ಅರಸೀಕೆರೆ: ನಗರದಲ್ಲಿ ಮಂಗಳವಾರ ನಡೆದ ಮುತ್ತು ಮಾರಿಯಮ್ಮ ಕರಗ ಮಹೋತ್ಸವದ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಹಾಸನ ರಸ್ತೆ ಬಲಭಾಗದ ಬಡಾವಣೆಯಲ್ಲಿರುವ ಮುತ್ತು ಮಾರಿಯಮ್ಮ ಕರಗ ಮಹೋತ್ಸವ ನಿಮಿತ್ತ ಎರಡು ದಿನಗಳಿಂದ ಉತ್ಸವ ನಡೆಯುತ್ತಿದ್ದು, ಉತ್ಸವ ಸಾಗುತ್ತಿದ್ದ ವೇಳೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಆದರೆ, ಪೊಲೀಸರು ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಿಸಿ, ತಿಳಿಗೊಳಿಸಿದರು.