<p>ರಾಣೆಬೆನ್ನೂರು: ‘ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಕ್ಕಳ ದೈಹಿಕ ಮತ್ತು ಭೌತಿಕ ಸಾಮರ್ಥ್ಯ ಹೆಚ್ಚಾಗುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಹೇಳಿದರು.</p>.<p>ತಾಲ್ಲೂಕಿನ ಮೇಡ್ಲೇರಿ ಬೀರೇಶ್ವರ ಪ್ರೌಢ ಶಾಲೆ ಕ್ರೀಡಾಂಗಣದಲ್ಲಿ ಹಾಲುಮತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾಯೋಜಿತ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಪಾರಿವಾಳಗಳನ್ನು ತೂರುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಪ್ರಭಾಕರ ಚಿಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಎಲ್.ಎಲ್.ಹರಿಹರ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಸವಣ್ಣೆವ್ವ ಮಾಳಗಿ, ಉಪಾಧ್ಯಕ್ಷ ಲಮಾಣಿ ಅವರು ಕ್ರೀಡಾಜ್ಯೋತಿಯನ್ನು ಸ್ವಾಗತಿಸಿದರು.</p>.<p>ಪ್ರಕಾಶ ಕೊಕ್ಕನವರ ಒಲಂಪಿಕ್ ಧ್ವಜಾರೋಹಣ ನೆರವೇರಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ವಿ.ವಿ.ಕಡ್ಲಿಗೊಂದಿ ಅವರು ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.</p>.<p>ಕ್ಷೇತ್ರ ಸಮನ್ವಯಾಧಿಕಾರಿ ಮಂಜು ನಾಯಕ, ಬಿಆರ್ಪಿ ನಾಗರಾಜ, ಸಿಆರ್ಪಿ ಗಿರೀಶ ರಾಠೋಡ, ಪ್ರಭಾರ ಮುಖ್ಯ ಶಿಕ್ಷಕಿ ಅನ್ನಪೂರ್ಣ ಚವ್ವಾಣ, ಆರ್.ಡಿ.ಹೊಂಬರಡಿ, ಲಕ್ಕಪ್ಪ ಕುದರಿಹಾಳ, ಹುಚ್ಚಪ್ಪ ಬಿಂಗೇರ, ಎಸ್.ಎಚ್. ಮೇಟಿ, ಸರಳಾ ಮೇಟಿ, ನಿರ್ಮಲಾ ಹಿರೇಮಠ ಸೇರಿದಂತೆ ಅನೇಕರು ಇದ್ದರು.</p>.<p>ದೈಹಿಕ ಶಿಕ್ಷಣ ಶಿಕ್ಷಕರಾದ ಡಿ.ಎನ್.ಬೇವಿನಹಳ್ಳಿ, ಸಿ.ಎಲ್.ಶಿಡಗನಾಳ, ಎಂ.ಎಂ.ಕೂರಗುಂದ, ಎಂ.ಸಿ.ಬಲ್ಲೂರ, ಸುರೇಶ ಚಳಗೇರಿ, ವಿಮಲಾ ಶಿಡಗನಾಳ, ತಂಗೋಡ, ಶರೀಪ ಉದಗಟ್ಟಿ, ಅನ್ನಪೂರ್ಣ ಬಣಕಾರ ನಿರ್ಣಾಯಕರಾಗಿದ್ದರು.</p>.<p>ಎಚ್ಪಿಎಸ್. ಬೇಲೂರ, ಎಚ್ಪಿಎಸ್ ಅಂಕಸಾಪುರ, ಕೆಜಿಎಸ್ ಮೇಡ್ಲೇರಿ, ಎಂ.ಸಿ.ಎಸ್ ಮೇಡ್ಲೇರಿ, ಎಚ್ಪಿಎಸ್ ಉದಗಟ್ಟಿ, ವಿವೇಕಾನಂದ ಎಚ್ಪಿಎಸ್, ಹಾಲುಮತ ಎಚ್ಪಿಎಸ್ ಸ್ಕೂಲ್, ಎಚ್.