<p><strong>ಹಾನಗಲ್:</strong> ನರೇಗಾ ಯೋಜನೆ ಅಡಿ ₹ 26 ಲಕ್ಷದ ಮೊತ್ತದಲ್ಲಿ ಗ್ರಾಮಾಭಿವೃದ್ಧಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ತಾಲ್ಲೂಕಿನ ಸಾವಸಗಿ ಗ್ರಾಮ ಪಂಚಾಯ್ತಿ ಸಾಧನೆ ಮಾಡಿದೆ.</p>.<p>ಶಾಲಾ ಕಂಪೌಂಡ್, ಗೇಟ್ ನಿರ್ಮಾಣ, ರೈತ ಸಂಪರ್ಕದ ರಸ್ತೆಗಳ ಸುಧಾರಣೆ, ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಮುಖ್ಯವಾಗಿ 6 ಕೆರೆಗಳ ಹೂಳು ತೆಗೆಯಲಾಗಿದೆ. ಕೆರೆಗಳ ಹೂಳೆತ್ತುವ ಕಾರ್ಯಕ್ಕಾಗಿ ಸ್ಥಳೀಯರಿಗೆ ಸುಮಾರು ₹ 15 ಲಕ್ಷದ ಕೂಲಿ ಪಾವತಿ ಮಾಡಲಾಗಿದೆ.</p>.<p>ಸಾವಸಗಿ ಗ್ರಾಮದಲ್ಲಿ ಬಳಗೇರಿ ಕೆರೆಯನ್ನು ₹ 3.74 ಲಕ್ಷದಲ್ಲಿ, ಡೊಳ್ಳಿನಕಟ್ಟಿ ಕೆರೆಯನ್ನು ₹ 3.25 ಲಕ್ಷದಲ್ಲಿ, ಉಳ್ಳಿಕೆರೆಯನ್ನು ₹ 4.46 ಲಕ್ಷದಲ್ಲಿ, ಯಲ್ಲಮ್ಮನ ಕೆರೆಯನ್ನು ₹ 4.37 ಲಕ್ಷದಲ್ಲಿ ಹೂಳು ತೆಗೆಯಲಾಗಿದೆ. ಇನ್ನೆರಡು ಕೆರೆಗಳ ಅಭಿವೃದ್ಧಿ ಕಾರ್ಯವು ಪ್ರಗತಿಯಲ್ಲಿದೆ.</p>.<p>ಇದರಿಂದ ಗ್ರಾಮದ ಜೀವಜಲ ಎನ್ನಿಸಿಕೊಂಡ ಕೆರೆಗಳಲ್ಲಿ ನೀರು ಸಂಗ್ರಹಣೆ ಮತ್ತು ದುಡಿಯುವ ಕೈಗಳಿಗೆ ಉದ್ಯೋಗ ನೀಡಿದ ಸಾರ್ಥಕತೆಯನ್ನು ಸಾವಸಗಿ ಗ್ರಾಮ ಪಂಚಾಯ್ತಿ ಹೊಂದಿದೆ, ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ‘ನಮ್ಮ ಹೊಲ–ನಮ್ಮ ದಾರಿ’ ಯೋಜನೆಯಡಿ ರೈತ ಸಂಪರ್ಕದ ರಸ್ತೆಯನ್ನು ಸುಧಾರಣೆ ಮಾಡಲಾಗಿದೆ. ಹದಗೆಟ್ಟಿದ್ದ ಈ ರಸ್ತೆಯನ್ನು ₹98 ಸಾವಿರದಲ್ಲಿ ಸುಧಾರಣೆ ಮಾಡಲಾಗಿದೆ. ಇದೇ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ₹ 4 ಲಕ್ಷದಲ್ಲಿ ಕಂಪೌಂಡ್ ನಿರ್ಮಿಸಲಾಗಿದೆ, ‘ಈ ಎಲ್ಲ ಕಾಮಗಾರಿಗಳನ್ನು ಕಳೆದ 6 ತಿಂಗಳ ಅವಧಿಯಲ್ಲಿ ಮಾಡಲಾಗಿದೆ, ಗ್ರಾಮೀಣಾಭಿವೃದ್ಧಿಗೆ ಎನ್ಆರ್ಇಜಿ ಅನುದಾನವನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳಲಾಗಿದೆ. ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮಸ್ಥರ ಸಹಕಾರ ಈ ಸಾಧನೆಗೆ ಕಾರಣ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಾಲೇಹಾಬಾನು ನಜೀರ್ಅಹ್ಮದ್ ಮುಲ್ಲಾ ‘ಪ್ರಜಾವಾಣಿ’ಗೆ ಹೇಳಿದರು.