<p><strong>ಹಾನಗಲ್</strong>: ಇಲ್ಲಿಯ ತಾಲ್ಲೂಕು ಕ್ರೀಡಾಂಗಣದಲ್ಲಿರುವ ಈಜುಕೊಳ ನಿರ್ಲಕ್ಷಕ್ಕೆ ಒಳಗಾಗಿ 8 ವರ್ಷಗಳಿಂದ ಪಾಳು ಬಿದ್ದಿದೆ. ಇದರ ದುರಸ್ತಿಗೆ ಜನರು ಆಗ್ರಹಿಸುತ್ತಿದ್ದಾರೆ. ಜನರ ಒತ್ತಾಯದಂತೆ ಈಜುಕೊಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂಬ ಚಿಂತನೆ ಮುನ್ನೆಲೆಗೆ ಬಂದಿದೆ.</p>.<p>ಇಲ್ಲಿನ ಪುರಸಭೆಯಲ್ಲಿ ಇತ್ತೀಚೆಗೆ ನಡೆದ 2026–27ನೇ ಸಾಲಿನ ಆಯವ್ಯಯ ಮಂಡನೆಯ ಪೂರ್ವಭಾವಿ ಸಭೆಯಲ್ಲಿ ಈಜುಕೊಳದ ಬಗ್ಗೆ ಚರ್ಚೆ ನಡೆಯಿತು. ಈಜುಕೊಳ ಅಭಿವೃದ್ಧಿಗೆ ಜನರು ತಮ್ಮ ಒತ್ತಾಯ ಮಂಡಿಸಿದರು.</p>.<p>ಜನರ ಆಗ್ರಹದಂತೆ ಪುರಸಭೆಯ ಆಯವ್ಯಯದಲ್ಲಿ ಈಜುಕೊಳ ಅಭಿವೃದ್ಧಿ ವಿಷಯ ಸೇರ್ಪಡೆಯಾಗುವ ನಿರೀಕ್ಷೆಯಿದೆ.</p>.<p>ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿ ಇರುವ ಈಜುಕೊಳ ಸದ್ಯ ಬಂದ್ ಸ್ಥಿತಿಯಲ್ಲಿದೆ. ಒಳಗೆ ಪ್ರವೇಶಿಸಿದರೆ, ಪತನಗೊಂಡ ಸಾಮ್ರಾಜ್ಯದ ಕುರುಹುಗಳಂತೆ ಭಾಸವಾಗುತ್ತದೆ.</p>.<p>2017ರಲ್ಲಿ ₹ 2.16 ಕೋಟಿ ವೆಚ್ಚದಲ್ಲಿ ಈಜುಕೋಳ ನಿರ್ಮಾಣ ಮಾಡಲಾಗಿತ್ತು. ಅಂದಿನ ಶಾಸಕ ದಿ. ಮನೋಹರ ತಹಸೀಲ್ದಾರ್, ಅಂದಿನ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ಈಜುಕೊಳ ಉದ್ಘಾಟನೆ ಮಾಡಿಸಿದ್ದರು.</p>.<p>ಉದ್ಘಾಟನೆ ಬಳಿಕ ಈಜುಕೊಳ ಸಾರ್ವಜನಿಕರ ಬಳಕೆಗೆ ಸಿಗಲಿಲ್ಲ. ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಕಾಮಗಾರಿ ಪೂರ್ಣಗೊಂಡು ಕ್ರೀಡಾ ಇಲಾಖೆಗೆ ಹಸ್ತಾಂತರಗೊಂಡ ಆರಂಭದಲ್ಲಿ ಖಾಸಗಿಯವರಿಗೆ ನಿರ್ವಹಣೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಪಡೆದವರಿಂದಲೂ ಈಜುಕೋಳ ನಿರ್ವಹಣೆಯಾಗಲಿಲ್ಲ. ಅಂದಿನಿಂದ ಈ ತನಕ 8 ವರ್ಷದಿಂದ ಈಜುಕೊಳ ಬಾಗಿಲು ಬಂದ್ ಆಗಿದೆ.</p>.<p>ಈಜುಕೊಳದ ಆವರಣದ ಗೋಡೆ ಅಲ್ಲಲ್ಲಿ ಕುಸಿದಿದೆ. ಕಿಡಿಗೇಡಿಗಳು ಆವರಣ ಪ್ರವೇಶಿಸಿ ಮತ್ತಷ್ಟು ಹಾಳು ಮಾಡುತ್ತಿದ್ದಾರೆ. ದುಬಾರಿ ಸಾಮಗ್ರಿಗಳು, ನೀರು ಪಂಪ್ ಮಾಡುವ ಸಾಧನಗಳು, ಮೋಟರ್ ಕಣ್ಮರೆಯಾಗಿವೆ.