<p><strong>ಹಾನಗಲ್: </strong>ತಾಲ್ಲೂಕಿನಲ್ಲಿ ಹರಿದಿರುವ ವರದಾ ಮತ್ತು ಧರ್ಮಾ ನದಿಗಳು ಅಪಾಯದ ಮಟ್ಟ ತಲುಪಿದ್ದು, ಕೆರೆ–ಕಟ್ಟೆಗಳು ತುಂಬಿ ಹರಿಯುತ್ತಿವೆ. ಹಳ್ಳಗಳು ಮೈದುಂಬಿಕೊಂಡು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.</p>.<p>ಗುರುವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಶುಕ್ರವಾರ ಬೆಳಿಗ್ಗೆ ಧರ್ಮಾ ಜಲಾಶಯ ತುಂಬಿ ಕೋಡಿ ಬಿದ್ದಿದೆ. ಸುಮಾರು 32 ಮನೆಗಳು ಕುಸಿದಿವೆ. ಧರ್ಮಾ ಜಲಯಾಶಯಕ್ಕೆ ಗುರುವಾರ ರಾತ್ರಿ ಸುಮಾರು 5 ಸಾವಿರ ಕ್ಯುಸೆಕ್ಸ್ ನೀರು ಹರಿದು ಬಂದಿದ್ದು ಜಲಾಶಯ ಭರ್ತಿಯಾಗಿದೆ. ಹೆಚ್ಚುವರಿ 2800 ಕ್ಯುಸೆಕ್ಸ್ ನೀರು ಹೊರ ಹೋಗುತ್ತಿದೆ.</p>.<p>ಜಲಾಶಯದ ಹೆಚ್ಚುವರಿ ನೀರು ಧರ್ಮಾ ನದಿ ಸೇರಿಕೊಂಡು ನದಿಪಾತ್ರ ದೊಡ್ಡದಾಗುತ್ತಿದೆ. ಜಲಾಶಯ ಅಡಿಯಲ್ಲಿನ ತಾಲ್ಲೂಕಿನ 98 ಕೆರೆಗಳು ನಿರಂತರ ಮಳೆಗೆ ಭರ್ತಿಯಾಗುವ ಹಂತ ತಲುಪಿವೆ. ಈಗ ಧರ್ಮಾ ಕಾಲುವೆ ನೀರು ಈ ಕೆರೆಗಳಿಗೆ ನುಗ್ಗುತ್ತಿದ್ದು, ಕೆರೆಗಳು ಒಡೆಯುವ ಭೀತಿ ನಿರ್ಮಾಣವಾಗಿದೆ.</p>.<p>ಹಿರೆಕೆರೆ ತುಂಬಿಕೊಂಡ ಪರಿಣಾಮ ತಾಲ್ಲೂಕಿನ ಹಿರೇಕಣಗಿ ಮತ್ತು ಚಿಕೇರಿ ಹೊಸಳ್ಳಿ ಗ್ರಾಮಗಳು ಗುರುವಾರ ಬೆಳಿಗ್ಗೆ ಜಲಾವೃತಗೊಂಡವು. ಈ ಎರಡು ಗ್ರಾಮಗಳಲ್ಲಿ ನಿರಾಶ್ರಿತ ಕೇಂದ್ರ ತೆರೆಯಲಾಗುತ್ತದೆ ಎಂದು ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್ ತಿಳಿಸಿದ್ದಾರೆ.</p>.<p>ನದಿ ತೀರದ ಗ್ರಾಮಗಳಾದ ಕೂಡಲ, ಲಕ್ಮಾಪೂರ, ಹರಗಿ, ಹಿರೇಹುಲ್ಲಾಳ, ಕಲ್ಲಾಪೂರ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಲಾಗಿದೆ. ನದಿಯಿಂದ ಗ್ರಾಮಗಳಿಗೆ ಈತನಕ ತೊಂದರೆಯಾಗಿಲ್ಲ. ಕೆರೆಗಳು ತುಂಬಿಕೊಂಡು ಅವಾಂತರ ಸೃಷ್ಠಿಯಾಗುತ್ತಿದೆ. ನದಿ ತೀರಕ್ಕೆ ಜನರು ಹೋಗಬಾರದು ಎಂದು ಅವರು ತಿಳಿಸಿದ್ದಾರೆ.</p>.