<p><strong>ರಾಣೆಬೆನ್ನೂರು</strong>: ಅಜಾಗರೂಕತೆಯಿಂದ ಅತಿವೇಗ ಮತ್ತು ನಿರ್ಲಕ್ಷ್ಯತನದಿಂದ ಕಾರು ಚಲಾಯಿಸಿ ಪಾದಚಾರಿ ಮಹಿಳೆಗೆ ಡಿಕ್ಕಿ ಪಡಿಸಿ ಮಹಿಳೆಯ ಸಾವಿಗೆ ಮತ್ತು ಮೂವರಿಗೆ ಗಾಯಪಡಿಸಿ, 3 ವರ್ಷ ಮಗುವಿಗೆ ಸಾದಾ ಗಾಯ ಪಡಿಸಿದ್ದ ನಾಗಶ್ರೀ ನಾಗರಾಜ ಗುತ್ತಲ ಅಪರಾಧ ಸಾಬೀತಾಗಿದೆ. </p>.<p>ಈ ಅಪರಾಧಕ್ಕಾಗಿ ಸೆಷನ್ ನ್ಯಾಯಾಧೀಶ ಬಿ.ಸಿದ್ಧರಾಜು ಅವರು, ಅಪರಾಧಿಗೆ 2 ವರ್ಷ 1 ತಿಂಗಳು ಜೈಲು ಶಿಕ್ಷೆ ಮತ್ತು ₹7 ಸಾವಿರ ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದ್ದಾರೆ.</p>.<p>ಶಿಕ್ಷೆಗೊಳಗಾದ ನಾಗಶ್ರೀ ಯಾವುದೇ ಚಾಲನಾ ಪರವಾನಿಗೆ ಇಲ್ಲದೇ ಕಾರನ್ನು ಚಲಾಯಿಸಿಕೊಂಡು ಹೋಗಿ ಅಪಘಾತ ಮಾಡಿದ್ದರು. ಈ ಅಪಘಾತದಲ್ಲಿ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ ಗ್ರಾಮದ ಗಂಗವ್ವ ಸ್ಥಳದಲ್ಲಿಯೇ ಮೃತ ಪಟ್ಟು, ಮೂವರು ಗಾಯಗೊಂಡು, 3 ವರ್ಷದ ಮಗುವಿಗೆ ಸಾದಾ ಗಾಯವಾದ ಘಟನೆ ದೇವರಗುಡ್ಡ ಗ್ರಾಮ ಪಂಚಾಯಿತಿ ಬಳಿ 2022 ನವೆಂಬರ್ 11ರಂದು ನಡೆದಿತ್ತು. </p>.<p>ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗ್ರಾಮೀಣ ಠಾಣೆ ಸಿಪಿಐ ಮೋತಿಲಾಲ್ ಪವಾರ ಅವರು ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. </p>.<p>ಸರ್ಕಾರಿ ಅಭಿಯೋಜಕಿ ಕವಿತಾ ಎಸ್.ಜಿ ಅವರು ವಾದ ಮಂಡಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಣೆಬೆನ್ನೂರು</strong>: ಅಜಾಗರೂಕತೆಯಿಂದ ಅತಿವೇಗ ಮತ್ತು ನಿರ್ಲಕ್ಷ್ಯತನದಿಂದ ಕಾರು ಚಲಾಯಿಸಿ ಪಾದಚಾರಿ ಮಹಿಳೆಗೆ ಡಿಕ್ಕಿ ಪಡಿಸಿ ಮಹಿಳೆಯ ಸಾವಿಗೆ ಮತ್ತು ಮೂವರಿಗೆ ಗಾಯಪಡಿಸಿ, 3 ವರ್ಷ ಮಗುವಿಗೆ ಸಾದಾ ಗಾಯ ಪಡಿಸಿದ್ದ ನಾಗಶ್ರೀ ನಾಗರಾಜ ಗುತ್ತಲ ಅಪರಾಧ ಸಾಬೀತಾಗಿದೆ. </p>.<p>ಈ ಅಪರಾಧಕ್ಕಾಗಿ ಸೆಷನ್ ನ್ಯಾಯಾಧೀಶ ಬಿ.ಸಿದ್ಧರಾಜು ಅವರು, ಅಪರಾಧಿಗೆ 2 ವರ್ಷ 1 ತಿಂಗಳು ಜೈಲು ಶಿಕ್ಷೆ ಮತ್ತು ₹7 ಸಾವಿರ ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದ್ದಾರೆ.</p>.<p>ಶಿಕ್ಷೆಗೊಳಗಾದ ನಾಗಶ್ರೀ ಯಾವುದೇ ಚಾಲನಾ ಪರವಾನಿಗೆ ಇಲ್ಲದೇ ಕಾರನ್ನು ಚಲಾಯಿಸಿಕೊಂಡು ಹೋಗಿ ಅಪಘಾತ ಮಾಡಿದ್ದರು. ಈ ಅಪಘಾತದಲ್ಲಿ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ ಗ್ರಾಮದ ಗಂಗವ್ವ ಸ್ಥಳದಲ್ಲಿಯೇ ಮೃತ ಪಟ್ಟು, ಮೂವರು ಗಾಯಗೊಂಡು, 3 ವರ್ಷದ ಮಗುವಿಗೆ ಸಾದಾ ಗಾಯವಾದ ಘಟನೆ ದೇವರಗುಡ್ಡ ಗ್ರಾಮ ಪಂಚಾಯಿತಿ ಬಳಿ 2022 ನವೆಂಬರ್ 11ರಂದು ನಡೆದಿತ್ತು. </p>.<p>ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗ್ರಾಮೀಣ ಠಾಣೆ ಸಿಪಿಐ ಮೋತಿಲಾಲ್ ಪವಾರ ಅವರು ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. </p>.<p>ಸರ್ಕಾರಿ ಅಭಿಯೋಜಕಿ ಕವಿತಾ ಎಸ್.ಜಿ ಅವರು ವಾದ ಮಂಡಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>