<p><strong>ಗುತ್ತಲ:</strong> ಪಟ್ಟಣದಲ್ಲಿ ಜಲಮಮೂಲಗಳಾದ ಗೋಕಟ್ಟೆಕೆರೆ, ದೊಡ್ಡಹೊಂಡ ಮತ್ತು ಸಣ್ಣಹೊಂಡಗಳು ವಾರ್ಡ್ ಸದಸ್ಯರ ಮತ್ತು ಅಧ್ಯಕ್ಷೆ ಮಾಳವ್ವ ಗೊರವರ ಹಾಗೂ ಮುಖ್ಯಾಧಿಕಾರಿ ದೇವಾನಂದ ದೊಡ್ಮನಿ ಅವರ ನಿರ್ಲಕ್ಷ್ಯದಿಂದ ಪಾಳು ಬಿದ್ದಿವೆ ಎಂದು ಜನ ದೂರುತ್ತಿದ್ದಾರೆ.</p>.<p>ಈ ಹಿಂದೆ ಗೋಕಟ್ಟೆ ಕೆರೆ ಮತ್ತು ಹೊಂಡಗಳಲ್ಲಿ ಪ್ರತಿದಿನ ರೈತರು ಜಾನುವಾರುಗಳಿಗೆ ನೀರು ಕುಡಿಸುವುದು ಮತ್ತು ಅವುಗಳ ಮೈ ತೊಳೆಯುದು ಮಾಡುತ್ತಿದ್ದರು. ಮಹಿಳೆಯರು ಬಟ್ಟೆಯನ್ನು ತೊಳೆಯುತ್ತಿದ್ದರು.ಮುಖ್ಯಾಧಿಕಾರಿ ಮತ್ತು ಅಧ್ಯಕ್ಷೆ ಅಧಿಕಾರ ವಹಿಸಿಕೊಂಡಾಗಿಂದ ಹೊಂಡವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. </p>.<p>‘ಹೊಂಡ ಮತ್ತು ಕೆರೆ ಸ್ವಚ್ಛ ಮಾಡಿ ಜನರಿಗೆ ಬಳಕೆ ಮಾಡುವಂತೆ ಅವಕಾಶ ಮಾಡಿಕೊಡಿ ಎಂದು ಪಟ್ಟಣ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಮುಖ್ಯಾಧಿಕಾರಿ ಮತ್ತು ಅಧಕ್ಷರು ಸ್ಪಂದಿಸಿಲ್ಲ’ ಎಂದು ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಹಾಲೇಶ ಹಾಲಣ್ಣನವರ ಹೇಳಿದರು.</p>.<p>‘ಹೊಂಡದ ನೀರಿನ ಮೇಲೆ ಅಂತರಗಂಗೆ ಬೆಳೆದು ಸಂಪೂರ್ಣ ಮುಚ್ಚಿದೆ, ಆದರೂ ಪಂಚಾಯಿತಿಯವರು ಸ್ವಚ್ಛಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ಗೊಕಟ್ಟೆ ಮತ್ತು ಹೊಂಡದ ಸುತ್ತಮುತ್ತ ಬಾರಿ ಪ್ರಮಾಣದ ಸೊಳ್ಳೆಗಳು ಉತ್ಪತ್ತಿಯಾಗಿವೆ, ಅಲ್ಲಿ ವಾಸಿಸುವ ನಿವಾಸಿಗಳು ನರಕ ಯಾತನೆ ಅನುಭವಿಸುತ್ತಿದ್ದಾರೆ. ಸೊಳ್ಳೆಗಳ ಕಾಟದಿಂದ ಈ ಭಾಗಗಳಲ್ಲಿ ಡೆಂಗಿ ಜ್ವರಗಳಿಂದ ಮಕ್ಕಳು ಬಳಲುತ್ತಿದ್ದಾರೆ ಎಂದು ನಾಗರಾಜ ದಪ್ಪೇರ ಆರೋಪಿಸಿದರು.</p>.