ಗ್ರಾಮದ ಅಲ್ತಾಫ್ ಎಂಬ ರೈತ ಹೊಲಕ್ಕೆ ಎತ್ತಿನ ಬಂಡಿಯಲ್ಲಿ ಹೋಗುವ ಸಂದರ್ಭ ದುರ್ಘಟನೆ ನಡೆದಿದೆ. ನೀರು ನೋಡಿ ಬೆದರಿದ ಎತ್ತುಗಳು ಬಂಡಿಯನ್ನು ವೇಗವಾಗಿ ಎಳೆದುಕೊಂಡು ಹೋಗಿವೆ. ಆಳದ ನೀರಿನಲ್ಲಿ ಬಂಡಿ ಮುಳುಗಿದಾಗ, ನೀರನ್ನು ಕುಡಿದ ಒಂದು ಎತ್ತು ಸ್ಥಳದಲ್ಲೇ ಮೃತಪಟ್ಟಿತು. ನೀರಿನಲ್ಲಿ ಮುಳುಗಿದ್ದ ರೈತ ಮತ್ತು ಮತ್ತೊಂದು ಎತ್ತನ್ನು ಸ್ಥಳೀಯರು ರಕ್ಷಿಸಿದರು. ಅಸ್ವಸ್ಥನಾಗಿದ್ದ ಅಲ್ತಾಫ್ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.