</p>.<p>ಆವರಣದಲ್ಲಿನ ಎರಡು ಕೊಳಗಳಲ್ಲಿ ಗಲೀಜು ನೀರು ಸಂಗ್ರಹವಾಗಿದೆ. ದುರ್ನಾತ ಬೀರುತ್ತಿವೆ. ಪಾಚಿ ಕಟ್ಟಿಕೊಂಡಿದೆ. ಮಕ್ಕಳ ಕೊಳ ಒಡೆದುಕೊಂಡಿದೆ. ಟೈಲ್ಸ್ಗಳು ಕಿತ್ತಿವೆ. ಕಿಟಕಿ ಗಾಜುಗಳು ಒಡೆದಿವೆ. ಅಲ್ಲಲ್ಲಿ ಪೊದೆ ಬೆಳೆದಿದೆ.</p>.<p>₹8 ಲಕ್ಷ ಮೀಸಲಿಡುವ ಯೋಚನೆ: ‘ಕೋಟಿಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಈಜುಕೊಳ ಜನರ ಬಳಕೆಗೆ ಲಭ್ಯವಾಗಬೇಕು. ಕ್ರೀಡಾ ಇಲಾಖೆ ಸಹಕರಿಸುತ್ತಿಲ್ಲ. ಹೀಗಾಗಿ, ಪುರಸಭೆಯ ಆಯವ್ಯಯದಲ್ಲಿ ಈಜುಕೊಳ ಸುಧಾರಣೆಗೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು’ ಎಂದು ಪೂರ್ವಭಾವಿ ಸಭೆಯಲ್ಲಿ ನಿವಾಸಿ ಯಲ್ಲಪ್ಪ ಕಿತ್ತೂರ ಆಗ್ರಹಿಸಿದ್ದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಜಗದೀಶ ವೈ.ಕೆ., ‘ಕ್ರೀಡಾ ಇಲಾಖೆಯನ್ನು ಸಂಪರ್ಕಿಸಿ, ಈಜುಕೊಳ ಅಭಿವೃದ್ಧಿಗಾಗಿ ಆಯವ್ಯಯದಲ್ಲಿ ಸುಮಾರು ₹8 ಲಕ್ಷ ಮೀಸಲಿಡುವ ಬಗ್ಗೆ ಯೋಚನೆ ಇದೆ’ ಎಂದು ಹೇಳಿದರು.</p>.<p><strong>ಈಜುಕೊಳ ಮತ್ತೆ ಆರಂಭವಾಗಲಿ:</strong> ‘ಈಜು ಪ್ರತಿಯೊಬ್ಬ ವ್ಯಕ್ತಿಗೆ ಅಗತ್ಯದ ಕಲೆ. ಇದರಿಂದ ಆಕಸ್ಮಿಕ ಸಂದರ್ಭಗಳಲ್ಲಿ ಜೀವ ರಕ್ಷಣೆ ಸಾಧ್ಯ. ಪ್ರತಿ ದಿನ ಈಜುವುದು ಉತ್ತಮ ವ್ಯಾಯಾಮವೂ ಹೌದು. ನಾವು ಚಿಕ್ಕವರಿದ್ದಾಗ ಶಾಲೆಗೆ ಬಿಡುವು ಸಿಕ್ಕಾಗ ಇಲ್ಲಿನ ಆನಿಕೆರೆಯಲ್ಲಿ ಈಜು ಮಾಡುತ್ತಿದ್ದೆವು. ಈಗಿನ ಹುಡುಗರಿಗೆ ಆ ಭಾಗ್ಯವಿಲ್ಲ. ಈಗ ಆನಿಕೆರೆ, ಕುಡಿಯುವ ನೀರಿನ ಬಳಕೆಗೆ ಮೀಸಲಾಗಿದೆ. ಪಟ್ಟಣದ ಈಜುಕೊಳ ಮತ್ತೆ ಆರಂಭಗೊಳ್ಳಬೇಕು’ ಎಂದು ಬಸವರಾಜ ಶೀಲವಂತ ಹೇಳಿದರು. </p>.<div><blockquote>ಈಜುಕೊಳ ದುರಸ್ತಿ ಮತ್ತು ಕ್ರೀಡಾಂಗಣ ಕಾಮಗಾರಿಗಳಿಗಾಗಿ ₹1 ಕೋಟಿ ಅನುದಾನಕ್ಕಾಗಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ </blockquote><span class="attribution">ಲತಾ ಬಿ.ಎಚ್. