‘ಚಿತ್ರದುರ್ಗದ ಸಂತೆ ಹೊಂಡಕ್ಕೆ ಬಸ್ ಬಿದ್ದು 62 ಮಂದಿ ಜೀವ ಕಳೆದುಕೊಂಡರು. ಪ್ರಯಾಣಿಕರ ಜೀವ ರಕ್ಷಣೆಗಾಗಿ ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ಹೀಗೆ, ರಾಣೆಬೆನ್ನೂರು ತಾಲ್ಲೂಕಿನ ಬೆಣ್ಣೆಹಳ್ಳ ದುರಂತ ಹಾಗೂ ಉಚ್ಚಂಗಿದುರ್ಗದಲ್ಲಿ ಸಂಭವಿಸಿದ ಬಸ್ ಅವಘಡದ ಸಂದರ್ಭ ಕಾರ್ಯಾಚರಣೆ ನಡೆಸಿ, ಜನರ ಜೀವ ರಕ್ಷಣೆ ಮಾಡಿದೆವು’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಗಣೇಶ್ ಗೌಡರು.