<p><strong>ಹಾಸನ:</strong> ಈ ಬಾರಿಯ ಹಾಸನಾಂಬ ದರ್ಶನದಿಂದ ಆದಾಯ ಕಡಿಮೆಯಾದರೂ ಸರಿ, ಭಕ್ತರ ಸಂತೋಷವೇ ನಮ್ಮ ಸಾರ್ಥಕತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.</p>.<p>ಹಾಸನಂಬ ದೇವಾಲಯದ ಆವರಣದದಲ್ಲಿ ಭಕ್ತರ ಅಭಿಪ್ರಾಯ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಡ್ಡು ಬಂದರೆ ಗೌರವದಿಂದ ಸ್ವೀಕರಿಸುತ್ತೇವೆ. ಆದರೆ ಆದಾಯ ಶೂನ್ಯವಾದರೂ ಪರವಾಗಿಲ್ಲ. ಲಾಡು ಖರ್ಚು ನಮ್ಮ ಮೇಲೆ ಬಂದರೂ ಪರವಾಗಿಲ್ಲ ಎಂದರು.</p>.<p>ಅನುಕೂಲಸ್ಥರೂ ಧರ್ಮದರ್ಶನದ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಇದು ಧರ್ಮದ ಶ್ರೇಷ್ಠತೆ. ಬದಲಾವಣೆ ತಂದಾಗ ಆತಂಕ ಇರುತ್ತದೆ. ಆದರೆ ಭಕ್ತರ ಸಂತೋಷ ನಮ್ಮ ಸಾರ್ಥಕತೆ ಎಂದರು.</p>.<p>ದೇವಸ್ಥಾನದ ನಿರ್ವಹಣೆಗಾಗಿ ಸರ್ಕಾರದ ಹಣದ ಅವಲಂಬನೆ ಬೇಡ. ಸಾರ್ವಜನಿಕರ ದೇಣಿಗೆಯಿಂದ ದೇವಸ್ಥಾನ ನಡೆಯುವುದು ನಮಗೆ ಹೆಮ್ಮೆ ಇದೆ ಎಂದರು.</p>.<p>ಶನಿವಾರ ಈಗಾಗಲೇ 92 ಸಾವಿರ ಮಂದಿ ಅರ್ಧ ದಿನದಲ್ಲೇ ದರ್ಶನ ಪಡೆದಿದ್ದಾರೆ. ಭಾನುವಾರ ಮುಂಜಾನೆ 2 ಗಂಟೆಯವರೆಗೆ ದರ್ಶನ ಮುಂದುವರಿಯಲಿದೆ. ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬರಲಿದ್ದು, ನಮಗೆ ಸಂತೋಷ. ಮಧ್ಯಾಹ್ನ 1 ಗಂಟೆಗೆ ಬಂದವರು ಹದಿನೈದು ನಿಮಿಷಗಳಲ್ಲಿ ದರ್ಶನ ಪಡೆದಿದ್ದಾರೆ. ₹1ಸಾವಿರ ವಿಶೇಷ ದರ್ಶನವು ಎರಡು-ಮೂರು ನಿಮಿಷಗಳಲ್ಲಿ, ₹300 ದರ್ಶನ ಹತ್ತು ನಿಮಿಷಗಳಲ್ಲಿ ಮುಗಿಯುತ್ತಿದೆ ಎಂದು ಹೇಳಿದರು.</p>.<p>ಹಿಂದಿನ ವರ್ಷಗಳಲ್ಲಿ ಆರು ಗಂಟೆಗೂ ಹೆಚ್ಚು ಕಾಲ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಈ ಬಾರಿ ಸರತಿ ಸಾಲು ಸರಾಗವಾಗಿ ಸಾಗುತ್ತಿದೆ. ಸಾಮಾನ್ಯ ಭಕ್ತರಿಗೆ ಉತ್ತಮ ಅನುಭವ ದೊರಕುತ್ತಿದೆ. ಸ್ಥಳೀಯರಿಗೂ ಆರಾಮದಾಯಕ ದರ್ಶನ ಸಿಕ್ಕಿದೆ. ನಾವು ತಂದಿರುವ ಬದಲಾವಣೆಗಳು ಭಕ್ತರಿಗೆ ಅನುಕೂಲವಾಗಿದೆ ಎಂದರು.</p>.