ಪಿಎಸ್. ಹೀಲದಹಳ್ಳಿ ಶಾಲೆ ಕ್ರೀಡಾಪಟುಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಣೆಬೆನ್ನೂರು: ‘ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಕ್ಕಳ ದೈಹಿಕ ಮತ್ತು ಭೌತಿಕ ಸಾಮರ್ಥ್ಯ ಹೆಚ್ಚಾಗುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಹೇಳಿದರು.</p>.<p>ತಾಲ್ಲೂಕಿನ ಮೇಡ್ಲೇರಿ ಬೀರೇಶ್ವರ ಪ್ರೌಢ ಶಾಲೆ ಕ್ರೀಡಾಂಗಣದಲ್ಲಿ ಹಾಲುಮತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾಯೋಜಿತ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಪಾರಿವಾಳಗಳನ್ನು ತೂರುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಪ್ರಭಾಕರ ಚಿಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಎಲ್.ಎಲ್.ಹರಿಹರ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಸವಣ್ಣೆವ್ವ ಮಾಳಗಿ, ಉಪಾಧ್ಯಕ್ಷ ಲಮಾಣಿ ಅವರು ಕ್ರೀಡಾಜ್ಯೋತಿಯನ್ನು ಸ್ವಾಗತಿಸಿದರು.</p>.<p>ಪ್ರಕಾಶ ಕೊಕ್ಕನವರ ಒಲಂಪಿಕ್ ಧ್ವಜಾರೋಹಣ ನೆರವೇರಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ವಿ.ವಿ.ಕಡ್ಲಿಗೊಂದಿ ಅವರು ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.</p>.<p>ಕ್ಷೇತ್ರ ಸಮನ್ವಯಾಧಿಕಾರಿ ಮಂಜು ನಾಯಕ, ಬಿಆರ್ಪಿ ನಾಗರಾಜ, ಸಿಆರ್ಪಿ ಗಿರೀಶ ರಾಠೋಡ, ಪ್ರಭಾರ ಮುಖ್ಯ ಶಿಕ್ಷಕಿ ಅನ್ನಪೂರ್ಣ ಚವ್ವಾಣ, ಆರ್.ಡಿ.ಹೊಂಬರಡಿ, ಲಕ್ಕಪ್ಪ ಕುದರಿಹಾಳ, ಹುಚ್ಚಪ್ಪ ಬಿಂಗೇರ, ಎಸ್.ಎಚ್. ಮೇಟಿ, ಸರಳಾ ಮೇಟಿ, ನಿರ್ಮಲಾ ಹಿರೇಮಠ ಸೇರಿದಂತೆ ಅನೇಕರು ಇದ್ದರು.</p>.<p>ದೈಹಿಕ ಶಿಕ್ಷಣ ಶಿಕ್ಷಕರಾದ ಡಿ.ಎನ್.ಬೇವಿನಹಳ್ಳಿ, ಸಿ.ಎಲ್.ಶಿಡಗನಾಳ, ಎಂ.ಎಂ.ಕೂರಗುಂದ, ಎಂ.ಸಿ.ಬಲ್ಲೂರ, ಸುರೇಶ ಚಳಗೇರಿ, ವಿಮಲಾ ಶಿಡಗನಾಳ, ತಂಗೋಡ, ಶರೀಪ ಉದಗಟ್ಟಿ, ಅನ್ನಪೂರ್ಣ ಬಣಕಾರ ನಿರ್ಣಾಯಕರಾಗಿದ್ದರು.</p>.<p>ಎಚ್ಪಿಎಸ್. ಬೇಲೂರ, ಎಚ್ಪಿಎಸ್ ಅಂಕಸಾಪುರ, ಕೆಜಿಎಸ್ ಮೇಡ್ಲೇರಿ, ಎಂ.ಸಿ.ಎಸ್ ಮೇಡ್ಲೇರಿ, ಎಚ್ಪಿಎಸ್ ಉದಗಟ್ಟಿ, ವಿವೇಕಾನಂದ ಎಚ್ಪಿಎಸ್, ಹಾಲುಮತ ಎಚ್ಪಿಎಸ್ ಸ್ಕೂಲ್, ಎಚ್.ಪಿಎಸ್. ಹೀಲದಹಳ್ಳಿ ಶಾಲೆ ಕ್ರೀಡಾಪಟುಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>