<p><strong>ಹಾವೇರಿ:</strong> ರಾಣೆಬೆನ್ನೂರು ಶಹರ ಠಾಣೆ ವ್ಯಾ್ಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು, ಆರೋಪಿಯಿಂದ ಜಪ್ತಿ ಮಾಡಿದ ಚಿನ್ನದ ಸರವನ್ನು ದೂರುದಾರರ ಮನೆಗೆ ಹೋಗಿ ಹಸ್ತಾಂತರ ಮಾಡಿದ್ದಾರೆ.</p>.<p>ಕೋಟೆ ಓಣಿಯ ನಿವಾಸಿ ಸುಧಾಬಾಯಿ ಕುಲಕರ್ಣಿ (84) ಅವರ ಚಿನ್ನದ ಸರವನ್ನು ಏಪ್ರಿಲ್ 6ರಂದು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಸುಧಾಬಾಯಿ ಅವರು ಠಾಣೆಗೆ ದೂರು ನೀಡಿದ್ದರು.</p>.<p>ತನಿಖೆ ಕೈಗೊಂಡಿದ್ದ ಪೊಲೀಸರು, ಆರೋಪಿಗಳಾದ ಸಂತೋಷ ತುಳಸಪ್ಪ ಸಿಂಧೆ ಹಾಗೂ ದ್ಯಾಮಣ್ಣ ಪಾಂಡಪ್ಪ ನವಸಣ್ಣನವರ ಅವರನ್ನು ಇತ್ತೀಚೆಗೆ ಬಂಧಿಸಿದ್ದರು. ಅವರಿಂದ ₹ 1.50 ಲಕ್ಷ ಮೌಲ್ಯದ 20 ಗ್ರಾಂ ಚಿನ್ನದ ಸರ ಜಪ್ತಿ ಮಾಡಿದ್ದರು.</p>.<p>ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಚಿನ್ನದ ಸರವನ್ನು ದೂರುದಾರರಿಗೆ ಮರಳಿಸಲು ಆದೇಶಿಸಿತ್ತು. ಅದರಂತೆ ಹೆಚ್ಚುವರಿ ಎಸ್ಪಿ ಎಲ್.ವೈ. ಶಿರಕೋಳ, ಸಿಪಿಐ ಶಂಕರ್ ಎಸ್.ಕೆ. ಅವರು ದೂರುದಾರರಾದ ಸುಧಾಬಾಯಿ ಅವರ ಮನೆಗೆ ಆ. 19ರಂದು ಭೇಟಿ ನೀಡಿ ಸರವನ್ನು ಮರಳಿಸಿದ್ದಾರೆ.</p>.<p>‘ಆರೋಪಿಗಳು ಕಿತ್ತುಕೊಂಡು ಹೋಗಿದ್ದ ಸರವನ್ನು ಪೊಲೀಸರು ಮನೆಗೆ ಬಂದು ಕೊಟ್ಟಿದ್ದಕ್ಕೆ ಖುಷಿಯಾಯಿತು’ ಎಂದು ಸುಧಾಬಾಯಿ ಅವರು ಪೊಲೀಸರು ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ರಾಣೆಬೆನ್ನೂರು ಶಹರ ಠಾಣೆ ವ್ಯಾ್ಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು, ಆರೋಪಿಯಿಂದ ಜಪ್ತಿ ಮಾಡಿದ ಚಿನ್ನದ ಸರವನ್ನು ದೂರುದಾರರ ಮನೆಗೆ ಹೋಗಿ ಹಸ್ತಾಂತರ ಮಾಡಿದ್ದಾರೆ.</p>.<p>ಕೋಟೆ ಓಣಿಯ ನಿವಾಸಿ ಸುಧಾಬಾಯಿ ಕುಲಕರ್ಣಿ (84) ಅವರ ಚಿನ್ನದ ಸರವನ್ನು ಏಪ್ರಿಲ್ 6ರಂದು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಸುಧಾಬಾಯಿ ಅವರು ಠಾಣೆಗೆ ದೂರು ನೀಡಿದ್ದರು.</p>.<p>ತನಿಖೆ ಕೈಗೊಂಡಿದ್ದ ಪೊಲೀಸರು, ಆರೋಪಿಗಳಾದ ಸಂತೋಷ ತುಳಸಪ್ಪ ಸಿಂಧೆ ಹಾಗೂ ದ್ಯಾಮಣ್ಣ ಪಾಂಡಪ್ಪ ನವಸಣ್ಣನವರ ಅವರನ್ನು ಇತ್ತೀಚೆಗೆ ಬಂಧಿಸಿದ್ದರು. ಅವರಿಂದ ₹ 1.50 ಲಕ್ಷ ಮೌಲ್ಯದ 20 ಗ್ರಾಂ ಚಿನ್ನದ ಸರ ಜಪ್ತಿ ಮಾಡಿದ್ದರು.</p>.<p>ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಚಿನ್ನದ ಸರವನ್ನು ದೂರುದಾರರಿಗೆ ಮರಳಿಸಲು ಆದೇಶಿಸಿತ್ತು. ಅದರಂತೆ ಹೆಚ್ಚುವರಿ ಎಸ್ಪಿ ಎಲ್.ವೈ. ಶಿರಕೋಳ, ಸಿಪಿಐ ಶಂಕರ್ ಎಸ್.ಕೆ. ಅವರು ದೂರುದಾರರಾದ ಸುಧಾಬಾಯಿ ಅವರ ಮನೆಗೆ ಆ. 19ರಂದು ಭೇಟಿ ನೀಡಿ ಸರವನ್ನು ಮರಳಿಸಿದ್ದಾರೆ.</p>.<p>‘ಆರೋಪಿಗಳು ಕಿತ್ತುಕೊಂಡು ಹೋಗಿದ್ದ ಸರವನ್ನು ಪೊಲೀಸರು ಮನೆಗೆ ಬಂದು ಕೊಟ್ಟಿದ್ದಕ್ಕೆ ಖುಷಿಯಾಯಿತು’ ಎಂದು ಸುಧಾಬಾಯಿ ಅವರು ಪೊಲೀಸರು ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>