ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದೆಹಲಿ ಪೆರೆಡ್‌ಗೆ ನಂದನಾ ಆಯ್ಕೆ

Last Updated 14 ಆಗಸ್ಟ್ 2022, 16:02 IST
ಅಕ್ಷರ ಗಾತ್ರ

ಹಂಸಭಾವಿ: ಇಲ್ಲಿನ ಮೃತ್ಯುಂಜಯ ವಿದ್ಯಾಪೀಠದ ಮಹಾಂತಸ್ವಾಮಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್.ಸಿ.ಸಿ ಘಟಕದ ನಂದನಾ ಕರಿಗಾರ್ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ನವದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ವಿಶೇಷ ಏಕ್ ಭಾರತ್-ಶ್ರೇಷ್ಠಭಾರತ್‌ನ ಸ್ವಾತಂತ್ರ‍್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಲು ಹಾವೇರಿ ಜಿಲ್ಲೆಯಿಂದ ಅಯ್ಕೆಯಾಗಿದ್ದಾಳೆ.

ಹುಬ್ಬಳ್ಳಿಯ 28 ಕರ್ನಾಟಕ ಬಟಾಲಿಯನ್ ವತಿಯಿಂದ ಭಾಗಿಯಾಗುತ್ತಿರುವ ಏಕೈಕ ಎಸ್.ಡಬ್ಲ್ಯೂ ಕೆಡೆಟ್ ಇವಳು.ಅವಳಿಗೆ ಹುಸೆನ್ ಕಳಗೊಂಡ್ ತರಬೇತಿ ನೀಡಿದ್ದಾರೆ ಎಂದು ಪ್ರಾಚಾರ್ಯ ಎಸ್.ಕೆ ಚನ್ನವೀರಗೌಡ್ರ ತಿಳಿಸಿದ್ದಾರೆ.

ಕಳೆದ ವರ್ಷ ಹಾವೇರಿ ಜಿಲ್ಲೆಯಿಂದ ಇಬ್ಬರು (ಹಂಸಭಾವಿ ಮತ್ತು ಕುಮಾರಪಟ್ಟಣ) ಆಯ್ಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT