<p><strong>ಹಾವೇರಿ</strong>: ದ್ವಿಚಕ್ರ ವಾಹನದ ದಾಖಲೆ ತೋರಿಸದೇ ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಶಿವನಗೌಡ ನಿಂಗನಗೌಡ ಪಾಟೀಲ ಎಂಬುವವರಿಗೆ ₹ 17 ಸಾವಿರ ದಂಡ ವಿಧಿಸಲಾಗಿದೆ.</p><p>ಹಾವೇರಿ ಸಂಚಾರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ಜೆಎಂಎಫ್ಸಿ ನ್ಯಾಯಾಲಯ, ಶಿವನಗೌಡ ಅವರಿಗೆ ದಂಡ ವಿಧಿಸಿದೆ. ತಪ್ಪು ಒಪ್ಪಿಕೊಂಡಿರುವ ಆರೋಪಿ ಶಿವನಗೌಡ, ಸ್ಥಳದಲ್ಲೇ ದಂಡ ಪಾವತಿಸಿ ರಶೀದಿ ಪಡೆದುಕೊಂಡಿದ್ದಾರೆ.</p><p><strong>ಘಟನೆ ವಿವರ:</strong> ‘ಗ್ರಾಮ ಪಂಚಾಯಿತಿಯೊಂದರ ಮಾಜಿ ಅಧ್ಯಕ್ಷನೆಂದು ಹೇಳಿಕೊಂಡಿದ್ದ ಶಿವನಗೌಡ, ಆಗಸ್ಟ್ 2ರಂದು ದ್ವಿಚಕ್ರ ವಾಹನದಲ್ಲಿ ಹೊರಟಿದ್ದ. ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಜೆ.ಪಿ. ವೃತ್ತಕ್ಕೆ ಹೋಗುವ ಮಾರ್ಗದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು, ವಾಹನ ತಡೆದು ದಾಖಲೆ ಕೇಳಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.</p><p>‘ದಾಖಲೆ ನೀಡಲು ನಿರಾಕರಿಸಿದ್ದ ಶಿವನಗೌಡ, ಬೈಕ್ನ್ನು ಸ್ಥಳದಲ್ಲೇ ಬಿಟ್ಟಿದ್ದ. ‘ನಾನು ಯಾರು ಗೊತ್ತಾ? ನನ್ನ ಬೈಕ್ ಇಲ್ಲೇ ಬಿಟ್ಟು ಹೋಗುತ್ತೇನೆ. ಸ್ವಲ್ಪ ಸಮಯ ಬಿಟ್ಟು ನೀನೇ ನನ್ನ ಮನೆಗೆ ಬೈಕ್ ತಂದುಕೊಡುತ್ತೀಯಾ? ನೋಡ್ತಾ ಇರು’ ಎಂದು ಬೆದರಿಸಿದ್ದ. ಈ ದೃಶ್ಯವನ್ನು ಕರ್ತವ್ಯದಲ್ಲಿದ್ದ ಸಿಬ್ಬಂದಿ, ಮೊಬೈಲ್ನಲ್ಲಿ ಚಿತ್ರೀಕರಿಸಿದ್ದರು’ ಎಂದು ಮೂಲಗಳು ತಿಳಿಸಿವೆ.</p><p>‘ಪೊಲೀಸರ ಜೊತೆಗೆಯೇ ವಾಗ್ವಾದ ನಡೆಸಿದ್ದ ಆರೋಪಿ ಶಿವನಗೌಡ, ಎಎಸ್ಐ ಸಿ.ವೈ. ತಹಶೀಲ್ದಾರ್ ಹಾಗೂ ಇತರರನ್ನು ಏಕವಚನದಲ್ಲಿ ನಿಂದಿಸಿ ಗಲಾಟೆ ಮಾಡಿದ್ದ. ವಿಷಯ ತಿಳಿದ ಪಿಎಸ್ಐ ಶೈಲಾಶ್ರೀ, ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು’ ಎಂದು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ</strong>: ದ್ವಿಚಕ್ರ ವಾಹನದ ದಾಖಲೆ ತೋರಿಸದೇ ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಶಿವನಗೌಡ ನಿಂಗನಗೌಡ ಪಾಟೀಲ ಎಂಬುವವರಿಗೆ ₹ 17 ಸಾವಿರ ದಂಡ ವಿಧಿಸಲಾಗಿದೆ.