ಸಾಗರದ ಚೌಡೇಶ್ವರಿ ಎಸ್ಸಿ–ಎಸ್ಟಿ ಶಿಕ್ಷಣ ಸಂಸ್ಥೆಯ ಲೆಟರ್ ಪ್ಯಾಡ್ ಅನ್ನು ದುರುಪಯೋಗ ಪಡಿಸಿಕೊಂಡು, ಪ್ರಾಂಶುಪಾಲರು, ಜ್ಞಾನಸಾಗರ ಎನ್.ಟಿ.ಸಿ. ಕಾಲೇಜು, ಸಾಗರ ಎಂಬ ಮೊಹರು ಬಳಸಿ, ವಿದ್ಯಾರ್ಥಿಗಳಿಗೆ ಎನ್ಟಿಟಿಸಿ ನಕಲಿ ಅಂಕಪಟ್ಟಿಯನ್ನು ಮತ್ತು ಪ್ರಮಾಣಪತ್ರವನ್ನು ನೀಡುತ್ತಿದ್ದಾರೆ ಎಂದು ಚೌಡೇಶ್ವರಿ ಸಂಸ್ಥೆಯ ಅಧ್ಯಕ್ಷ ಕೆ.ಮಂಜಪ್ಪ ಎಂಬುವರು ಜ.3ರಂದು ದೂರು ನೀಡಿದ್ದರು.