<p>ರಕ್ಷಣಾ ತಂಡ ರಚಿಸಲಾಗಿದ್ದು, ಹಾವೇರಿಯಿಂದ ಬೋಟ್ ತರಿಸಲಾಗಿದೆ. ಸಹಾಯವಾಣಿ ತೆರೆಯಲಾಗಿದೆ. 2608379, 262241 ಮತ್ತು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಹೆಲ್ಪ್ಲೈನ್ ಆರಂಭಿಸಲಾಗಿದೆ ಎಂದು ತಿಳಿಸಿದರು.</p>.<p>ಹಾನಗಲ್-ಕುಂಟನಹೊಸಳ್ಳಿ, ಕಂಚಿನೆಗಳೂರ-ಬೆಳಗಾಲಪೇಟೆ, ಬಾಳಂಬೀಡ-ಲಕ್ಮಾಪೂರ, ಹರವಿ-ತವರಮೆಳ್ಳಿಹಳ್ಳಿ, ಕೂಡಲ-ನಾಗನೂರ, ಯತ್ನಳ್ಳಿ-ಕಿರವಾಡಿ, ಮಲಗುಂದ-ಕ್ಯಾಸನೂರ ರಸ್ತೆಗಳು ಬಂದ್ ಆಗಿವೆ.</p>.<p>ಧಾರಾಕಾರ ಮಳೆಗೆ ವರದಾ ಮತ್ತು ಧರ್ಮಾ ನದಿಗಳು ಭೋರ್ಗರೆಯುತ್ತಿವೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು,<br />ಹಾನಗಲ್ ಹೊರಭಾಗದ ಹಾವೇರಿ, ಶಿರಸಿ, ಶಿವಮೊಗ್ಗ ಸಂಪರ್ಕದ ಮುಖ್ಯ ರಸ್ತೆಗೆ ನಿರ್ಮಿಸಿರುವ ಧರ್ಮಾ ನದಿಯ ಸೇತುವೆ ಮೇಲೆ ನೀರು ಹರಿಯುತ್ತಿದೆ. ಮಳೆ ಪ್ರಮಾಣ ಹೆಚ್ಚಾದರೆ ಈ ಸೇತುವೆ ಮುಳುಗಡೆಯಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್: </strong>ತಾಲ್ಲೂಕಿನಲ್ಲಿ ಹರಿದಿರುವ ವರದಾ ಮತ್ತು ಧರ್ಮಾ ನದಿಗಳು ಅಪಾಯದ ಮಟ್ಟ ತಲುಪಿದ್ದು, ಕೆರೆ–ಕಟ್ಟೆಗಳು ತುಂಬಿ ಹರಿಯುತ್ತಿವೆ. ಹಳ್ಳಗಳು ಮೈದುಂಬಿಕೊಂಡು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.</p>.<p>ಗುರುವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಶುಕ್ರವಾರ ಬೆಳಿಗ್ಗೆ ಧರ್ಮಾ ಜಲಾಶಯ ತುಂಬಿ ಕೋಡಿ ಬಿದ್ದಿದೆ. ಸುಮಾರು 32 ಮನೆಗಳು ಕುಸಿದಿವೆ. ಧರ್ಮಾ ಜಲಯಾಶಯಕ್ಕೆ ಗುರುವಾರ ರಾತ್ರಿ ಸುಮಾರು 5 ಸಾವಿರ ಕ್ಯುಸೆಕ್ಸ್ ನೀರು ಹರಿದು ಬಂದಿದ್ದು ಜಲಾಶಯ ಭರ್ತಿಯಾಗಿದೆ. ಹೆಚ್ಚುವರಿ 2800 ಕ್ಯುಸೆಕ್ಸ್ ನೀರು ಹೊರ ಹೋಗುತ್ತಿದೆ.</p>.<p>ಜಲಾಶಯದ ಹೆಚ್ಚುವರಿ ನೀರು ಧರ್ಮಾ ನದಿ ಸೇರಿಕೊಂಡು ನದಿಪಾತ್ರ ದೊಡ್ಡದಾಗುತ್ತಿದೆ. ಜಲಾಶಯ ಅಡಿಯಲ್ಲಿನ ತಾಲ್ಲೂಕಿನ 98 ಕೆರೆಗಳು ನಿರಂತರ ಮಳೆಗೆ ಭರ್ತಿಯಾಗುವ ಹಂತ ತಲುಪಿವೆ. ಈಗ ಧರ್ಮಾ ಕಾಲುವೆ ನೀರು ಈ ಕೆರೆಗಳಿಗೆ ನುಗ್ಗುತ್ತಿದ್ದು, ಕೆರೆಗಳು ಒಡೆಯುವ ಭೀತಿ ನಿರ್ಮಾಣವಾಗಿದೆ.