<p><strong>ಹಾವೇರಿ:</strong> ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿದ್ದ ವಾಹನವನ್ನು ಮಾಲೀಕರಿಗೆ ನೀಡಲು ಪೊಲೀಸ್ ಕಾನ್ಸ್ಟೆಬಲ್ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೊ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.</p><p>ಪೊಲೀಸ್ ಕಾನ್ಸ್ಟೆಬಲ್ ರಮೇಶ ಭಜಂತ್ರಿ ಲಂಚ ಕೇಳಿದವರು. ‘ಸಾಹೇಬ್ರಿಗೆ ₹5 ಸಾವಿರ ಮತ್ತು ನನಗೆ ₹2 ಸಾವಿರ ಕೊಡು’ ಎಂದು ಲಂಚ ಕೇಳಿರುವ ದೃಶ್ಯಾವಳಿ ವಿಡಿಯೊದಲ್ಲಿ ಸೆರೆಯಾಗಿದೆ. </p><p><strong>ಕಾನ್ಸ್ಟೆಬಲ್ ಅಮಾನತು:</strong> </p><p>‘ವಿಡಿಯೊ ದೃಶ್ಯವಾಳಿ ನನ್ನ ಗಮನಕ್ಕೆ ಬಂದಿದೆ. ಪೊಲೀಸ್ ಕಾನ್ಸ್ಟೆಬಲ್ ರಮೇಶ ಭಜಂತ್ರಿಯನ್ನು ಇಲಾಖೆ ವಿಚಾರಣೆ ಕಾಯ್ದಿರಿಸಿ, ಅಮಾನತು ಮಾಡಲಾಗಿದೆ. ಲಂಚ ಪ್ರಕರಣಗಳು ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು’ ಎಂದು ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ. </p><p><strong>ಏನಿದು ಘಟನೆ:</strong></p><p>ಹುಬ್ಬಳ್ಳಿಯ ಗಣೇಶಪೇಟೆಯ ಮೊಹಮ್ಮದ್ ಇಬ್ರಾಹಿಂ ಮಂಚಿನಕೊಪ್ಪ ಎಂಬುವವರು ತಮ್ಮ ಕಾರನ್ನು ಪರಿಚಿತರಾದ ಇಮ್ರಾನ್ ಎಂಬುವವರಿಗೆ ಕೊಟ್ಟು, ಕಾರಿನ ಕಂತು ಕಟ್ಟಿಕೊಂಡು ಹೋಗು ಎಂದು ತಿಳಿಸಿದ್ದರು. </p><p>‘ಇಮ್ರಾನ್ ಅವರಿಂದ ಕಾರು ಪಡೆದಿದ್ದ ಧಾರವಾಡ ಜಿಲ್ಲೆಯ ಹಿರೇನರ್ತಿ ಗ್ರಾಮದ ಹನೀಫ್ 4 ತಿಂಗಳು ಕಾರಿನ ಕಂತು ಕಟ್ಟಿ, 2 ತಿಂಗಳ ಕಂತನ್ನು ಬಾಕಿ ಉಳಿಸಿಕೊಂಡಿದ್ದರು. ಆ ನಂತರ ಫೋನ್ ಸ್ವಿಚ್ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ನಮ್ಮ ಕಾರು ಶಿಗ್ಗಾವಿ ಪಟ್ಟಣದಲ್ಲಿ ಇರುವುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ದೂರು ನೀಡಿದ್ದೆವು’ ಎಂದು ಇಮ್ರಾನ್ ಸಹೋದರ ಜಾವೇದ್ ತಿಳಿಸಿದರು. </p><p>‘ಶಿಗ್ಗಾವಿ ಮೂಲದ ವಿಜಯೇಂದ್ರ ಅವರಿಗೆ ಹನೀಫ್ ಅವರು ₹2 ಲಕ್ಷಕ್ಕೆ ಕಾರನ್ನು ಅಡ ಇಟ್ಟಿದ್ದರು. ನಮ್ಮ ದೂರಿನ ಮೇರೆಗೆ ಪೊಲೀಸರು ಕಾರನ್ನು ಠಾಣೆಗೆ ತರಿಸಿದ್ದಾರೆ. ಈ ಕಾರನ್ನು ಬಿಡುಗಡೆ ಮಾಡಲು ₹15 ಸಾವಿರ ಲಂಚಕ್ಕೆ ಪೊಲೀಸ್ ಕಾನ್ಸ್ಟೆಬಲ್ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ₹7 ಸಾವಿರ ಕೊಡಲಾಯಿತು’ ಎಂದು ಜಾವೇದ್ ದೂರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿದ್ದ ವಾಹನವನ್ನು ಮಾಲೀಕರಿಗೆ ನೀಡಲು ಪೊಲೀಸ್ ಕಾನ್ಸ್ಟೆಬಲ್ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೊ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.