ಸಮ್ಮೇಳನದ ಪ್ರಚಾರಕ್ಕೆ ರಾಜ್ಯವ್ಯಾಪಿ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪರಿಸ್ನೇಹಿ ಹೆದ್ದಾರಿ ಫಲಕಗಳ ಅಳವಡಿಕೆ, ನಗರ ವ್ಯಾಪ್ತಿಯಲ್ಲಿ ಕಟೌಟ್ ಅಳವಡಿಕೆ, ಸಾರಿಗೆ ಬಸ್, ವಾಹನಗಳಿಗೆ ಸ್ಟಿಕ್ಕರ್ ಅಳವಡಿಕೆ, ಕನ್ನಡ ಪ್ರಚಾರ ರಥದ ಮೂಲಕ ಜಿಲ್ಲೆಯ ಎಲ್ಲ ತಾಲ್ಲೂಕು ವ್ಯಾಪ್ತಿಯಲ್ಲಿ ಕಲಾ ತಂಡಗಳನ್ನು ಸಂಯೋಜಿಸಿ ಪ್ರಚಾರ, ಜಾಥಾ, ರ್ಯಾಲಿಗಳು ಸೇರಿದಂತೆ ವಿಭಿನ್ನವಾಗಿ ಪ್ರಚಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.