<p>ಹಾವೇರಿ:ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರಕ್ಷಾ ರಾಮಯ್ಯ ಅವರ ಸಹಯೋಗದಲ್ಲಿ ಹಾವೇರಿ ಜಿಲ್ಲಾ ಯುವ ಕಾಂಗ್ರೆಸ ಸಮಿತಿ ನೇತೃತ್ವದಲ್ಲಿಹೋಮ್ ಐಸೋಲೇಷನ್ನಲ್ಲಿರುವ ಸೋಂಕಿತರಿಗೆ ನೀಡಲು ‘ಹೋಮ್ ಐಸೋಲೇಷನ್ ಕಿಟ್’ಗಳನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಅಧ್ಯಕ್ಷರುಗಳಿಗೆ ಹಸ್ತಾಂತರ ಮಾಡಲಾಯಿತು.</p>.<p>ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹಿರೇಮಠ ಮಾತನಾಡಿ, ‘ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಕೋವಿಡ್ ಸೋಂಕು ಬಂದಾಗಿನಿಂದ ನಿರಂತರವಾಗಿ ಜನರ ಸೇವೆಯನ್ನು ಮಾಡುತ್ತಿದ್ದಾರೆ. ಈ ಹೋಂ ಐಸೋಲೇಷನ್ ಕಿಟ್ ಗಳನ್ನು ಎಲ್ಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ನೀಡಿ, ಅವರವರ ಬ್ಲಾಕ್ ನಲ್ಲಿರುವ ಕೋವಿಡ್ ಸೊಂಕಿತರಿಗೆ ನೀಡಬೇಕೆಂದು ಹೇಳಿದರು</p>.<p>ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ, ಮಾಜಿ ಸಚಿವ ರುದ್ರಪ್ಪ ಲಮಾಣಿ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ತಾರೀನ ರಬ್ಬಾನಿ, ಅಲ್ಪಾಜ್ ಹಾವೇರಿ, ಅಜಯ ಬಂಡಿವಡ್ಡರ, ಉಮರ್ ಇನಾಮದಾರ, ರಫೀಕ್ ಖಾದಿ, ಮುಖಂಡರಾದ ಮಹಾಲಿಂಗಯ್ಯ ಹಿರೇಮಠ, ಉಮೀದ್ ನದಾಫ್, ಶಹಾಬಾಜ್ ಖಾನ್ ಕುಲಕರ್ಣಿ, ರಫೀಕ್ ನದಾಫ್, ನವೀದ್ ವರ್ದಿ, ಗಂಗಣ್ಣ ಶಿರೂರ, ಗಂಗಾಧರ ಕಾರಬರಿ, ಶರತ್, ಆರ್.ಜಿ. ಪಾಟೀಲ, ರವಿ ವಾಲ್ಮೀಕಿ, ರವಿ ಕತ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾವೇರಿ:ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರಕ್ಷಾ ರಾಮಯ್ಯ ಅವರ ಸಹಯೋಗದಲ್ಲಿ ಹಾವೇರಿ ಜಿಲ್ಲಾ ಯುವ ಕಾಂಗ್ರೆಸ ಸಮಿತಿ ನೇತೃತ್ವದಲ್ಲಿಹೋಮ್ ಐಸೋಲೇಷನ್ನಲ್ಲಿರುವ ಸೋಂಕಿತರಿಗೆ ನೀಡಲು ‘ಹೋಮ್ ಐಸೋಲೇಷನ್ ಕಿಟ್’ಗಳನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಅಧ್ಯಕ್ಷರುಗಳಿಗೆ ಹಸ್ತಾಂತರ ಮಾಡಲಾಯಿತು.</p>.<p>ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹಿರೇಮಠ ಮಾತನಾಡಿ, ‘ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಕೋವಿಡ್ ಸೋಂಕು ಬಂದಾಗಿನಿಂದ ನಿರಂತರವಾಗಿ ಜನರ ಸೇವೆಯನ್ನು ಮಾಡುತ್ತಿದ್ದಾರೆ. ಈ ಹೋಂ ಐಸೋಲೇಷನ್ ಕಿಟ್ ಗಳನ್ನು ಎಲ್ಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ನೀಡಿ, ಅವರವರ ಬ್ಲಾಕ್ ನಲ್ಲಿರುವ ಕೋವಿಡ್ ಸೊಂಕಿತರಿಗೆ ನೀಡಬೇಕೆಂದು ಹೇಳಿದರು</p>.<p>ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ, ಮಾಜಿ ಸಚಿವ ರುದ್ರಪ್ಪ ಲಮಾಣಿ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ತಾರೀನ ರಬ್ಬಾನಿ, ಅಲ್ಪಾಜ್ ಹಾವೇರಿ, ಅಜಯ ಬಂಡಿವಡ್ಡರ, ಉಮರ್ ಇನಾಮದಾರ, ರಫೀಕ್ ಖಾದಿ, ಮುಖಂಡರಾದ ಮಹಾಲಿಂಗಯ್ಯ ಹಿರೇಮಠ, ಉಮೀದ್ ನದಾಫ್, ಶಹಾಬಾಜ್ ಖಾನ್ ಕುಲಕರ್ಣಿ, ರಫೀಕ್ ನದಾಫ್, ನವೀದ್ ವರ್ದಿ, ಗಂಗಣ್ಣ ಶಿರೂರ, ಗಂಗಾಧರ ಕಾರಬರಿ, ಶರತ್, ಆರ್.ಜಿ. ಪಾಟೀಲ, ರವಿ ವಾಲ್ಮೀಕಿ, ರವಿ ಕತ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>