ಮುಕ್ಕಾಲು ಎಕರೆ ಜಮೀನನಲ್ಲಿ 800 ಮಲ್ಲಿಗೆ ಹೂವಿನ ಗಿಡಗಳನ್ನು ನಾಟಿ ಮಾಡಲಾಗಿದ್ದು, ಮಳೆಗಾಳಿಗೆ ಮೊಗ್ಗು ನಾಶವಾಗಿ ಗಿಡಗಳಷ್ಟೆ ಉಳಿದುಕೊಂಡಿವೆ. ಒಂದು ಕೆಜಿ ₹ 250-300 ಬಿಡಿ ಹೂ ಮಾರಾಟವಾಗುತ್ತಿತ್ತು. ಜಾತ್ರೆ, ಉತ್ಸವ, ದೇವಸ್ಥಾನಗಳಿಗೆ ನಿರ್ಬಂಧ ಹೇರಿದ್ದರಿಂದ ಹೂವಿಗೆ ಬೇಡಿಕೆ ಇಲ್ಲದಂತಾಗಿ ಹೊಲದಲ್ಲೆ ಉದುರುತ್ತಿದೆ. ಸುಮಾರು ₹ 1.5 ಲಕ್ಷ ನಷ್ಟವಾಗಲಿದೆ ಎಂದು ವಿವರಿಸಿದರು.