ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಜ್ಞರ ಸಮಿತಿ ತೀರ್ಮಾನವೇ ಅಂತಿಮ: ಶಾಸಕ ಪ್ರೀತಂಗೌಡ

ದೇವೇಗೌಡ ಆಶಯದಂತೆ ವಿಮಾನ ನಿಲ್ದಾಣ ನಿರ್ಮಾಣ
Last Updated 14 ಜುಲೈ 2021, 14:37 IST
ಅಕ್ಷರ ಗಾತ್ರ

ಹಾಸನ: ಹಾಸನ ವಿಮಾನ ನಿಲ್ದಾಣ ಯಾವ ರೀತಿ ನಿರ್ಮಾಣವಾಗಬೇಕು ಎಂಬುದನ್ನು ತಜ್ಞರ ಸಮಿತಿ ತೀರ್ಮಾನ ಮಾಡಲಿದೆ.ರೇವಣ್ಣ ಒಬ್ಬ ಶಾಸಕ, ತಜ್ಞರಲ್ಲ ಎಂದುಶಾಸಕ ಪ್ರೀತಂಗೌಡ ತಿರುಗೇಟು ನೀಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೀವಿತಾವಧಿಯಲ್ಲಿಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕೆಂಬ ದೇವೇಗೌಡರ ಮನವಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸ್ಪಂದಿಸಿದ್ದಾರೆ. ಹಳೆ ಯೋಜನೆಯಂತೆ ವಿಮಾನನಿಲ್ದಾಣ ಮಾಡದಿದ್ದರೆ ಧರಣಿ ನಡೆಸುವುದಾಗಿ ರೇವಣ್ಣ ಎಚ್ಚರಿಕೆ ನೀಡಿದ್ದಾರೆ. ಹಾಸನದಿಂದ ಬೆಂಗಳೂರಿಗೆ ಎರಡು ತಾಸು ಪ್ರಯಾಣ. ಅಲ್ಲಿ ಅಂತರರಾಷ್ಟ್ರೀಯ ವಿಮಾನನಿಲ್ದಾಣವಿದೆ. ಮೈಸೂರಿಗೂ ಎರಡು ಗಂಟೆ ಪ್ರಯಾಣ. ಅಲ್ಲಿಯೂ ವಿಮಾನ ನಿಲ್ದಾಣವಿದೆ.ಹಾಸನಕ್ಕೂ ‌ವಿಮಾನ‌ ನಿಲ್ದಾಣ ಬೇಕು. ಆದರೆ, ಅದು ‌ಹೇಗಿರಬೇಕೆಂದು ತಜ್ಞರು ನಿರ್ಧಾರಮಾಡುತ್ತಾರೆ ಎಂದು ತಿಳಿಸಿದರು.

‘ಹೆಚ್ಚುವರಿ ಭೂಮಿ ಡಿ ನೋಟಿಫೈ ಮಾಡಲು ಬಿಡಲ್ಲ’ ಎಂಬ ರೇವಣ್ಣ ಹೇಳಿಕೆ ಪ್ರತಿಕ್ರಿಯಿಸಿದಪ್ರೀತಂ, ‘ರೇವಣ್ಣ ಬೂವನಹಳ್ಳಿಗೆ ಬಂದು ಯಡಿಯೂರಪ್ಪ ನಿಮ್ಮ ಭೂಮಿ ವಾಪಸ್ ಕೊಡುತ್ತಿದ್ದಾರೆ. ಇದಕ್ಕೆ ನನ್ನ ವಿರೋಧ ಇದೆ’ಎಂದು ಹೇಳಲಿ. ನಾವ್ಯಾರು ಜಮೀನು ಬಿಡಿ ಎಂದು ಹೇಳಿಲ್ಲ. ತಜ್ಞರ‌‌ ತೀರ್ಮಾನದಂತೆ ಭೂಮಿ ವಾಪಸ್ ಕೊಡುತ್ತಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

‘ಯಾರನ್ನೋ‌ ಖುಷಿ ಪಡಿಸಲು ಯೋಜನೆ ಮಾಡಿಲ್ಲ. ರೇವಣ್ಣ ಹೇಳಿದಂತೆ ಏರ್‌ಪೋರ್ಟ್‌ ಮಾಡಲು, ಅದು ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ ಅಲ್ಲಾ. ಹತ್ತು ವರ್ಷ ಮಂತ್ರಿಯಾಗಿ ಒಂದು ವಿಮಾನ ನಿಲ್ದಾಣ ಮಾಡುವುದಕ್ಕೆ ಇವರಿಂದ ಆಗಿಲ್ಲ.‘ತಜ್ಞರ ವರದಿ ಬಗ್ಗೆ ಸಂದೇಹ ಇದ್ದರೆ ಕೇಳಲಿ. ಏರ್‌ಪೋರ್ಟ್‌ ಗೆ ಬಂದು ಗಾಲ್ಫ್‌ ಆಟವಾಡುವವರು ಯಾರು ಇಲ್ಲಾ. ನಾವು ರಾಗಿ, ಆಲೂಗಡ್ಡೆ ಬೆಳೆಯೋರು. ರೈತರ ಭೂಮಿ ತೆಗೆದುಕೊಂಡು ಗಾಲ್ಫ್‌ ಕ್ಲಬ್ ಮಾಡ್ತಾರಾ’ ಎಂದು ಪ್ರೀತಂ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT