ಒಂಟಿ ಸಲಗದ ಪುಂಡಾಟ ನೋಡಿದರೆ ಮನುಷ್ಯರ ಮೇಲೆ, ಸಕ್ರೆಬೈಲ್ನ ಸಾಕಾನೆಗಳ ಮೇಲೆ ಹಾಗೂ ಮಾವುತರ ಮೇಲೂ ದಾಳಿ ಮಾಡುವ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಸಕ್ರೆಬೈಲು ಆನೆ ಬಿಡಾರದಿಂದ ಮತ್ತೆರಡು ಸಾಕಾನೆಗಳನ್ನು ತರಲು ಸಿಬ್ಬಂದಿಯನ್ನು ಕಳಿಸಲಾಗಿದೆ. ಒಟ್ಟು 5 ಸಾಕಾನೆಗಳ ಮೂಲಕ ಕಾಡಾನೆಯನ್ನು ಸೆರೆ ಹಿಡಿಯಲಾಗುವುದು’ ಎಂದು ವಲಯ ಅರಣ್ಯ ಅಧಿಕಾರಿ ರಾಮಪ್ಪ ಪೂಜಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.