<p>ಪಟ್ಟಣದಲ್ಲಿ ತಿಪ್ಪೆಗುಂಡಿಗಳು ರಸ್ತೆಯ ಅಕ್ಕಪಕ್ಕದಲ್ಲಿ ನಾಯಿಕೊಡೆಯಂತೆ ಉತ್ಪತ್ತಿಯಾಗುತ್ತಿವೆ. ಹೊಂಡದ ಸುತ್ತಮುತ್ತ ವಾಸಿಸುತ್ತಿರುವ ಹಲವು ಮನೆಗಳಲ್ಲಿ ಮಕ್ಕಳು ಡೆಂಗಿ ಜ್ವರದಿಂದ ಬಳಲುತ್ತಿದ್ದಾರೆ. ಕೂಡಲೇ ಪಟ್ಟಣ ಪಂಚಾಯಿತಿಯವರು ಹೊಂಡ ಮತ್ತು ಕೆರೆ ಸ್ವಚ್ಛಗೊಳಿಸಿ ತಿಪ್ಪೆಗುಂಡಿಗಳನ್ನು ತೆರವುಗೊಳಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಜಾವಿದ ಹಾಲಗಿ ಆಗ್ರಹಿಸಿದ್ದಾರೆ.</p>.<div><blockquote>ಹೊಂಡವನ್ನು ಶೀಘ್ರದಲ್ಲಿ ಸ್ವಚ್ಛಗೊಳಿಸಲಾಗುವುದು. ಈಗಾಗಲೇ ಹಲವು ತಿಪ್ಪೆಗುಂಡಿಗಳನ್ನು ತೆರವುಗೊಳಿಸಲಾಗಿದೆ ಉಳಿದ ತಿಪ್ಪೆಗುಂಡಿಗಳನ್ನು ತೆರವುಗೊಳಿಸಲಾಗುವುದು</blockquote><span class="attribution">ದೇವಾನಂದ ದೊಡ್ಮನಿ ಮುಖ್ಯಾಧಿಕಾರಿ ಪಟ್ಟಣ ಪಂಚಾಯತಿ ಗುತ್ತಲ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುತ್ತಲ:</strong> ಪಟ್ಟಣದಲ್ಲಿ ಜಲಮಮೂಲಗಳಾದ ಗೋಕಟ್ಟೆಕೆರೆ, ದೊಡ್ಡಹೊಂಡ ಮತ್ತು ಸಣ್ಣಹೊಂಡಗಳು ವಾರ್ಡ್ ಸದಸ್ಯರ ಮತ್ತು ಅಧ್ಯಕ್ಷೆ ಮಾಳವ್ವ ಗೊರವರ ಹಾಗೂ ಮುಖ್ಯಾಧಿಕಾರಿ ದೇವಾನಂದ ದೊಡ್ಮನಿ ಅವರ ನಿರ್ಲಕ್ಷ್ಯದಿಂದ ಪಾಳು ಬಿದ್ದಿವೆ ಎಂದು ಜನ ದೂರುತ್ತಿದ್ದಾರೆ.</p>.<p>ಈ ಹಿಂದೆ ಗೋಕಟ್ಟೆ ಕೆರೆ ಮತ್ತು ಹೊಂಡಗಳಲ್ಲಿ ಪ್ರತಿದಿನ ರೈತರು ಜಾನುವಾರುಗಳಿಗೆ ನೀರು ಕುಡಿಸುವುದು ಮತ್ತು ಅವುಗಳ ಮೈ ತೊಳೆಯುದು ಮಾಡುತ್ತಿದ್ದರು. ಮಹಿಳೆಯರು ಬಟ್ಟೆಯನ್ನು ತೊಳೆಯುತ್ತಿದ್ದರು.ಮುಖ್ಯಾಧಿಕಾರಿ ಮತ್ತು ಅಧ್ಯಕ್ಷೆ ಅಧಿಕಾರ ವಹಿಸಿಕೊಂಡಾಗಿಂದ ಹೊಂಡವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. </p>.