<p>ಸೋಮವಾರದಿಂದ ಶುಕ್ರವಾರದವರೆಗೆ ಭಕ್ತರ ಸಂಖ್ಯೆ ಕಡಿಮೆ ಇರಬಹುದು. ಅಕ್ಟೋಬರ್ 18 ರಿಂದ 22ರವರೆಗೆ 2 ಲಕ್ಷಕ್ಕೂ ಹೆಚ್ಚು ಭಕ್ತರ ಬರುವ ನಿರೀಕ್ಷೆ ಇದೆ. ಸಾಧ್ಯವಾದರೆ ಅಕ್ಟೋಬರ್ 18ರ ಒಳಗಾಗಿ ದರ್ಶನ ಪಡೆದು ಹೋಗಲು ಮನವಿ ಮಾಡಿದರು.</p>.<p>ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅಕ್ಟೋಬರ್ 15ರಂದು ದೇವಿ ದರ್ಶನಕ್ಕೆ ಬರಲಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಮಯ ನಿಗದಿ ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಸಿಎಂ ಹಾಗೂ ಡಿಸಿಎಂಗೆ ಅವರಿಗೆ ಸ್ವತಃ ನಾನು ಮನವಿ ಮಾಡುತ್ತೇನೆ ಎಂದರು.</p>.<p>ದೇವಾಲಯದ ಸುತ್ತಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ ಸಚಿವ ಕೃಷ್ಣ ಬೈರೇಗೌಡ, ಧರ್ಮದರ್ಶನ ಹಾಗೂ ಟಿಕೆಟ್ ದರ್ಶನದ ಸಾಲುಗಳನ್ನು ಪರಿಶೀಲಿಸಿದರು. ಭಕ್ತರ ಅನುಭವವನ್ನು ನೇರವಾಗಿ ವಿಚಾರಿಸಿದರು. ಸಚಿವರ ಭೇಟಿಯ ವೇಳೆ ಜಿಲ್ಲಾಡಳಿತದ ಕಾರ್ಯಚಟುವಟಿಕೆ ಹಾಗೂ ದೇವಾಲಯದ ನಿರ್ವಹಣೆಯ ಬಗ್ಗೆ ಭಕ್ತರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ಈ ಬಾರಿಯ ಹಾಸನಾಂಬ ದರ್ಶನದಿಂದ ಆದಾಯ ಕಡಿಮೆಯಾದರೂ ಸರಿ, ಭಕ್ತರ ಸಂತೋಷವೇ ನಮ್ಮ ಸಾರ್ಥಕತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.</p>.<p>ಹಾಸನಂಬ ದೇವಾಲಯದ ಆವರಣದದಲ್ಲಿ ಭಕ್ತರ ಅಭಿಪ್ರಾಯ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಡ್ಡು ಬಂದರೆ ಗೌರವದಿಂದ ಸ್ವೀಕರಿಸುತ್ತೇವೆ. ಆದರೆ ಆದಾಯ ಶೂನ್ಯವಾದರೂ ಪರವಾಗಿಲ್ಲ. ಲಾಡು ಖರ್ಚು ನಮ್ಮ ಮೇಲೆ ಬಂದರೂ ಪರವಾಗಿಲ್ಲ ಎಂದರು.</p>.<p>ಅನುಕೂಲಸ್ಥರೂ ಧರ್ಮದರ್ಶನದ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಇದು ಧರ್ಮದ ಶ್ರೇಷ್ಠತೆ. ಬದಲಾವಣೆ ತಂದಾಗ ಆತಂಕ ಇರುತ್ತದೆ. ಆದರೆ ಭಕ್ತರ ಸಂತೋಷ ನಮ್ಮ ಸಾರ್ಥಕತೆ ಎಂದರು.</p>.<p>ದೇವಸ್ಥಾನದ ನಿರ್ವಹಣೆಗಾಗಿ ಸರ್ಕಾರದ ಹಣದ ಅವಲಂಬನೆ ಬೇಡ. ಸಾರ್ವಜನಿಕರ ದೇಣಿಗೆಯಿಂದ ದೇವಸ್ಥಾನ ನಡೆಯುವುದು ನಮಗೆ ಹೆಮ್ಮೆ ಇದೆ ಎಂದರು.</p>.