ಗುತ್ತಲ: ಇಲ್ಲಿಗೆ ಸಮೀಪದ ಕಂಚಾರಗಟ್ಟಿ ಗ್ರಾಮದ ತುಂಗಭದ್ರಾ ನದಿಯ ದಡದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದವರ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಎರಡು ತೆಪ್ಪಗಳನ್ನು ಜೆಸಿಬಿ ಸಹಾಯದಿಂದ ನಾಶಪಡಿಸಿದರು.
ಹಾವನೂರ, ಕಂಚಾರಗಟ್ಟಿ ಮತ್ತು ಹರಳಹಳ್ಳಿ ಗ್ರಾಮಗಳ ತುಂಗಭದ್ರಾ ನದಿಯ ದಡದಲ್ಲಿ ನಿರಂತರವಾಗಿ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ದಾಳಿಯ ಸಂದರ್ಭದಲ್ಲಿ ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ ಕೆ, ಭೂ ವಿಜ್ಞಾನಿ ಮಧುಸೂದನ್ ಎಸ್.ಬಿ.ಈರಣ್ಣ ಹುಲ್ಮನಿ ಇದ್ದರು.