</p>.<p>ಶಾಸಕ ಉದಾಸಿ ವೀಕ್ಷಣೆ: ಸಾವಸಗಿ ಗ್ರಾಮದಲ್ಲಿನ ಎನ್ಆರ್ಇಜಿ ಕಾಮಗಾರಿಗಳನ್ನು ಶುಕ್ರವಾರ ಶಾಸಕ ಸಿ,ಎಂ.ಉದಾಸಿ ಪರಿಶೀಲಿಸಿದರು. ರೈತ ಸಂಪರ್ಕದ ರಸ್ತೆಯ ಕಾಮಗಾರಿಯ ಗುಣಮಟ್ಟವನ್ನು ಮೆಚ್ಚಿಕೊಂಡರು.</p>.<p>‘ಎನ್ಆರ್ಇಜಿ ಅಡಿಯಲ್ಲಿ ಮೂಲ ಸೌಲಭ್ಯಗಳ ಕಾಮಗಾರಿ ಕೈಗೆತ್ತಿಕೊಳ್ಳಲು ಈಗ ಉತ್ತಮ ಅವಕಾಶ ಒದಗಿದೆ. ಶೇ80 ಸಾಮಗ್ರಿ, ಯಂತ್ರ ಬಳಕೆ, ಶೇ20 ರಷ್ಟು ಮಾನವ ಶಕ್ತಿ ಉಪಯೋಗದ ಕ್ರಿಯಾ ಯೋಜನೆಯು ಗ್ರಾಮಾಭಿವೃದ್ಧಿಯ ಕಾರ್ಯಕ್ರಮಗಳಿಗೆ ವೇಗ ನೀಡಲು ಸಹಕಾರ ಆಗಿದೆ’ ಎಂದರು.</p>.<p>ತಾಲ್ಲೂಕು ಪಂಚಾಯ್ತಿ ಸದಸ್ಯ ಬಸವರಾಜ ಬೂದಿಹಾಳ, ತಾ.ಪಂ ಇಓ ಶಶಿಧರ.ಎಂ.ಜಿ, ಎನ್ಆರ್ಇಜಿ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ, ಅಭಿವೃದ್ಧಿ ಅಧಿಕಾರಿ ಎಫ್.ವಿ.ಸಾತನಹಳ್ಳಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್:</strong> ನರೇಗಾ ಯೋಜನೆ ಅಡಿ ₹ 26 ಲಕ್ಷದ ಮೊತ್ತದಲ್ಲಿ ಗ್ರಾಮಾಭಿವೃದ್ಧಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ತಾಲ್ಲೂಕಿನ ಸಾವಸಗಿ ಗ್ರಾಮ ಪಂಚಾಯ್ತಿ ಸಾಧನೆ ಮಾಡಿದೆ.</p>.<p>ಶಾಲಾ ಕಂಪೌಂಡ್, ಗೇಟ್ ನಿರ್ಮಾಣ, ರೈತ ಸಂಪರ್ಕದ ರಸ್ತೆಗಳ ಸುಧಾರಣೆ, ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಮುಖ್ಯವಾಗಿ 6 ಕೆರೆಗಳ ಹೂಳು ತೆಗೆಯಲಾಗಿದೆ. ಕೆರೆಗಳ ಹೂಳೆತ್ತುವ ಕಾರ್ಯಕ್ಕಾಗಿ ಸ್ಥಳೀಯರಿಗೆ ಸುಮಾರು ₹ 15 ಲಕ್ಷದ ಕೂಲಿ ಪಾವತಿ ಮಾಡಲಾಗಿದೆ.</p>.<p>ಸಾವಸಗಿ ಗ್ರಾಮದಲ್ಲಿ ಬಳಗೇರಿ ಕೆರೆಯನ್ನು ₹ 3.74 ಲಕ್ಷದಲ್ಲಿ, ಡೊಳ್ಳಿನಕಟ್ಟಿ ಕೆರೆಯನ್ನು ₹ 3.25 ಲಕ್ಷದಲ್ಲಿ, ಉಳ್ಳಿಕೆರೆಯನ್ನು ₹ 4.46 ಲಕ್ಷದಲ್ಲಿ, ಯಲ್ಲಮ್ಮನ ಕೆರೆಯನ್ನು ₹ 4.37 ಲಕ್ಷದಲ್ಲಿ ಹೂಳು ತೆಗೆಯಲಾಗಿದೆ. ಇನ್ನೆರಡು ಕೆರೆಗಳ ಅಭಿವೃದ್ಧಿ ಕಾರ್ಯವು ಪ್ರಗತಿಯಲ್ಲಿದೆ.</p>.