<p><strong>ಹಾವೇರಿ: </strong>ಬೇಡ ಜಂಗಮರ ಕುರಿತು ಸದನದಲ್ಲಿ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ನಗರದ ಮೈಲಾರ ಮಹಾದೇವಪ್ಪನವರವೃತ್ತದಲ್ಲಿ ಸಚಿವರ ಪ್ರತಿಕೃತಿ ದಹಿಸಿ ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.</p>.<p>ಸಮುದಾಯದ ಮುಖಂಡಎಸ್.ಡಿ.ಹಿರೇಮಠ ಮಾತನಾಡಿ, ಬೇಡ ಜಂಗಮರು ಕೇವಲ ಮೂರು ಜಿಲ್ಲೆಗಳಲ್ಲಿದ್ದಾರೆ. ರಾಜ್ಯದ ಉಳಿದ ಯಾವುದೇ ಜಿಲ್ಲೆಯಲ್ಲಿ ಇರುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ, ಅವರ ಆಹಾರ ಪದ್ಧತಿಯನ್ನೂ ಪ್ರಸ್ತಾಪಿಸಿದ್ದಾರೆ. ಆದರೆ ಈ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯ 1995 ಜ.18ರ ಸುತ್ತೋಲೆ ಸಂವಿಧಾನ, ಕಾನೂನು ಬಾಹಿರಎಂದು ತೀರ್ಪು ನೀಡಿದೆ ಎಂದರು.</p>.<p>ಬೇಡ ಜಂಗಮ ಜಾತಿ ಕುರಿತು ಸಂಬಂಧಿಸಿದ ಇಲಾಖೆಯ ಸಚಿವರಿಗೆ ಗೊತ್ತಿಲ್ಲದಿದ್ದರೆ, ಅವರನ್ನು ಆ ಖಾತೆಯಲ್ಲಿ ಮುಂದುವರೆಸಬಾರದು. ಇಂತಹ ಸಚಿವರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಇವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿದರು.</p>.<p>ಬೆಳಗಾವಿ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ಆದೇಶ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಚಲಿತದಲ್ಲಿರುವ ಸುತ್ತೋಲೆ ಹಾಗೂ ಕರ್ನಾಟಕ ಗೆಜೆಟಿಯರ್ ವರದಿಯನ್ನು ಆಧರಿಸಿ, ನ್ಯಾಯಾಲಯದತೀರ್ಪನ್ನು ಗೌರವಿಸಿ ಬೇಡ ಜಂಗಮಪರಿಶಿಷ್ಟ ಜಾತಿ ಪ್ರಮಾಣಪತ್ರಗಳನ್ನು ನೀಡಿರುವ ಬೆಳಗಾವಿ ತಾಲ್ಲೂಕಿನ ಗ್ರೇಡ್-2 ತಹಶೀಲ್ದಾರ, ಕಂದಾಯ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಅವರ ಅಮಾನತು ಆದೇಶವನ್ನು ಕೂಡಲೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.</p>.<p>ಗುರು ಹಿರೇಮಠ ಮಾತನಾಡಿ, ರಾಜ್ಯದಲ್ಲಿರುವ ಜಂಗಮರು ಪಂಚ ಪೀಠಗಳ ಅನುಯಾಯಿಗಳು ಅವರು ಶುದ್ಧ ಸಸ್ಯಾಹಾರಿಗಳು ಇವರೆಲ್ಲ ಬೇಡ ಜಂಗಮರುಎಂದು ರಾಜ್ಯ ಸರ್ಕಾರಕ್ಕೆ ಸೂರ್ಯನಾಥ ಕಾಮತ ಸಮಿತಿ ವರದಿಯನ್ನು ನೀಡಿದ್ದಾರೆ ಎಂದರು.</p>.<p>ಬಿ.ಎಸ್.ಹಿರೇಮಠ, ನಾಗರಾಜ ಹನುಗೋಡಿಮಠ ಮಾತನಾಡಿದರು. ಎಸ್.ಎಸ್.ಮಠದ, ಮಂಜುನಾಥ ಮಠಪತಿ, ಶಿವಾನಂದ ಹಿರೇಮಠ, ಗುರುನಾಥಯ್ಯ ಮಳ್ಳೂರಮಠ, ರಾಜು ಕಲ್ಯಾಣಮಠ, ಬಸಯ್ಯ ಹಿರೇಮಠ, ರಾಚಯ್ಯ ಪಾಟೀಲ, ಮುತ್ತಯ್ಯ ರಿತ್ತಿಮಠ, ಎ.ಕೆ.ಅದ್ವಾನಿಮಠ, ಚಂದ್ರಶೇಕರಯ್ಯ ಗುಡೂರಮಠ, ಎನ್.ಎಂ.ಹಿರೇಮಠ, ಸಿ.ಪಿ.