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್</strong>: ಇಲ್ಲಿಯ ತಾಲ್ಲೂಕು ಕ್ರೀಡಾಂಗಣದಲ್ಲಿರುವ ಈಜುಕೊಳ ನಿರ್ಲಕ್ಷಕ್ಕೆ ಒಳಗಾಗಿ 8 ವರ್ಷಗಳಿಂದ ಪಾಳು ಬಿದ್ದಿದೆ. ಇದರ ದುರಸ್ತಿಗೆ ಜನರು ಆಗ್ರಹಿಸುತ್ತಿದ್ದಾರೆ. ಜನರ ಒತ್ತಾಯದಂತೆ ಈಜುಕೊಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂಬ ಚಿಂತನೆ ಮುನ್ನೆಲೆಗೆ ಬಂದಿದೆ.</p>.<p>ಇಲ್ಲಿನ ಪುರಸಭೆಯಲ್ಲಿ ಇತ್ತೀಚೆಗೆ ನಡೆದ 2026–27ನೇ ಸಾಲಿನ ಆಯವ್ಯಯ ಮಂಡನೆಯ ಪೂರ್ವಭಾವಿ ಸಭೆಯಲ್ಲಿ ಈಜುಕೊಳದ ಬಗ್ಗೆ ಚರ್ಚೆ ನಡೆಯಿತು. ಈಜುಕೊಳ ಅಭಿವೃದ್ಧಿಗೆ ಜನರು ತಮ್ಮ ಒತ್ತಾಯ ಮಂಡಿಸಿದರು.</p>.<p>ಜನರ ಆಗ್ರಹದಂತೆ ಪುರಸಭೆಯ ಆಯವ್ಯಯದಲ್ಲಿ ಈಜುಕೊಳ ಅಭಿವೃದ್ಧಿ ವಿಷಯ ಸೇರ್ಪಡೆಯಾಗುವ ನಿರೀಕ್ಷೆಯಿದೆ.</p>.<p>ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿ ಇರುವ ಈಜುಕೊಳ ಸದ್ಯ ಬಂದ್ ಸ್ಥಿತಿಯಲ್ಲಿದೆ. ಒಳಗೆ ಪ್ರವೇಶಿಸಿದರೆ, ಪತನಗೊಂಡ ಸಾಮ್ರಾಜ್ಯದ ಕುರುಹುಗಳಂತೆ ಭಾಸವಾಗುತ್ತದೆ.</p>.<p>2017ರಲ್ಲಿ ₹ 2.16 ಕೋಟಿ ವೆಚ್ಚದಲ್ಲಿ ಈಜುಕೋಳ ನಿರ್ಮಾಣ ಮಾಡಲಾಗಿತ್ತು. ಅಂದಿನ ಶಾಸಕ ದಿ. ಮನೋಹರ ತಹಸೀಲ್ದಾರ್, ಅಂದಿನ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ಈಜುಕೊಳ ಉದ್ಘಾಟನೆ ಮಾಡಿಸಿದ್ದರು.</p>.<p>ಉದ್ಘಾಟನೆ ಬಳಿಕ ಈಜುಕೊಳ ಸಾರ್ವಜನಿಕರ ಬಳಕೆಗೆ ಸಿಗಲಿಲ್ಲ. ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಕಾಮಗಾರಿ ಪೂರ್ಣಗೊಂಡು ಕ್ರೀಡಾ ಇಲಾಖೆಗೆ ಹಸ್ತಾಂತರಗೊಂಡ ಆರಂಭದಲ್ಲಿ ಖಾಸಗಿಯವರಿಗೆ ನಿರ್ವಹಣೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಪಡೆದವರಿಂದಲೂ ಈಜುಕೋಳ ನಿರ್ವಹಣೆಯಾಗಲಿಲ್ಲ. ಅಂದಿನಿಂದ ಈ ತನಕ 8 ವರ್ಷದಿಂದ ಈಜುಕೊಳ ಬಾಗಿಲು ಬಂದ್ ಆಗಿದೆ.</p>.<p>ಈಜುಕೊಳದ ಆವರಣದ ಗೋಡೆ ಅಲ್ಲಲ್ಲಿ ಕುಸಿದಿದೆ. ಕಿಡಿಗೇಡಿಗಳು ಆವರಣ ಪ್ರವೇಶಿಸಿ ಮತ್ತಷ್ಟು ಹಾಳು ಮಾಡುತ್ತಿದ್ದಾರೆ. ದುಬಾರಿ ಸಾಮಗ್ರಿಗಳು, ನೀರು ಪಂಪ್ ಮಾಡುವ ಸಾಧನಗಳು, ಮೋಟರ್ ಕಣ್ಮರೆಯಾಗಿವೆ.