<p>ಇದರಿಂದ ಗ್ರಾಮದ ಜೀವಜಲ ಎನ್ನಿಸಿಕೊಂಡ ಕೆರೆಗಳಲ್ಲಿ ನೀರು ಸಂಗ್ರಹಣೆ ಮತ್ತು ದುಡಿಯುವ ಕೈಗಳಿಗೆ ಉದ್ಯೋಗ ನೀಡಿದ ಸಾರ್ಥಕತೆಯನ್ನು ಸಾವಸಗಿ ಗ್ರಾಮ ಪಂಚಾಯ್ತಿ ಹೊಂದಿದೆ, ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ‘ನಮ್ಮ ಹೊಲ–ನಮ್ಮ ದಾರಿ’ ಯೋಜನೆಯಡಿ ರೈತ ಸಂಪರ್ಕದ ರಸ್ತೆಯನ್ನು ಸುಧಾರಣೆ ಮಾಡಲಾಗಿದೆ. ಹದಗೆಟ್ಟಿದ್ದ ಈ ರಸ್ತೆಯನ್ನು ₹98 ಸಾವಿರದಲ್ಲಿ ಸುಧಾರಣೆ ಮಾಡಲಾಗಿದೆ. ಇದೇ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ₹ 4 ಲಕ್ಷದಲ್ಲಿ ಕಂಪೌಂಡ್ ನಿರ್ಮಿಸಲಾಗಿದೆ, ‘ಈ ಎಲ್ಲ ಕಾಮಗಾರಿಗಳನ್ನು ಕಳೆದ 6 ತಿಂಗಳ ಅವಧಿಯಲ್ಲಿ ಮಾಡಲಾಗಿದೆ, ಗ್ರಾಮೀಣಾಭಿವೃದ್ಧಿಗೆ ಎನ್ಆರ್ಇಜಿ ಅನುದಾನವನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳಲಾಗಿದೆ. ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮಸ್ಥರ ಸಹಕಾರ ಈ ಸಾಧನೆಗೆ ಕಾರಣ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಾಲೇಹಾಬಾನು ನಜೀರ್ಅಹ್ಮದ್ ಮುಲ್ಲಾ ‘ಪ್ರಜಾವಾಣಿ’ಗೆ ಹೇಳಿದರು.</p>.<p>ಶಾಸಕ ಉದಾಸಿ ವೀಕ್ಷಣೆ: ಸಾವಸಗಿ ಗ್ರಾಮದಲ್ಲಿನ ಎನ್ಆರ್ಇಜಿ ಕಾಮಗಾರಿಗಳನ್ನು ಶುಕ್ರವಾರ ಶಾಸಕ ಸಿ,ಎಂ.ಉದಾಸಿ ಪರಿಶೀಲಿಸಿದರು. ರೈತ ಸಂಪರ್ಕದ ರಸ್ತೆಯ ಕಾಮಗಾರಿಯ ಗುಣಮಟ್ಟವನ್ನು ಮೆಚ್ಚಿಕೊಂಡರು.</p>.<p>‘ಎನ್ಆರ್ಇಜಿ ಅಡಿಯಲ್ಲಿ ಮೂಲ ಸೌಲಭ್ಯಗಳ ಕಾಮಗಾರಿ ಕೈಗೆತ್ತಿಕೊಳ್ಳಲು ಈಗ ಉತ್ತಮ ಅವಕಾಶ ಒದಗಿದೆ. ಶೇ80 ಸಾಮಗ್ರಿ, ಯಂತ್ರ ಬಳಕೆ, ಶೇ20 ರಷ್ಟು ಮಾನವ ಶಕ್ತಿ ಉಪಯೋಗದ ಕ್ರಿಯಾ ಯೋಜನೆಯು ಗ್ರಾಮಾಭಿವೃದ್ಧಿಯ ಕಾರ್ಯಕ್ರಮಗಳಿಗೆ ವೇಗ ನೀಡಲು ಸಹಕಾರ ಆಗಿದೆ’ ಎಂದರು.</p>.<p>ತಾಲ್ಲೂಕು ಪಂಚಾಯ್ತಿ ಸದಸ್ಯ ಬಸವರಾಜ ಬೂದಿಹಾಳ, ತಾ.ಪಂ ಇಓ ಶಶಿಧರ.ಎಂ.ಜಿ, ಎನ್ಆರ್ಇಜಿ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ, ಅಭಿವೃದ್ಧಿ ಅಧಿಕಾರಿ ಎಫ್.ವಿ.ಸಾತನಹಳ್ಳಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>