ಮುಂಗಾರು ಉತ್ತಮವಾಗಿದ್ದು, ರೈತರು ಕೃಷಿ ಚಟುವಟಿಕೆ ಆರಂಭಿಸಲು ಅನುಕೂಲವಾಗಿದೆ. ಗೊಬ್ಬರ ದರ ಹೆಚ್ಚಾಗಿದ್ದರಿಂದ ಗೊಬ್ಬರ ಖರೀದಿಸಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರ ಗೊಬ್ಬರದ ದರ ಕಡಿಮೆಗೊಳಿಸಬೇಕು. ಉತ್ತಮ ತಳಿಯ ಬೀಜ ಖರೀದಿಸಲು ಹಣದ ಕೊರತೆಯಾಗಿದ್ದು ಸರ್ಕಾರ ಸಬ್ಸಿಡಿ ಘೋಷಣೆ ಮಾಡಬೇಕು. ಕಡಿಮೆ ದರದಲ್ಲಿ ಬೀಜಗೊಬ್ಬರವನ್ನು ರೈತರಿಗೆ ಒದಗಿಸಬೇಕು ಎಂದರು.