ಹಾವೇರಿ: ನಗರದ ಶಹರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್ಗಳ ಪರೆಡ್ ನಡೆಸಲಾಯಿತು.
ಡಿವೈಎಸ್ಪಿ ವಿಜಯಕುಮಾರ ಎಂ. ಸಂತೋಷ ಹಾಗೂ ಶಹರ ಠಾಣೆಯ ಸಿಪಿಐ ಪ್ರಲ್ಹಾದ ಚನ್ನಗಿರಿ ನೇತೃತ್ವದಲ್ಲಿ ಶಹರ ಠಾಣೆಯ ಸಿಬ್ಬಂದಿ ರೌಡಿಗಳ ಪಟ್ಟಿಯಲ್ಲಿದ್ದವರನ್ನು ಠಾಣೆಗೆ ಕರೆತಂದು ಪರೆಡ್ ನಡೆಸಿದರು.
ಡಿವೈಎಸ್ಪಿ ವಿಜಯಕುಮಾರ ಸಂತೋಷ ಅವರು ‘ಪ್ರತಿಯೊಬ್ಬ ರೌಡಿಗಳ ಮುಂದೆ ಮುಖಾಮುಖಿ ನಿಂತು, ಅವರಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಇನ್ನು ಮುಂದೆ ಯಾವುದೇ ರೀತಿಯ ಕ್ರಿಮಿನಲ್ ಪ್ರಕರಣದಲ್ಲಿ ನಿಮ್ಮ ಹೆಸರು ಕೇಳಿ ಬರದಂತೆ ಎಚ್ಚರಿಕೆಯಿಂದ ಉತ್ತಮ ಜೀವನ ನಡೆಸಿ ಎಂದು ಕಟ್ಟುನಿಟ್ಟಾಗಿ ತಿಳಿಸಿದರು.
ಶಹರ ಠಾಣೆಯ ಸಿಪಿಐ ಪ್ರಲ್ಹಾದ ಚನ್ನಗಿರಿ ಮಾತನಾಡಿ, ಹಾವೇರಿ ಶಹರ ಸೇರಿದಂತೆ ಸುತ್ತಮುತ್ತಲಿನ ಸುಮಾರು 50ಕ್ಕೂ ಅಧಿಕ ಗೂಂಡಾಗಳ ಪರೇಡ್ ನಡೆಸಲಾಗಿದ್ದು, ಅವರಿಗೆ ಎಚ್ಚರಿಕೆಯನ್ನು ಡಿವೈಎಸ್ಪಿ ನೀಡಿದ್ದಾರೆ. ಶಹರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಈ ಪರೇಡ್ ನಡೆಸಲಾಗಿದೆ ಎಂದರು.
ಶಹರ ಠಾಣೆಯ ಪಿಎಸ್ಐ ನಂದಿ, ಕ್ರೈಂ ವಿಭಾಗದ ಸಿಬ್ಬಂದಿ ಇದ್ದರು.