ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಬಿ ದಾಳಿ : ಸಿಕ್ಕಿಬಿದ್ದ ಬಿಇಒ ಕಚೇರಿ ಮಾನ್ಯೇಜರ್‌

Last Updated 26 ಜುಲೈ 2021, 13:48 IST
ಅಕ್ಷರ ಗಾತ್ರ

ಶಿಗ್ಗಾವಿ: ಪಟ್ಟಣದ ಬಿಇಒ ಕಚೇರಿ ಮ್ಯಾನೇಜರ್ ಸುರೇಶ ಗಿರೇಪ್ಪ ರೊಡ್ಡಣ್ಣವರ ವರ್ಗಾವಣೆಗೆಂದು ಶಿಕ್ಷಕನಿಂದ ಲಂಚದ ಹಣ ಪಡೆಯುತ್ತಿರುವ ಸಂದರ್ಭದಲ್ಲಿ ದಾವಣಗೆರೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತಂಡಕ್ಕೆ ಸೋಮವಾರ ಸಿಕ್ಕಿಬಿದ್ದಿದ್ದಾರೆ.

ಪಟ್ಟಣದ ಗಾಂಧಿನಗರದ ಶಾಲೆ ಶಿಕ್ಷಕ ಹನುಮಂತಪ್ಪ ಭರಮಪ್ಪ ಹಳ್ಳೆಪ್ಪನವರ ಅವರ ವರ್ಗಾವಣೆ ಮಾಡಲು ₹ 4 ಸಾವಿರ ಬೇಡಿಕೆ ಇಟ್ಟಿದ್ದರು. ₹ 1 ಸಾವಿರ ಮೊದಲೇ ಪಡೆದಿದ್ದು, ಉಳಿದ ₹ 3 ಸಾವಿರ ಲಂಚ ಪಡೆಯುವ ಸಂದರ್ಭದಲ್ಲಿ ಎಸಿಬಿ ದಾಳಿ ನಡೆಸಿದೆ.

ದಾವಣಗೆರೆ ವಲಯದ ಎಸಿಬಿ ಎಸ್‌ಪಿ ಜಯಪ್ರಕಾಶ ನೇತೃತ್ವದಲ್ಲಿ ಡಿವೈಎಸ್ಪಿ ಮಹಾಂತೇಶ ಜಿದ್ದಿ ದಾಳಿ ಮಾಡಲಾಗಿದೆ, ಇನ್ಸ್‌ಪೆಕ್ಟರ್‌ಗಳಾದ ಎಸ್.ಕೆ.ಪಟ್ಟಣಕೂಡಿ, ಪ್ರಭಾವತಿ ಶೇಖವಡಿ, ಅಧಿಕಾರಿಗಳಾದ ಬಿ.ಎಸ್.ಕರಡಣ್ಣವರ, ಕಡಕೊಳ, ಅಗಸಿಕೆರಿ, ವೆಂಕಟೇಶ ಹುಲಿಹಳ್ಳಿ, ಮಂಜುನಾಥ, ಮೂಲಿಮನಿ, ಕಾಂಬಳೆ, ಬಸಪ್ಪ ಕಾರ್ಯಾಚರಣೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT