ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ವಚನ ಸಾಹಿತ್ಯದ ಮೇರು ಚಳವಳಿಯಲ್ಲಿ ಅಗ್ರ ನಾಯಕ ಅಲ್ಲಮ. ಅಲ್ಲಮರು ಕಲ್ಯಾಣದ ಬಹುದೊಡ್ಡ ಅನುಭಾವಿ ವಚನಕಾರರು. ಕಾಲಜ್ಞಾನ ವಚನಗಳಿಂದ ಅನುಭವಿಗಳನ್ನು, ಸಾಧಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಧೀಮಂತ ವ್ಯಕ್ತಿತ್ವ ಅಲ್ಲಮರದ್ದು. ಅವರ ಶೂನ್ಯ ಸಿದ್ಧಾಂತವನ್ನು ಪ್ರತಿಪಾದಿಸಿದರು ಎಂದು ಹೇಳಿದರು.