಣೆ ಹೆಸರು ದಾಸ್ತಾನು 2.40 ಕ್ವಿಂಟಲ್ 60 ಕೆ.ಜಿ. ವಿತರಣೆಯಾಗಿದೆ. ಹೈಬ್ರೀಡ್ ಭತ್ತ ದಾಸ್ತಾನು 67.5 ಕ್ವಿಂಟಲ್ ಇದ್ದು 11.30 ಕ್ವಿಂಟಲ್ ವಿತರಣೆ ಮಾಡಲಾಗಿದೆ. ಸಾಮಾನ್ಯ ಭತ್ತ ದಾಸ್ತಾನು 75  ಕ್ವಿಂಟಲ್ 8.5 ಕ್ವಿಂಟಲ್ ವಿತರಣೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎಲ್ಲ ಬಿತ್ತನೆ ಬೀಜದ ದರಗಳಲ್ಲಿ ಹೆಚ್ಚಳವಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿಗೆ 43640 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು ಈವರೆಗೆ 27040 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ತಂಬಾಕು 7450 ಹೆಕ್ಟೇರ್ ಮುಸುಕಿನ ಜೋಳ 18700 ಹೆಕ್ಟೇರ್  ಅಲಸಂದೆ 700 ಹೆಕ್ಟೇರ್ ಹೆಸರು 40 ಹೆಕ್ಟೇರ್ ತೊಗರಿ 45 ಹೆಕ್ಟೇರ್ ಉದ್ದು 30 ಹೆಕ್ಟೇರ್ ಮತ್ತು ನೆಲಗಡಲೆ 75 ಹೆಕ್ಠೆರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT