<p>ರಾಣೆಬೆನ್ನೂರು: ದೇವಸ್ಥಾನಗಳು ಮನುಷ್ಯನಿಗೆ ನೆಮ್ಮದಿ ನೀಡುವ ತಾಣಗಳಾಗಿವೆ. ಆಧುನಿಕತೆಯಿಂದಾಗಿ ಸಮಾಜದಲ್ಲಿ ದಾನ, ಧರ್ಮ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಈ ಸಂದರ್ಭದಲ್ಲಿ ರಾಮರೆಡ್ಡಿ ಗೋಡಿಹಾಳ ದಂಪತಿ ₹ 5 ಲಕ್ಷ ಖರ್ಚು ಮಾಡಿ ಬಸವಣ್ಣ ದೇವರ ದೇವಸ್ಥಾನದ ಸಂಪೂರ್ಣ ಜೀರ್ಣೋದ್ಧಾರ ಮಾಡಿದ್ದು ನಿಜಕ್ಕೂ ಶ್ಲಾಘನೀಯ ಎಂದು ಬಡಾಸಂಗಾಪುರದ ಹನುಮಾರೂಢ ಸ್ವಾಮೀಜಿ ಹೇಳಿದರು. </p>.<p>ತಾಲ್ಲೂಕಿನ ಕುಸಗೂರು ಗ್ರಾಮದಲ್ಲಿ ಸೋಮವಾರ ಬಸವಣ್ಣ ದೇವರ ಸೇವಾ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಮತ್ತು ದೇವಸ್ಥಾನವನ್ನು ಸಂಪೂರ್ಣ ಜೀರ್ಣೋದ್ದಾರ ಮಾಡಿದ ಚಂಪಕ್ಕ ರಾಮರಡ್ಡಿ ಗೋಡಿಹಾಳ ದಂಪತಿ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. </p>.<p>ಉಪನ್ಯಾಸಕ ಪ್ರೊ ಕಾಂತೇಶ ಅಂಬಿಗೇರ ಮಾತನಾಡಿ, ಬಸವಣ್ಣನವರು ಆದರ್ಶ ಸಮಾಜ ನಿರ್ಮಾಣ ಮಾಡಲು ಅನುಭವ ಮಂಟಪವನ್ನು ನಿರ್ಮಾಣ ಮಾಡಿ ಎಲ್ಲ ಸಮಾಜದ ಕಾಯಕಗಳು ಪವಿತ್ರವೆಂದು ಹೇಳಿದರು.</p>.<p>ಹುಣಸಿಕಟ್ಟಿಯ ಜಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಬಸವೇಶ್ವರ ಕಮಿಟಿಗೆ ಅಧ್ಯಕ್ಷ ಕೃಷ್ಣಾರಡ್ಡಿ ಮೊಟೆಬೆನ್ನೂರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಪದಾಧಿಕಾರಿಗಳ ಪದಗ್ರಹಣ ಹಾಗೂ ಬಸವೇಶ್ವರ ದೇವಸ್ಥಾನ ಸಂಪೂರ್ಣ ಜೀರ್ಣೋದ್ಧಾರ ಮಾಡಿದ ರಾಮರೆಡ್ಡಿ ಗೋಡಿಹಾಳ ದಂಪತಿಯನ್ನು ಸ್ವಾಮೀಜಿ ಅಭಿನಂದಿಸಿದರು.</p>.