ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹಾವೇರಿ | ಎಪಿಎಂಸಿ ನಿರ್ಲಕ್ಷ್ಯ: ಕನಿಷ್ಠ ಸೌಲಭ್ಯವಿಲ್ಲದ ಜಾನುವಾರು ಮಾರುಕಟ್ಟೆ

Published : 9 ಜೂನ್ 2025, 6:03 IST
Last Updated : 9 ಜೂನ್ 2025, 6:03 IST
ಫಾಲೋ ಮಾಡಿ
Comments
ಹಾವೇರಿ ಎಪಿಎಂಸಿ ಜಾನುವಾರು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇರಿಸಿರುವ ಕುರಿಗಳು
ಹಾವೇರಿ ಎಪಿಎಂಸಿ ಜಾನುವಾರು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇರಿಸಿರುವ ಕುರಿಗಳು
ಹಾವೇರಿ ಎಪಿಎಂಸಿ ಜಾನುವಾರು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇರಿಸಿರುವ ಕುರಿಗಳ ಜೊತೆ ವ್ಯಾಪಾರಿಗಳು
ಹಾವೇರಿ ಎಪಿಎಂಸಿ ಜಾನುವಾರು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇರಿಸಿರುವ ಕುರಿಗಳ ಜೊತೆ ವ್ಯಾಪಾರಿಗಳು
ಜಾನುವಾರು ಮಾರುಕಟ್ಟೆಯಲ್ಲಿ ಮನುಷ್ಯರೂ ಇರುತ್ತಾರೆಂಬುದನ್ನು ಅಧಿಕಾರಿಗಳು ಮರೆತಿದ್ದಾರೆ. ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ
ಪ್ರಕಾಶ ಬಂಕಣ್ಣನವರ ಕುರಿ ಖರೀದಿದಾರ ಹಾವೇರಿ
ಬುಧವಾರ ರಾತ್ರಿಯೇ ಮಾರುಕಟ್ಟೆಗೆ ಬರುತ್ತೇವೆ. ತ್ವರಿತವಾಗಿ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಿಸಬೇಕು. ನಮ್ಮ ಕುರಿ–ಮೇಕೆಗಳಿಗೆ ಭದ್ರತೆ ಬೇಕು
ಸೇದಿಯಪ್ಪ ಕುರಿ ಮಾರಾಟಗಾರ ರಾಣೆಬೆನ್ನೂರು
ಬಿಸಿ ಮುಟ್ಟಿಸಿದ್ದ ಉಪ ಲೋಕಾಯುಕ್ತ
ಹಾವೇರಿಯಲ್ಲಿ ಫೆಬ್ರುವರಿ 11ರಿಂದ 13ರವರೆಗೆ ಪ್ರವಾಸ ಕೈಗೊಂಡಿದ್ದ ಉಪ ಲೋಕಾಯಕ್ತ ಬಿ. ವೀರಪ್ಪ ಅವರು ಜಾನುವಾರು ಮಾರುಕಟ್ಟೆಗೂ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾರುಕಟ್ಟೆಯ ಅವ್ಯವಸ್ಥೆ ಕಂಡು ಎಪಿಎಂಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಸ್ವಚ್ಛತೆ ಇಲ್ಲದಿರುವುದು ಕುಡಿಯುವ ನೀರಿನ ವ್ಯವಸ್ಥೆ ಮಾಡದಿರುವುದು ಮಳಿಗೆಗಳು ಗಲೀಜಾಗಿರುವುದು ಸೇರಿದಂತೆ ಎಲ್ಲ ಅವ್ಯವಸ್ಥೆಯನ್ನು ಉಪ ಲೋಕಾಯುಕ್ತರು ಗಮನಿಸಿದ್ದರು. ಅಧಿಕಾರಿಗಳ ವಿರುದ್ಧ ಗರಂ ಆಗಿದ್ದ ಅವರು ಸ್ವಯಂಪ್ರೇರಿತ ದೂರು ಸಹ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡುವಂತೆಯೂ ಅಧಿಕಾರಿಗಳಿಗೆ ಗಡುವು ನೀಡಿದ್ದರು. ಆದರೆ ಅಧಿಕಾರಿಗಳು ಉಪ ಲೋಕಾಯುಕ್ತರ ಮಾತಿಗೂ ಕಿಮ್ಮತ್ತು ನೀಡಿಲ್ಲ. ಉಪ ಲೋಕಾಯುಕ್ತರು ಭೇಟಿ ನೀಡಿ ನಾಲ್ಕು ತಿಂಗಳಾದರೂ ಯಾವುದೇ ಸೌಕರ್ಯ ಕಲ್ಪಿಸಿಲ್ಲವೆಂದು ಜನರು ದೂರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT