<p><strong>ಹಾನಗಲ್:</strong> ‘ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ರಂಗಭೂಮಿ ಕಲೆ ಉಳಿಯಬೇಕು. ರಂಗ ಕಲಾವಿದರಿಗೆ ಪ್ರೋತ್ಸಾಹ ಸಿಗಬೇಕು‘ ಎಂದು ರಂಗಕರ್ಮಿ ಹಾವೇರಿಯ ಕೆ.ಆರ್.ಹಿರೇಮಠ ಅಭಿಪ್ರಾಯಟ್ಟರು.</p>.<p>ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ತಾಲ್ಲೂಕಿನ ನೆಲ್ಲಿಬೀಡ ವ ಕಾಲ್ವೆಕಲ್ಲಾಪುರ ಗ್ರಾಮದಲ್ಲಿ ರಂಗಭೂಮಿ ಕಲಾವಿದರಿಂದ ಪ್ರದರ್ಶನಗೊಂಡ ‘ಸೋತು ಗೆದ್ದ ಸಾದ್ವಿ’ ಎಂಬ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಸ್ಥಳೀಯ ವರಸಿದ್ಧಿ ವಿನಾಯಕ ಯುವ ಕಲಾ ಸಂಘದ ಕಲಾವಿದರಿಂದ ಪ್ರಸ್ತುತಗೊಂಡ ನಾಟಕಕ್ಕೆ ಬೆಂಗಳೂರ ನಾಟಕ ಅಕಾಡೆಮಿ ಸಹಕಾರ ನೀಡಿತ್ತು. ರಂಗಕರ್ಮಿ ಬಾಲಚಂದ್ರ ಅಂಬಿಗೇರ ನಿರ್ದೇಶನ ನೀಡಿದ್ದರು. ಮಧುಕುಮಾರ ಎಚ್, ಮುಕುಂದಯ್ಯ, ಶಿವಪುತ್ರಯ್ಯ ಹಿರೇಮಠ ಸಂಗೀತ ನೀಡಿದ್ದರು.</p>.<p>ಇದಕ್ಕೂ ಮುನ್ನ ರಂಗಭೂಮಿಯ ಹಿರಿಯ ಕಲಾವಿದರಿಗೆ ರಂಗ ಗೌರವ ಸಮರ್ಪಿಸಲಾಯಿತು. ಬಸಯ್ಯಸ್ವಾಮಿ ಹಿರೇಮಠ, ಮಾಲತೇಶ ನಿಶೀಮಣ್ಣನವರ, ಬಸವರಾಜ ಕುರವಳ್ಳಿ, ವಿನಾಯಕ ಶೇಟ್, ಪದ್ಮಶ್ರೀ ಶೇಟ್, ಎಸ್.ಬಿ.ಸಪ್ಪಗಾಯಿ, ಮಂಜುನಾಥ ಅಕ್ಕೂರ, ಮಲ್ಲನಗೌಡ ಪಾಟೀಲ, ಚನ್ನಬಸಪ್ಪ ಬಾರ್ಕಿ, ಕುಮಾರ ಕುರುಬರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್:</strong> ‘ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ರಂಗಭೂಮಿ ಕಲೆ ಉಳಿಯಬೇಕು. ರಂಗ ಕಲಾವಿದರಿಗೆ ಪ್ರೋತ್ಸಾಹ ಸಿಗಬೇಕು‘ ಎಂದು ರಂಗಕರ್ಮಿ ಹಾವೇರಿಯ ಕೆ.ಆರ್.ಹಿರೇಮಠ ಅಭಿಪ್ರಾಯಟ್ಟರು.</p>.<p>ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ತಾಲ್ಲೂಕಿನ ನೆಲ್ಲಿಬೀಡ ವ ಕಾಲ್ವೆಕಲ್ಲಾಪುರ ಗ್ರಾಮದಲ್ಲಿ ರಂಗಭೂಮಿ ಕಲಾವಿದರಿಂದ ಪ್ರದರ್ಶನಗೊಂಡ ‘ಸೋತು ಗೆದ್ದ ಸಾದ್ವಿ’ ಎಂಬ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಸ್ಥಳೀಯ ವರಸಿದ್ಧಿ ವಿನಾಯಕ ಯುವ ಕಲಾ ಸಂಘದ ಕಲಾವಿದರಿಂದ ಪ್ರಸ್ತುತಗೊಂಡ ನಾಟಕಕ್ಕೆ ಬೆಂಗಳೂರ ನಾಟಕ ಅಕಾಡೆಮಿ ಸಹಕಾರ ನೀಡಿತ್ತು. ರಂಗಕರ್ಮಿ ಬಾಲಚಂದ್ರ ಅಂಬಿಗೇರ ನಿರ್ದೇಶನ ನೀಡಿದ್ದರು. ಮಧುಕುಮಾರ ಎಚ್, ಮುಕುಂದಯ್ಯ, ಶಿವಪುತ್ರಯ್ಯ ಹಿರೇಮಠ ಸಂಗೀತ ನೀಡಿದ್ದರು.</p>.<p>ಇದಕ್ಕೂ ಮುನ್ನ ರಂಗಭೂಮಿಯ ಹಿರಿಯ ಕಲಾವಿದರಿಗೆ ರಂಗ ಗೌರವ ಸಮರ್ಪಿಸಲಾಯಿತು. ಬಸಯ್ಯಸ್ವಾಮಿ ಹಿರೇಮಠ, ಮಾಲತೇಶ ನಿಶೀಮಣ್ಣನವರ, ಬಸವರಾಜ ಕುರವಳ್ಳಿ, ವಿನಾಯಕ ಶೇಟ್, ಪದ್ಮಶ್ರೀ ಶೇಟ್, ಎಸ್.ಬಿ.ಸಪ್ಪಗಾಯಿ, ಮಂಜುನಾಥ ಅಕ್ಕೂರ, ಮಲ್ಲನಗೌಡ ಪಾಟೀಲ, ಚನ್ನಬಸಪ್ಪ ಬಾರ್ಕಿ, ಕುಮಾರ ಕುರುಬರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>