ರಾಮನಾಥಪುರ (ಕೊಣನೂರು): ಸಮೀಪದ ತಟ್ಟವಾಳು- ಕೂನನಕೊಪ್ಪಲು ನಡುವಿನ ಬೆಳವಾಡಿ ರಸ್ತೆಯಲ್ಲಿ ಹಾಲಿನ ವಾಹನ ಹಾಗೂ ಬೈಕ್ ನಡುವೆ ಶುಕ್ರವಾರ ಡಿಕ್ಕಿ ಸಂಭವಿಸಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.
ಕಸಬಾ ಹೋಬಳಿ ಮರವಳಲು ಗ್ರಾಮದ ಹರೀಶ್ (32), ರಾಮನಾಥಪುರ ಹೋಬಳಿಯ ಗರುಡನಹಳ್ಳಿ ಗ್ರಾಮದ ನಟೇಶ್ (33) ಮೃತಪಟ್ಟವರು.
ಹರೀಶ್ ಮತ್ತು ನಟೇಶ್ ಬಸವಾಪಟ್ಟಣ ಕಡೆಯಿಂದ ಬೆಳವಾಡಿ ಕಡೆಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಹಾಲಿನ ಕ್ಯಾಂಟರ್ ವಾಹನ ಡಿಕ್ಕಿಯಾಗಿದೆ. ಹರೀಶ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ತೀವ್ರ ಗಾಯಗೊಂಡ ನಟೇಶ್ ಅವರನ್ನು ಹಾಸನದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.