ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಪಿ.ಅಶೋಕ ಮಾತನಾಡಿ, ‘ಈ ಬಯೋ ಕ್ಯಾಪ್ಸೂಲ್ ಅನ್ನು ಎಲ್ಲಾ ರೀತಿಯ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಬಳಸಬಹುದಾಗಿದೆ. ಟ್ರೈಕೋಡರ್ಮಾ ಸೂಕ್ಷ್ಮಾಣುಗಳು ಬೆಳೆಯ ಬೆಳವಣಿಗೆ ಹೆಚ್ಚಿಸುವುದಲ್ಲದೆ, ರೋಗ ನಿರೋಧಕ ಶಕ್ತಿಯನ್ನು ನೀಡುತ್ತವೆ. ರೈಜೋಬ್ಯಾಕ್ಟೀರಿಯಾ ಸೂಕ್ಷ್ಮಾಣುಗಳು ಬೇರಿನ ವಲಯದಲ್ಲಿ ಬೆಳೆದು, ಸಸ್ಯದ ಬೆಳವಣಿಗೆಯನ್ನು ವೃದ್ಧಿಸುತ್ತವೆ. ಬೆಳವಣಿಗೆಗೆ ಪೂರಕವಾದ ಹಾರ್ಮೊನುಗಳನ್ನು ಉತ್ಪಾದಿಸುವ ಮೂಲಕ ರಂಜಕ ಮತ್ತು ಪೋಟ್ಯಾಷ್ ಮತ್ತು ಇತರೆ ಲಘುಪೋಷಕಾಂಶಗಳ ಚಲನೆಯನ್ನು ಹೆಚ್ಚಿಸಿ ಸಸ್ಯದ ಆಂತರಿಕ ನಿರೋಧಕತೆಯನ್ನು ಪ್ರಚೋದಿಸುತ್ತವೆ’ ಎಂದರು.