ಮೊದಲಿನಿಂದಲೂ ಬಸವರಾಜ ಬೊಮ್ಮಾಯಿ ಅವರಿಗೆ ಅಕ್ಕಿಆಲೂರಿನ ಬಗೆಗೆ ವಿಶೇಷ ಪ್ರೀತಿ, ಮಮಕಾರ. ಇತ್ತ ಬಂದರೆ ಸಾಕು ತಮ್ಮ ಬೀಗರ ಮತ್ತು ಒಡನಾಡಿಗಳ ಮನೆಗೆ ಬಾರದೇ ಹೋಗುವುದಿಲ್ಲ. ಬೆಂಗಳೂರು, ನವದೆಹಲಿ ಅಥವಾ ಮತ್ತೆಲ್ಲಾದರೂ ಸ್ಥಳೀಯರು ಕಾಣಸಿಕ್ಕರೆ ಕೂಡಲೇ ಅವರನ್ನು ಕರೆದು ಮಾತನಾಡಿಸಿ ವಿಶೇಷ ಕಾಳಜಿ ತೋರುವ ಜತೆಗೆ ಕೆಲಸವನ್ನೂ ಮಾಡಿ ಕೊಡುತ್ತಾರೆ ಎಂಬುದು ಅವರ ಅಭಿಮಾನಿಗಳ ಅನಿಸಿಕೆ.