<p><strong>ಅರಕಲಗೂಡು: </strong>ತಂಬಾಕು ಬೆಲೆ ತಾರತಮ್ಯವನ್ನು ಸರಿಪಡಿಸುವಂತೆ ಅಗ್ರಹಿಸಿ ಜ.5ರಂದು ಹಾಸನದಲ್ಲಿ ಸಂಸದರ ಕಚೇರಿ ಮುಂದೆ ಧರಣಿ ಹಮ್ಮಿಕೊಂಡಿರುವುದಾಗಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ತಿಳಿಸಿದರು.</p>.<p> ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಬಾಕಿಗೂ ವಿಮೆ ಸೌಲಭ್ಯ, ಆರೋಗ್ಯ ವಿಮೆ ಯೋಜನೆ ಜಾರಿಯಾಗಬೇಕು. ಈ ಬಗ್ಗೆ ಸಂಸದರ ಗಮನ ಸೆಳೆಯಲು ಸಂಸದರ ಕಚೇರಿ ಮುಂದೆ ಧರಣಿ ಹಮ್ಮಿಕೊಂಡಿರುವುದಾಗಿ ಹೇಳಿದರು. </p>.<p>‘ತಂಬಾಕು ಮಾರುಕಟ್ಟೆ ಆರಂಭವಾಗಿ ಮೂರು ತಿಂಗಳು ಕಳೆದರೂ ಬೆಲೆಯಲ್ಲಿ ಹೆಚ್ಚಳವಾಗಿಲ್ಲ.₹ 320 ಕ್ಕೆ ಪ್ರಾರಂಭವಾದ ಬೆಲೆ ₹275 -280 ರ ಸರಾಸರಿ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಆಂಧ್ರಪ್ರದೇಶದಲ್ಲಿ 145 ಮಿಲಿಯನ್ಗೆ ಬದಲು 250 ಮಿಲಿಯನ್ ತಂಬಾಕು ಬೆಳೆದರೂ ₹450 ಗರಿಷ್ಠ ಬೆಲೆ ಕಂಡುಕೊಂಡಿದೆ. ಈ ಬೆಲೆ ತಾರತಮ್ಯದ ವಿರುದ್ಧ ರಾಜ್ಯದ ಸಂಸದರಾಗಲಿ, ವಾಣಿಜ್ಯ ಇಲಾಖೆಯಾಗಲಿ ಮಾತನಾಡುತ್ತಿಲ್ಲ. ದೇಶಕ್ಕೆ ಒಂದೇ ತಂಬಾಕು ಮಂಡಳಿಯಾದರೂ ಈ ದರ ತಾರತಮ್ಯವೇಕೆ’ ಎಂದು ಪ್ರಶ್ನಿಸಿದರು. </p>.<p>ಕೆಲವರು ನಾವು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಂದು ಸ್ವಯಂ ಘೋಷಿಸಿಕೊಂಡು ಸಂಘವನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ಆರೋಪಿಸಿದರು.</p>.<p>ರೈತ ಸಂಘದ ಜಿಲ್ಲಾ ಸಂಚಾಲಕ ಬಂದಿಗನಹಳ್ಳಿ ರವಿ, ಸದಸ್ಯರಾದ ಮಂಜುನಾಥ್, ರಮೇಶ್, ಅಣ್ಣಾಜಪ್ಪ, ನಟರಾಜ್, ಈರೇಗೌಡ ಗೋಷ್ಠಿಯಲ್ಲಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಕಲಗೂಡು: </strong>ತಂಬಾಕು ಬೆಲೆ ತಾರತಮ್ಯವನ್ನು ಸರಿಪಡಿಸುವಂತೆ ಅಗ್ರಹಿಸಿ ಜ.5ರಂದು ಹಾಸನದಲ್ಲಿ ಸಂಸದರ ಕಚೇರಿ ಮುಂದೆ ಧರಣಿ ಹಮ್ಮಿಕೊಂಡಿರುವುದಾಗಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ತಿಳಿಸಿದರು.</p>.<p> ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಬಾಕಿಗೂ ವಿಮೆ ಸೌಲಭ್ಯ, ಆರೋಗ್ಯ ವಿಮೆ ಯೋಜನೆ ಜಾರಿಯಾಗಬೇಕು. ಈ ಬಗ್ಗೆ ಸಂಸದರ ಗಮನ ಸೆಳೆಯಲು ಸಂಸದರ ಕಚೇರಿ ಮುಂದೆ ಧರಣಿ ಹಮ್ಮಿಕೊಂಡಿರುವುದಾಗಿ ಹೇಳಿದರು. </p>.<p>‘ತಂಬಾಕು ಮಾರುಕಟ್ಟೆ ಆರಂಭವಾಗಿ ಮೂರು ತಿಂಗಳು ಕಳೆದರೂ ಬೆಲೆಯಲ್ಲಿ ಹೆಚ್ಚಳವಾಗಿಲ್ಲ.₹ 320 ಕ್ಕೆ ಪ್ರಾರಂಭವಾದ ಬೆಲೆ ₹275 -280 ರ ಸರಾಸರಿ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಆಂಧ್ರಪ್ರದೇಶದಲ್ಲಿ 145 ಮಿಲಿಯನ್ಗೆ ಬದಲು 250 ಮಿಲಿಯನ್ ತಂಬಾಕು ಬೆಳೆದರೂ ₹450 ಗರಿಷ್ಠ ಬೆಲೆ ಕಂಡುಕೊಂಡಿದೆ. ಈ ಬೆಲೆ ತಾರತಮ್ಯದ ವಿರುದ್ಧ ರಾಜ್ಯದ ಸಂಸದರಾಗಲಿ, ವಾಣಿಜ್ಯ ಇಲಾಖೆಯಾಗಲಿ ಮಾತನಾಡುತ್ತಿಲ್ಲ. ದೇಶಕ್ಕೆ ಒಂದೇ ತಂಬಾಕು ಮಂಡಳಿಯಾದರೂ ಈ ದರ ತಾರತಮ್ಯವೇಕೆ’ ಎಂದು ಪ್ರಶ್ನಿಸಿದರು. </p>.<p>ಕೆಲವರು ನಾವು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಂದು ಸ್ವಯಂ ಘೋಷಿಸಿಕೊಂಡು ಸಂಘವನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ಆರೋಪಿಸಿದರು.</p>.<p>ರೈತ ಸಂಘದ ಜಿಲ್ಲಾ ಸಂಚಾಲಕ ಬಂದಿಗನಹಳ್ಳಿ ರವಿ, ಸದಸ್ಯರಾದ ಮಂಜುನಾಥ್, ರಮೇಶ್, ಅಣ್ಣಾಜಪ್ಪ, ನಟರಾಜ್, ಈರೇಗೌಡ ಗೋಷ್ಠಿಯಲ್ಲಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>