<p>ಶನಿವಾರ ಈಗಾಗಲೇ 92 ಸಾವಿರ ಮಂದಿ ಅರ್ಧ ದಿನದಲ್ಲೇ ದರ್ಶನ ಪಡೆದಿದ್ದಾರೆ. ಭಾನುವಾರ ಮುಂಜಾನೆ 2 ಗಂಟೆಯವರೆಗೆ ದರ್ಶನ ಮುಂದುವರಿಯಲಿದೆ. ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬರಲಿದ್ದು, ನಮಗೆ ಸಂತೋಷ. ಮಧ್ಯಾಹ್ನ 1 ಗಂಟೆಗೆ ಬಂದವರು ಹದಿನೈದು ನಿಮಿಷಗಳಲ್ಲಿ ದರ್ಶನ ಪಡೆದಿದ್ದಾರೆ. ₹1ಸಾವಿರ ವಿಶೇಷ ದರ್ಶನವು ಎರಡು-ಮೂರು ನಿಮಿಷಗಳಲ್ಲಿ, ₹300 ದರ್ಶನ ಹತ್ತು ನಿಮಿಷಗಳಲ್ಲಿ ಮುಗಿಯುತ್ತಿದೆ ಎಂದು ಹೇಳಿದರು.</p>.<p>ಹಿಂದಿನ ವರ್ಷಗಳಲ್ಲಿ ಆರು ಗಂಟೆಗೂ ಹೆಚ್ಚು ಕಾಲ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಈ ಬಾರಿ ಸರತಿ ಸಾಲು ಸರಾಗವಾಗಿ ಸಾಗುತ್ತಿದೆ. ಸಾಮಾನ್ಯ ಭಕ್ತರಿಗೆ ಉತ್ತಮ ಅನುಭವ ದೊರಕುತ್ತಿದೆ. ಸ್ಥಳೀಯರಿಗೂ ಆರಾಮದಾಯಕ ದರ್ಶನ ಸಿಕ್ಕಿದೆ. ನಾವು ತಂದಿರುವ ಬದಲಾವಣೆಗಳು ಭಕ್ತರಿಗೆ ಅನುಕೂಲವಾಗಿದೆ ಎಂದರು.</p>.<p>ಸೋಮವಾರದಿಂದ ಶುಕ್ರವಾರದವರೆಗೆ ಭಕ್ತರ ಸಂಖ್ಯೆ ಕಡಿಮೆ ಇರಬಹುದು. ಅಕ್ಟೋಬರ್ 18 ರಿಂದ 22ರವರೆಗೆ 2 ಲಕ್ಷಕ್ಕೂ ಹೆಚ್ಚು ಭಕ್ತರ ಬರುವ ನಿರೀಕ್ಷೆ ಇದೆ. ಸಾಧ್ಯವಾದರೆ ಅಕ್ಟೋಬರ್ 18ರ ಒಳಗಾಗಿ ದರ್ಶನ ಪಡೆದು ಹೋಗಲು ಮನವಿ ಮಾಡಿದರು.</p>.<p>ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅಕ್ಟೋಬರ್ 15ರಂದು ದೇವಿ ದರ್ಶನಕ್ಕೆ ಬರಲಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಮಯ ನಿಗದಿ ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಸಿಎಂ ಹಾಗೂ ಡಿಸಿಎಂಗೆ ಅವರಿಗೆ ಸ್ವತಃ ನಾನು ಮನವಿ ಮಾಡುತ್ತೇನೆ ಎಂದರು.</p>.<p>ದೇವಾಲಯದ ಸುತ್ತಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ ಸಚಿವ ಕೃಷ್ಣ ಬೈರೇಗೌಡ, ಧರ್ಮದರ್ಶನ ಹಾಗೂ ಟಿಕೆಟ್ ದರ್ಶನದ ಸಾಲುಗಳನ್ನು ಪರಿಶೀಲಿಸಿದರು. ಭಕ್ತರ ಅನುಭವವನ್ನು ನೇರವಾಗಿ ವಿಚಾರಿಸಿದರು. ಸಚಿವರ ಭೇಟಿಯ ವೇಳೆ ಜಿಲ್ಲಾಡಳಿತದ ಕಾರ್ಯಚಟುವಟಿಕೆ ಹಾಗೂ ದೇವಾಲಯದ ನಿರ್ವಹಣೆಯ ಬಗ್ಗೆ ಭಕ್ತರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>