</p>.<p>ಹಿರೆಕೆರೆ ತುಂಬಿಕೊಂಡ ಪರಿಣಾಮ ತಾಲ್ಲೂಕಿನ ಹಿರೇಕಣಗಿ ಮತ್ತು ಚಿಕೇರಿ ಹೊಸಳ್ಳಿ ಗ್ರಾಮಗಳು ಗುರುವಾರ ಬೆಳಿಗ್ಗೆ ಜಲಾವೃತಗೊಂಡವು. ಈ ಎರಡು ಗ್ರಾಮಗಳಲ್ಲಿ ನಿರಾಶ್ರಿತ ಕೇಂದ್ರ ತೆರೆಯಲಾಗುತ್ತದೆ ಎಂದು ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್ ತಿಳಿಸಿದ್ದಾರೆ.</p>.<p>ನದಿ ತೀರದ ಗ್ರಾಮಗಳಾದ ಕೂಡಲ, ಲಕ್ಮಾಪೂರ, ಹರಗಿ, ಹಿರೇಹುಲ್ಲಾಳ, ಕಲ್ಲಾಪೂರ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಲಾಗಿದೆ. ನದಿಯಿಂದ ಗ್ರಾಮಗಳಿಗೆ ಈತನಕ ತೊಂದರೆಯಾಗಿಲ್ಲ. ಕೆರೆಗಳು ತುಂಬಿಕೊಂಡು ಅವಾಂತರ ಸೃಷ್ಠಿಯಾಗುತ್ತಿದೆ. ನದಿ ತೀರಕ್ಕೆ ಜನರು ಹೋಗಬಾರದು ಎಂದು ಅವರು ತಿಳಿಸಿದ್ದಾರೆ.</p>.<p>ರಕ್ಷಣಾ ತಂಡ ರಚಿಸಲಾಗಿದ್ದು, ಹಾವೇರಿಯಿಂದ ಬೋಟ್ ತರಿಸಲಾಗಿದೆ. ಸಹಾಯವಾಣಿ ತೆರೆಯಲಾಗಿದೆ. 2608379, 262241 ಮತ್ತು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಹೆಲ್ಪ್ಲೈನ್ ಆರಂಭಿಸಲಾಗಿದೆ ಎಂದು ತಿಳಿಸಿದರು.</p>.<p>ಹಾನಗಲ್-ಕುಂಟನಹೊಸಳ್ಳಿ, ಕಂಚಿನೆಗಳೂರ-ಬೆಳಗಾಲಪೇಟೆ, ಬಾಳಂಬೀಡ-ಲಕ್ಮಾಪೂರ, ಹರವಿ-ತವರಮೆಳ್ಳಿಹಳ್ಳಿ, ಕೂಡಲ-ನಾಗನೂರ, ಯತ್ನಳ್ಳಿ-ಕಿರವಾಡಿ, ಮಲಗುಂದ-ಕ್ಯಾಸನೂರ ರಸ್ತೆಗಳು ಬಂದ್ ಆಗಿವೆ.</p>.<p>ಧಾರಾಕಾರ ಮಳೆಗೆ ವರದಾ ಮತ್ತು ಧರ್ಮಾ ನದಿಗಳು ಭೋರ್ಗರೆಯುತ್ತಿವೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು,<br />ಹಾನಗಲ್ ಹೊರಭಾಗದ ಹಾವೇರಿ, ಶಿರಸಿ, ಶಿವಮೊಗ್ಗ ಸಂಪರ್ಕದ ಮುಖ್ಯ ರಸ್ತೆಗೆ ನಿರ್ಮಿಸಿರುವ ಧರ್ಮಾ ನದಿಯ ಸೇತುವೆ ಮೇಲೆ ನೀರು ಹರಿಯುತ್ತಿದೆ. ಮಳೆ ಪ್ರಮಾಣ ಹೆಚ್ಚಾದರೆ ಈ ಸೇತುವೆ ಮುಳುಗಡೆಯಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>