ಸುತ್ತೂರಮಠ, ಬಸವರಾಜಯ್ಯ ಹಿರೇಮಠ, ಗುರುಶಾಂತಯ್ಯ ಹಿರೇಮಠ, ಕರಬಸಯ್ಯ ಹಿರೇಮಠ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ: </strong>ಬೇಡ ಜಂಗಮರ ಕುರಿತು ಸದನದಲ್ಲಿ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ನಗರದ ಮೈಲಾರ ಮಹಾದೇವಪ್ಪನವರವೃತ್ತದಲ್ಲಿ ಸಚಿವರ ಪ್ರತಿಕೃತಿ ದಹಿಸಿ ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.</p>.<p>ಸಮುದಾಯದ ಮುಖಂಡಎಸ್.ಡಿ.ಹಿರೇಮಠ ಮಾತನಾಡಿ, ಬೇಡ ಜಂಗಮರು ಕೇವಲ ಮೂರು ಜಿಲ್ಲೆಗಳಲ್ಲಿದ್ದಾರೆ. ರಾಜ್ಯದ ಉಳಿದ ಯಾವುದೇ ಜಿಲ್ಲೆಯಲ್ಲಿ ಇರುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ, ಅವರ ಆಹಾರ ಪದ್ಧತಿಯನ್ನೂ ಪ್ರಸ್ತಾಪಿಸಿದ್ದಾರೆ. ಆದರೆ ಈ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯ 1995 ಜ.18ರ ಸುತ್ತೋಲೆ ಸಂವಿಧಾನ, ಕಾನೂನು ಬಾಹಿರಎಂದು ತೀರ್ಪು ನೀಡಿದೆ ಎಂದರು.</p>.<p>ಬೇಡ ಜಂಗಮ ಜಾತಿ ಕುರಿತು ಸಂಬಂಧಿಸಿದ ಇಲಾಖೆಯ ಸಚಿವರಿಗೆ ಗೊತ್ತಿಲ್ಲದಿದ್ದರೆ, ಅವರನ್ನು ಆ ಖಾತೆಯಲ್ಲಿ ಮುಂದುವರೆಸಬಾರದು. ಇಂತಹ ಸಚಿವರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಇವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿದರು.</p>.<p>ಬೆಳಗಾವಿ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ಆದೇಶ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಚಲಿತದಲ್ಲಿರುವ ಸುತ್ತೋಲೆ ಹಾಗೂ ಕರ್ನಾಟಕ ಗೆಜೆಟಿಯರ್ ವರದಿಯನ್ನು ಆಧರಿಸಿ, ನ್ಯಾಯಾಲಯದತೀರ್ಪನ್ನು ಗೌರವಿಸಿ ಬೇಡ ಜಂಗಮಪರಿಶಿಷ್ಟ ಜಾತಿ ಪ್ರಮಾಣಪತ್ರಗಳನ್ನು ನೀಡಿರುವ ಬೆಳಗಾವಿ ತಾಲ್ಲೂಕಿನ ಗ್ರೇಡ್-2 ತಹಶೀಲ್ದಾರ, ಕಂದಾಯ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಅವರ ಅಮಾನತು ಆದೇಶವನ್ನು ಕೂಡಲೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.</p>.<p>ಗುರು ಹಿರೇಮಠ ಮಾತನಾಡಿ, ರಾಜ್ಯದಲ್ಲಿರುವ ಜಂಗಮರು ಪಂಚ ಪೀಠಗಳ ಅನುಯಾಯಿಗಳು ಅವರು ಶುದ್ಧ ಸಸ್ಯಾಹಾರಿಗಳು ಇವರೆಲ್ಲ ಬೇಡ ಜಂಗಮರುಎಂದು ರಾಜ್ಯ ಸರ್ಕಾರಕ್ಕೆ ಸೂರ್ಯನಾಥ ಕಾಮತ ಸಮಿತಿ ವರದಿಯನ್ನು ನೀಡಿದ್ದಾರೆ ಎಂದರು.</p>.<p>ಬಿ.ಎಸ್.ಹಿರೇಮಠ, ನಾಗರಾಜ ಹನುಗೋಡಿಮಠ ಮಾತನಾಡಿದರು. ಎಸ್.ಎಸ್.ಮಠದ, ಮಂಜುನಾಥ ಮಠಪತಿ, ಶಿವಾನಂದ ಹಿರೇಮಠ, ಗುರುನಾಥಯ್ಯ ಮಳ್ಳೂರಮಠ, ರಾಜು ಕಲ್ಯಾಣಮಠ, ಬಸಯ್ಯ ಹಿರೇಮಠ, ರಾಚಯ್ಯ ಪಾಟೀಲ, ಮುತ್ತಯ್ಯ ರಿತ್ತಿಮಠ, ಎ.ಕೆ.ಅದ್ವಾನಿಮಠ, ಚಂದ್ರಶೇಕರಯ್ಯ ಗುಡೂರಮಠ, ಎನ್.ಎಂ.ಹಿರೇಮಠ, ಸಿ.ಪಿ.ಸುತ್ತೂರಮಠ, ಬಸವರಾಜಯ್ಯ ಹಿರೇಮಠ, ಗುರುಶಾಂತಯ್ಯ ಹಿರೇಮಠ, ಕರಬಸಯ್ಯ ಹಿರೇಮಠ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>