<p><strong>ಬನ್ನೂರ(ಶಿಗ್ಗಾವಿ):</strong> ತಾಲ್ಲೂಕಿನ ಬನ್ನೂರ ಗ್ರಾಮದಲ್ಲಿ ಗುರುವಾರ ಭಗವಾನ್ ಮಹಾವೀರ್ ದಿಗಂಬರ್ ಜಿನಮಂದಿರ ಸೇವಾ ಸಮಿತಿ, ತಾಲ್ಲೂಕು ಜೈನ್ ಸಮಾಜದ ವತಿಯಿಂದ ನಡೆದ ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಮಹಾವೀರರ ಮೂರ್ತಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಜರುಗಿತು.</p>.<p>ಮಂದಿರದಲ್ಲಿ ಬೆಳಿಗ್ಗೆ ಜಿನಬಾಲಕನಿಗೆ ಪಾಂಡುಕ ಶೀಲೆಯ ಮೇಲೆ ಅಭಿಷೇಕ, ಜೀನಮಂದಿರದ ಮೂಲಕ ನಾಯಕರು ಭಗವಾನ ಮಾಹಾವೀರರಿಗೆ ಅಘ್ರ್ಯ, ಅಭಿಷೇಕ ವಿವಿಧ ಧಾಮಿಖ ಕಾರ್ಯಕ್ರಮಗಳು ನಡೆದವು.</p>.<p>ತೊಟ್ಟಿಲೋತ್ಸವ ಕಾರ್ಯಕ್ರಮ, ಮಕ್ಕಳಿಗಾಗಿ ಮಹಾವೀರರ ಕುರಿತು ಭಾಷಣ ಸ್ಪರ್ಧೆ, 24 ತೀರ್ಥಂಕರ ಹೆಸರು ಬರೆಯುವುದು, ಅವರ ಲಾಂಚನ ಹೇಳುವ ಸ್ಪರ್ಧೆ ಏರ್ಪಡಿಸುವ ಮೂಲಕ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. </p>.<p>ಜಿನಮಂದಿರ ಸೇವಾ ಸಮಿತಿ ಅಧ್ಯಕ್ಷ ಮಹದೇವಪ್ಪ ಶಿಡ್ಡಣ್ಣವರ, ಉಪಾಧ್ಯಕ್ಷ ಪ್ರಕಾಶ ಹೊನ್ನಪ್ಪನವರ, ಪ್ರವೀಣ ಶಿಡ್ಡ್ದಣ್ಣವರ, ಬಸವರಾಜ ಮಾಯಣ್ಣವರ, ರವಿ ಹೊನ್ನಪ್ಪನವರಬಸವರಾಜ ಲಂಗೋಟಿ, ಸುನೀಲ ಬೋಗಾರ, ಕೆ.ಸಿ.ಸಿದ್ದಣ್ಣವರ, ಅಜಿತ್ ಕ್ವಾಟಿ, ಧರ್ಮಪ್ಪ ಸಿದ್ದಣ್ಣವರ, ಭರ್ಮಪ್ಪ ಮಾಯಣ್ಣವರ, ರೇಣುಕಾ ಹೊನ್ನಪ್ಪನವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬನ್ನೂರ(ಶಿಗ್ಗಾವಿ):</strong> ತಾಲ್ಲೂಕಿನ ಬನ್ನೂರ ಗ್ರಾಮದಲ್ಲಿ ಗುರುವಾರ ಭಗವಾನ್ ಮಹಾವೀರ್ ದಿಗಂಬರ್ ಜಿನಮಂದಿರ ಸೇವಾ ಸಮಿತಿ, ತಾಲ್ಲೂಕು ಜೈನ್ ಸಮಾಜದ ವತಿಯಿಂದ ನಡೆದ ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಮಹಾವೀರರ ಮೂರ್ತಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಜರುಗಿತು.</p>.<p>ಮಂದಿರದಲ್ಲಿ ಬೆಳಿಗ್ಗೆ ಜಿನಬಾಲಕನಿಗೆ ಪಾಂಡುಕ ಶೀಲೆಯ ಮೇಲೆ ಅಭಿಷೇಕ, ಜೀನಮಂದಿರದ ಮೂಲಕ ನಾಯಕರು ಭಗವಾನ ಮಾಹಾವೀರರಿಗೆ ಅಘ್ರ್ಯ, ಅಭಿಷೇಕ ವಿವಿಧ ಧಾಮಿಖ ಕಾರ್ಯಕ್ರಮಗಳು ನಡೆದವು.</p>.<p>ತೊಟ್ಟಿಲೋತ್ಸವ ಕಾರ್ಯಕ್ರಮ, ಮಕ್ಕಳಿಗಾಗಿ ಮಹಾವೀರರ ಕುರಿತು ಭಾಷಣ ಸ್ಪರ್ಧೆ, 24 ತೀರ್ಥಂಕರ ಹೆಸರು ಬರೆಯುವುದು, ಅವರ ಲಾಂಚನ ಹೇಳುವ ಸ್ಪರ್ಧೆ ಏರ್ಪಡಿಸುವ ಮೂಲಕ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. </p>.<p>ಜಿನಮಂದಿರ ಸೇವಾ ಸಮಿತಿ ಅಧ್ಯಕ್ಷ ಮಹದೇವಪ್ಪ ಶಿಡ್ಡಣ್ಣವರ, ಉಪಾಧ್ಯಕ್ಷ ಪ್ರಕಾಶ ಹೊನ್ನಪ್ಪನವರ, ಪ್ರವೀಣ ಶಿಡ್ಡ್ದಣ್ಣವರ, ಬಸವರಾಜ ಮಾಯಣ್ಣವರ, ರವಿ ಹೊನ್ನಪ್ಪನವರಬಸವರಾಜ ಲಂಗೋಟಿ, ಸುನೀಲ ಬೋಗಾರ, ಕೆ.ಸಿ.ಸಿದ್ದಣ್ಣವರ, ಅಜಿತ್ ಕ್ವಾಟಿ, ಧರ್ಮಪ್ಪ ಸಿದ್ದಣ್ಣವರ, ಭರ್ಮಪ್ಪ ಮಾಯಣ್ಣವರ, ರೇಣುಕಾ ಹೊನ್ನಪ್ಪನವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>