</p><p>ಹಾವೇರಿ ಸಂಚಾರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ಜೆಎಂಎಫ್ಸಿ ನ್ಯಾಯಾಲಯ, ಶಿವನಗೌಡ ಅವರಿಗೆ ದಂಡ ವಿಧಿಸಿದೆ. ತಪ್ಪು ಒಪ್ಪಿಕೊಂಡಿರುವ ಆರೋಪಿ ಶಿವನಗೌಡ, ಸ್ಥಳದಲ್ಲೇ ದಂಡ ಪಾವತಿಸಿ ರಶೀದಿ ಪಡೆದುಕೊಂಡಿದ್ದಾರೆ.</p><p><strong>ಘಟನೆ ವಿವರ:</strong> ‘ಗ್ರಾಮ ಪಂಚಾಯಿತಿಯೊಂದರ ಮಾಜಿ ಅಧ್ಯಕ್ಷನೆಂದು ಹೇಳಿಕೊಂಡಿದ್ದ ಶಿವನಗೌಡ, ಆಗಸ್ಟ್ 2ರಂದು ದ್ವಿಚಕ್ರ ವಾಹನದಲ್ಲಿ ಹೊರಟಿದ್ದ. ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಜೆ.ಪಿ. ವೃತ್ತಕ್ಕೆ ಹೋಗುವ ಮಾರ್ಗದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು, ವಾಹನ ತಡೆದು ದಾಖಲೆ ಕೇಳಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.</p><p>‘ದಾಖಲೆ ನೀಡಲು ನಿರಾಕರಿಸಿದ್ದ ಶಿವನಗೌಡ, ಬೈಕ್ನ್ನು ಸ್ಥಳದಲ್ಲೇ ಬಿಟ್ಟಿದ್ದ. ‘ನಾನು ಯಾರು ಗೊತ್ತಾ? ನನ್ನ ಬೈಕ್ ಇಲ್ಲೇ ಬಿಟ್ಟು ಹೋಗುತ್ತೇನೆ. ಸ್ವಲ್ಪ ಸಮಯ ಬಿಟ್ಟು ನೀನೇ ನನ್ನ ಮನೆಗೆ ಬೈಕ್ ತಂದುಕೊಡುತ್ತೀಯಾ? ನೋಡ್ತಾ ಇರು’ ಎಂದು ಬೆದರಿಸಿದ್ದ. ಈ ದೃಶ್ಯವನ್ನು ಕರ್ತವ್ಯದಲ್ಲಿದ್ದ ಸಿಬ್ಬಂದಿ, ಮೊಬೈಲ್ನಲ್ಲಿ ಚಿತ್ರೀಕರಿಸಿದ್ದರು’ ಎಂದು ಮೂಲಗಳು ತಿಳಿಸಿವೆ.</p><p>‘ಪೊಲೀಸರ ಜೊತೆಗೆಯೇ ವಾಗ್ವಾದ ನಡೆಸಿದ್ದ ಆರೋಪಿ ಶಿವನಗೌಡ, ಎಎಸ್ಐ ಸಿ.ವೈ. ತಹಶೀಲ್ದಾರ್ ಹಾಗೂ ಇತರರನ್ನು ಏಕವಚನದಲ್ಲಿ ನಿಂದಿಸಿ ಗಲಾಟೆ ಮಾಡಿದ್ದ. ವಿಷಯ ತಿಳಿದ ಪಿಎಸ್ಐ ಶೈಲಾಶ್ರೀ, ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು’ ಎಂದು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>