</p><p>ಪೊಲೀಸ್ ಕಾನ್ಸ್ಟೆಬಲ್ ರಮೇಶ ಭಜಂತ್ರಿ ಲಂಚ ಕೇಳಿದವರು. ‘ಸಾಹೇಬ್ರಿಗೆ ₹5 ಸಾವಿರ ಮತ್ತು ನನಗೆ ₹2 ಸಾವಿರ ಕೊಡು’ ಎಂದು ಲಂಚ ಕೇಳಿರುವ ದೃಶ್ಯಾವಳಿ ವಿಡಿಯೊದಲ್ಲಿ ಸೆರೆಯಾಗಿದೆ. </p><p><strong>ಕಾನ್ಸ್ಟೆಬಲ್ ಅಮಾನತು:</strong> </p><p>‘ವಿಡಿಯೊ ದೃಶ್ಯವಾಳಿ ನನ್ನ ಗಮನಕ್ಕೆ ಬಂದಿದೆ. ಪೊಲೀಸ್ ಕಾನ್ಸ್ಟೆಬಲ್ ರಮೇಶ ಭಜಂತ್ರಿಯನ್ನು ಇಲಾಖೆ ವಿಚಾರಣೆ ಕಾಯ್ದಿರಿಸಿ, ಅಮಾನತು ಮಾಡಲಾಗಿದೆ. ಲಂಚ ಪ್ರಕರಣಗಳು ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು’ ಎಂದು ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ. </p><p><strong>ಏನಿದು ಘಟನೆ:</strong></p><p>ಹುಬ್ಬಳ್ಳಿಯ ಗಣೇಶಪೇಟೆಯ ಮೊಹಮ್ಮದ್ ಇಬ್ರಾಹಿಂ ಮಂಚಿನಕೊಪ್ಪ ಎಂಬುವವರು ತಮ್ಮ ಕಾರನ್ನು ಪರಿಚಿತರಾದ ಇಮ್ರಾನ್ ಎಂಬುವವರಿಗೆ ಕೊಟ್ಟು, ಕಾರಿನ ಕಂತು ಕಟ್ಟಿಕೊಂಡು ಹೋಗು ಎಂದು ತಿಳಿಸಿದ್ದರು. </p><p>‘ಇಮ್ರಾನ್ ಅವರಿಂದ ಕಾರು ಪಡೆದಿದ್ದ ಧಾರವಾಡ ಜಿಲ್ಲೆಯ ಹಿರೇನರ್ತಿ ಗ್ರಾಮದ ಹನೀಫ್ 4 ತಿಂಗಳು ಕಾರಿನ ಕಂತು ಕಟ್ಟಿ, 2 ತಿಂಗಳ ಕಂತನ್ನು ಬಾಕಿ ಉಳಿಸಿಕೊಂಡಿದ್ದರು. ಆ ನಂತರ ಫೋನ್ ಸ್ವಿಚ್ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ನಮ್ಮ ಕಾರು ಶಿಗ್ಗಾವಿ ಪಟ್ಟಣದಲ್ಲಿ ಇರುವುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ದೂರು ನೀಡಿದ್ದೆವು’ ಎಂದು ಇಮ್ರಾನ್ ಸಹೋದರ ಜಾವೇದ್ ತಿಳಿಸಿದರು. </p><p>‘ಶಿಗ್ಗಾವಿ ಮೂಲದ ವಿಜಯೇಂದ್ರ ಅವರಿಗೆ ಹನೀಫ್ ಅವರು ₹2 ಲಕ್ಷಕ್ಕೆ ಕಾರನ್ನು ಅಡ ಇಟ್ಟಿದ್ದರು. ನಮ್ಮ ದೂರಿನ ಮೇರೆಗೆ ಪೊಲೀಸರು ಕಾರನ್ನು ಠಾಣೆಗೆ ತರಿಸಿದ್ದಾರೆ. ಈ ಕಾರನ್ನು ಬಿಡುಗಡೆ ಮಾಡಲು ₹15 ಸಾವಿರ ಲಂಚಕ್ಕೆ ಪೊಲೀಸ್ ಕಾನ್ಸ್ಟೆಬಲ್ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ₹7 ಸಾವಿರ ಕೊಡಲಾಯಿತು’ ಎಂದು ಜಾವೇದ್ ದೂರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>