</p>.<p>ಆವರಣದಲ್ಲಿನ ಎರಡು ಕೊಳಗಳಲ್ಲಿ ಗಲೀಜು ನೀರು ಸಂಗ್ರಹವಾಗಿದೆ. ದುರ್ನಾತ ಬೀರುತ್ತಿವೆ. ಪಾಚಿ ಕಟ್ಟಿಕೊಂಡಿದೆ. ಮಕ್ಕಳ ಕೊಳ ಒಡೆದುಕೊಂಡಿದೆ. ಟೈಲ್ಸ್ಗಳು ಕಿತ್ತಿವೆ. ಕಿಟಕಿ ಗಾಜುಗಳು ಒಡೆದಿವೆ. ಅಲ್ಲಲ್ಲಿ ಪೊದೆ ಬೆಳೆದಿದೆ.</p>.<p>₹8 ಲಕ್ಷ ಮೀಸಲಿಡುವ ಯೋಚನೆ: ‘ಕೋಟಿಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಈಜುಕೊಳ ಜನರ ಬಳಕೆಗೆ ಲಭ್ಯವಾಗಬೇಕು. ಕ್ರೀಡಾ ಇಲಾಖೆ ಸಹಕರಿಸುತ್ತಿಲ್ಲ. ಹೀಗಾಗಿ, ಪುರಸಭೆಯ ಆಯವ್ಯಯದಲ್ಲಿ ಈಜುಕೊಳ ಸುಧಾರಣೆಗೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು’ ಎಂದು ಪೂರ್ವಭಾವಿ ಸಭೆಯಲ್ಲಿ ನಿವಾಸಿ ಯಲ್ಲಪ್ಪ ಕಿತ್ತೂರ ಆಗ್ರಹಿಸಿದ್ದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಜಗದೀಶ ವೈ.ಕೆ., ‘ಕ್ರೀಡಾ ಇಲಾಖೆಯನ್ನು ಸಂಪರ್ಕಿಸಿ, ಈಜುಕೊಳ ಅಭಿವೃದ್ಧಿಗಾಗಿ ಆಯವ್ಯಯದಲ್ಲಿ ಸುಮಾರು ₹8 ಲಕ್ಷ ಮೀಸಲಿಡುವ ಬಗ್ಗೆ ಯೋಚನೆ ಇದೆ’ ಎಂದು ಹೇಳಿದರು.</p>.<p><strong>ಈಜುಕೊಳ ಮತ್ತೆ ಆರಂಭವಾಗಲಿ:</strong> ‘ಈಜು ಪ್ರತಿಯೊಬ್ಬ ವ್ಯಕ್ತಿಗೆ ಅಗತ್ಯದ ಕಲೆ. ಇದರಿಂದ ಆಕಸ್ಮಿಕ ಸಂದರ್ಭಗಳಲ್ಲಿ ಜೀವ ರಕ್ಷಣೆ ಸಾಧ್ಯ. ಪ್ರತಿ ದಿನ ಈಜುವುದು ಉತ್ತಮ ವ್ಯಾಯಾಮವೂ ಹೌದು. ನಾವು ಚಿಕ್ಕವರಿದ್ದಾಗ ಶಾಲೆಗೆ ಬಿಡುವು ಸಿಕ್ಕಾಗ ಇಲ್ಲಿನ ಆನಿಕೆರೆಯಲ್ಲಿ ಈಜು ಮಾಡುತ್ತಿದ್ದೆವು. ಈಗಿನ ಹುಡುಗರಿಗೆ ಆ ಭಾಗ್ಯವಿಲ್ಲ. ಈಗ ಆನಿಕೆರೆ, ಕುಡಿಯುವ ನೀರಿನ ಬಳಕೆಗೆ ಮೀಸಲಾಗಿದೆ. ಪಟ್ಟಣದ ಈಜುಕೊಳ ಮತ್ತೆ ಆರಂಭಗೊಳ್ಳಬೇಕು’ ಎಂದು ಬಸವರಾಜ ಶೀಲವಂತ ಹೇಳಿದರು. </p>.<div><blockquote>ಈಜುಕೊಳ ದುರಸ್ತಿ ಮತ್ತು ಕ್ರೀಡಾಂಗಣ ಕಾಮಗಾರಿಗಳಿಗಾಗಿ ₹1 ಕೋಟಿ ಅನುದಾನಕ್ಕಾಗಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ </blockquote><span class="attribution">ಲತಾ ಬಿ.ಎಚ್. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>