<p>ಕಾಂತೇಶರಡ್ಡಿ ಗೋಡಿಹಾಳ, ಧರ್ಮರಡ್ಡಿ ಮಾಗೋಡ, ಶಿವಾನಂದ ಕಚ್ಚರವಿ, ಪ್ರಭು ಗೋಡಿಹಾಳ, ಮಲ್ಲೇಶ ಬೆಣ್ಣಿಗೌಡ್ರ, ಶ್ರೀಧರ ಅಗಸಿಬಾಗಿಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಣೆಬೆನ್ನೂರು: ದೇವಸ್ಥಾನಗಳು ಮನುಷ್ಯನಿಗೆ ನೆಮ್ಮದಿ ನೀಡುವ ತಾಣಗಳಾಗಿವೆ. ಆಧುನಿಕತೆಯಿಂದಾಗಿ ಸಮಾಜದಲ್ಲಿ ದಾನ, ಧರ್ಮ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಈ ಸಂದರ್ಭದಲ್ಲಿ ರಾಮರೆಡ್ಡಿ ಗೋಡಿಹಾಳ ದಂಪತಿ ₹ 5 ಲಕ್ಷ ಖರ್ಚು ಮಾಡಿ ಬಸವಣ್ಣ ದೇವರ ದೇವಸ್ಥಾನದ ಸಂಪೂರ್ಣ ಜೀರ್ಣೋದ್ಧಾರ ಮಾಡಿದ್ದು ನಿಜಕ್ಕೂ ಶ್ಲಾಘನೀಯ ಎಂದು ಬಡಾಸಂಗಾಪುರದ ಹನುಮಾರೂಢ ಸ್ವಾಮೀಜಿ ಹೇಳಿದರು. </p>.<p>ತಾಲ್ಲೂಕಿನ ಕುಸಗೂರು ಗ್ರಾಮದಲ್ಲಿ ಸೋಮವಾರ ಬಸವಣ್ಣ ದೇವರ ಸೇವಾ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಮತ್ತು ದೇವಸ್ಥಾನವನ್ನು ಸಂಪೂರ್ಣ ಜೀರ್ಣೋದ್ದಾರ ಮಾಡಿದ ಚಂಪಕ್ಕ ರಾಮರಡ್ಡಿ ಗೋಡಿಹಾಳ ದಂಪತಿ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. </p>.<p>ಉಪನ್ಯಾಸಕ ಪ್ರೊ ಕಾಂತೇಶ ಅಂಬಿಗೇರ ಮಾತನಾಡಿ, ಬಸವಣ್ಣನವರು ಆದರ್ಶ ಸಮಾಜ ನಿರ್ಮಾಣ ಮಾಡಲು ಅನುಭವ ಮಂಟಪವನ್ನು ನಿರ್ಮಾಣ ಮಾಡಿ ಎಲ್ಲ ಸಮಾಜದ ಕಾಯಕಗಳು ಪವಿತ್ರವೆಂದು ಹೇಳಿದರು.</p>.<p>ಹುಣಸಿಕಟ್ಟಿಯ ಜಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಬಸವೇಶ್ವರ ಕಮಿಟಿಗೆ ಅಧ್ಯಕ್ಷ ಕೃಷ್ಣಾರಡ್ಡಿ ಮೊಟೆಬೆನ್ನೂರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಪದಾಧಿಕಾರಿಗಳ ಪದಗ್ರಹಣ ಹಾಗೂ ಬಸವೇಶ್ವರ ದೇವಸ್ಥಾನ ಸಂಪೂರ್ಣ ಜೀರ್ಣೋದ್ಧಾರ ಮಾಡಿದ ರಾಮರೆಡ್ಡಿ ಗೋಡಿಹಾಳ ದಂಪತಿಯನ್ನು ಸ್ವಾಮೀಜಿ ಅಭಿನಂದಿಸಿದರು.</p>.<p>ಕಾಂತೇಶರಡ್ಡಿ ಗೋಡಿಹಾಳ, ಧರ್ಮರಡ್ಡಿ ಮಾಗೋಡ, ಶಿವಾನಂದ ಕಚ್ಚರವಿ, ಪ್ರಭು ಗೋಡಿಹಾಳ, ಮಲ್ಲೇಶ ಬೆಣ್ಣಿಗೌಡ್ರ, ಶ್ರೀಧರ ಅಗಸಿಬಾಗಿಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>