ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೀವಿತಾವಧಿಯಲ್ಲಿಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕೆಂಬ ದೇವೇಗೌಡರ ಮನವಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಂದಿಸಿದ್ದಾರೆ. ಹಳೆ ಯೋಜನೆಯಂತೆ ವಿಮಾನನಿಲ್ದಾಣ ಮಾಡದಿದ್ದರೆ ಧರಣಿ ನಡೆಸುವುದಾಗಿ ರೇವಣ್ಣ ಎಚ್ಚರಿಕೆ ನೀಡಿದ್ದಾರೆ. ಹಾಸನದಿಂದ ಬೆಂಗಳೂರಿಗೆ ಎರಡು ತಾಸು ಪ್ರಯಾಣ. ಅಲ್ಲಿ ಅಂತರರಾಷ್ಟ್ರೀಯ ವಿಮಾನನಿಲ್ದಾಣವಿದೆ. ಮೈಸೂರಿಗೂ ಎರಡು ಗಂಟೆ ಪ್ರಯಾಣ. ಅಲ್ಲಿಯೂ ವಿಮಾನ ನಿಲ್ದಾಣವಿದೆ.ಹಾಸನಕ್ಕೂ ವಿಮಾನ ನಿಲ್ದಾಣ ಬೇಕು. ಆದರೆ, ಅದು ಹೇಗಿರಬೇಕೆಂದು ತಜ್ಞರು ನಿರ್ಧಾರಮಾಡುತ್ತಾರೆ ಎಂದು ತಿಳಿಸಿದರು.