<p>‘ಹೊಂಡ ಮತ್ತು ಕೆರೆ ಸ್ವಚ್ಛ ಮಾಡಿ ಜನರಿಗೆ ಬಳಕೆ ಮಾಡುವಂತೆ ಅವಕಾಶ ಮಾಡಿಕೊಡಿ ಎಂದು ಪಟ್ಟಣ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಮುಖ್ಯಾಧಿಕಾರಿ ಮತ್ತು ಅಧಕ್ಷರು ಸ್ಪಂದಿಸಿಲ್ಲ’ ಎಂದು ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಹಾಲೇಶ ಹಾಲಣ್ಣನವರ ಹೇಳಿದರು.</p>.<p>‘ಹೊಂಡದ ನೀರಿನ ಮೇಲೆ ಅಂತರಗಂಗೆ ಬೆಳೆದು ಸಂಪೂರ್ಣ ಮುಚ್ಚಿದೆ, ಆದರೂ ಪಂಚಾಯಿತಿಯವರು ಸ್ವಚ್ಛಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ಗೊಕಟ್ಟೆ ಮತ್ತು ಹೊಂಡದ ಸುತ್ತಮುತ್ತ ಬಾರಿ ಪ್ರಮಾಣದ ಸೊಳ್ಳೆಗಳು ಉತ್ಪತ್ತಿಯಾಗಿವೆ, ಅಲ್ಲಿ ವಾಸಿಸುವ ನಿವಾಸಿಗಳು ನರಕ ಯಾತನೆ ಅನುಭವಿಸುತ್ತಿದ್ದಾರೆ. ಸೊಳ್ಳೆಗಳ ಕಾಟದಿಂದ ಈ ಭಾಗಗಳಲ್ಲಿ ಡೆಂಗಿ ಜ್ವರಗಳಿಂದ ಮಕ್ಕಳು ಬಳಲುತ್ತಿದ್ದಾರೆ ಎಂದು ನಾಗರಾಜ ದಪ್ಪೇರ ಆರೋಪಿಸಿದರು.</p>.<p>ಪಟ್ಟಣದಲ್ಲಿ ತಿಪ್ಪೆಗುಂಡಿಗಳು ರಸ್ತೆಯ ಅಕ್ಕಪಕ್ಕದಲ್ಲಿ ನಾಯಿಕೊಡೆಯಂತೆ ಉತ್ಪತ್ತಿಯಾಗುತ್ತಿವೆ. ಹೊಂಡದ ಸುತ್ತಮುತ್ತ ವಾಸಿಸುತ್ತಿರುವ ಹಲವು ಮನೆಗಳಲ್ಲಿ ಮಕ್ಕಳು ಡೆಂಗಿ ಜ್ವರದಿಂದ ಬಳಲುತ್ತಿದ್ದಾರೆ. ಕೂಡಲೇ ಪಟ್ಟಣ ಪಂಚಾಯಿತಿಯವರು ಹೊಂಡ ಮತ್ತು ಕೆರೆ ಸ್ವಚ್ಛಗೊಳಿಸಿ ತಿಪ್ಪೆಗುಂಡಿಗಳನ್ನು ತೆರವುಗೊಳಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಜಾವಿದ ಹಾಲಗಿ ಆಗ್ರಹಿಸಿದ್ದಾರೆ.</p>.<div><blockquote>ಹೊಂಡವನ್ನು ಶೀಘ್ರದಲ್ಲಿ ಸ್ವಚ್ಛಗೊಳಿಸಲಾಗುವುದು. ಈಗಾಗಲೇ ಹಲವು ತಿಪ್ಪೆಗುಂಡಿಗಳನ್ನು ತೆರವುಗೊಳಿಸಲಾಗಿದೆ ಉಳಿದ ತಿಪ್ಪೆಗುಂಡಿಗಳನ್ನು ತೆರವುಗೊಳಿಸಲಾಗುವುದು</blockquote><span class="attribution">ದೇವಾನಂದ ದೊಡ್ಮನಿ ಮುಖ್ಯಾಧಿಕಾರಿ ಪಟ್ಟಣ ಪಂಚಾಯತಿ ಗುತ್ತಲ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>