ಹಾವೇರಿ: ‘ಜಗದಕವಿ, ಯುಗದ ಕವಿ, ಶಬ್ದ ಗಾರುಡಿಗ, ಅಂಬಿಕಾತನಯ ಎನಿಸಿಕೊಳ್ಳುವ ಬೇಂದ್ರೆ ಜನವಾಣಿಯನ್ನೇ ತಮ್ಮ ಕಾವ್ಯದ ಸೊಬಗಿನಲ್ಲಿ ಬೆಳೆಸಿಕೊಂಡವರು ಹಾಗೂ ಕಾವ್ಯ ಶಕ್ತಿಯಿಂದ ಇಡೀ ವಿಶ್ವವನ್ನೇ ಸೆಳೆಯಬಹುದು ಎಂಬುದಕ್ಕೆ ಬೇಂದ್ರೆಯವರ ಕಾವ್ಯಗಳು ಸಾಕ್ಷಿಯಾಗಿವೆ’ ಎಂದು ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಅಭಿಪ್ರಾಯಪಟ್ಟರು.